ಆ್ಯಪ್ನಗರ

ನಿಯಮ ಪಾಲಿಸಿ, ಶಾಂತಿಯುತವಾಗಿ ಹಬ್ಬ ಆಚರಿಸಿ

ಗಣೇಶ ಹಬ್ಬವನ್ನು ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಆಚರಿಸುವ ಜತೆಗೆ ನಿಯಮಗಳನ್ನು ಪಾಲಿಸಬೇಕು ಎಂದು ವಿರಾಜಪೇಟೆ ವೃತ್ತ ನಿರೀಕ್ಷಕ ಶಾಂತಮಲ್ಲಪ್ಪ ಹೇಳಿದರು.

ವಿಕ ಸುದ್ದಿಲೋಕ 21 Aug 2016, 5:15 am
ವಿರಾಜಪೇಟೆ: ಗಣೇಶ ಹಬ್ಬವನ್ನು ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಆಚರಿಸುವ ಜತೆಗೆ ನಿಯಮಗಳನ್ನು ಪಾಲಿಸಬೇಕು ಎಂದು ವಿರಾಜಪೇಟೆ ವೃತ್ತ ನಿರೀಕ್ಷಕ ಶಾಂತಮಲ್ಲಪ್ಪ ಹೇಳಿದರು.
Vijaya Karnataka Web rule peacefully celebrate festival
ನಿಯಮ ಪಾಲಿಸಿ, ಶಾಂತಿಯುತವಾಗಿ ಹಬ್ಬ ಆಚರಿಸಿ


ಪಟ್ಟಣದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪುರಭವನದಲ್ಲಿ ನಡೆದ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಗಣಪತಿ ಮೆರವಣಿಗೆಯಲ್ಲಿ ನಿಯಮ ಪಾಲಿಸಬೇಕು. ಕಾನೂನು ಸುವ್ಯವಸ್ಥೆಗೆ ತೊಂದರೆಯಾದರೆ ಯಾವುದೇ ಸಮಿತಿ ಪದಾಧಿಕಾರಿಗಳಿಂದ ಸಮಸ್ಯೆಯಾದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಾಹನ ವ್ಯವಸ್ಥೆ: ಜನರ ಕೋರಿಕೆಯಂತೆ ಗಣೇಶ ವಿಸರ್ಜನೆಗೆ ಅನುಕೂಲ ಮಾಡಿಕೊಡಲಾಗಿದೆ. ಚಿಕ್ಕಪೇಟೆಯಲ್ಲಿ ವಾಹನ ನಿಲುಗಡೆ ಮಾಡಿ ನಡೆದು ಬರುವವರಿಗೆ ತೊಂದರೆ ತಪ್ಪಿಸಲು ಇಲಾಖೆ ಒಂದು ಶಾಲ ವಾಹನ ಬಳಕೆಗೆ ಅವಕಾಶ ನೀಡುತ್ತಿದೆ, ಈ ಬಾರಿ ಒಂದು ಶಾಲ ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಸಮಸ್ಯೆಗಳಿಗೆ ಎಡೆ ಮಾಡಿಕೊಡದೇ ಸಂತಸದಿಂದ ಹಾಗೂ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ ಎಂದರು.

ಡಿವೈಎಸ್‌ಪಿ ನಾಗಪ್ಪ ಮಾತನಾಡಿ, ವಿರಾಜಪೇಟೆ ಕಾನೂನು ಸುವೆವಸ್ಥೆಯಲ್ಲಿ ಸೂಕ್ಷ್ಮ ಎಂದು ಗುರುತಿಸಿಕೊಂಡಿದ್ದರು, ಇತ್ತೀಚಿನ ಕೆಲವು ಘಟನೆ ನಡೆದರೂ ಶಾಂತಿ ಕಾದುಕೊಂಡು ಬಂದಿದೆ. ಆದರೆ ಇಲಾಖೆಯ ದಷ್ಟಿಯಲ್ಲಿ ಸೂಕ್ಷ್ಮ ಪ್ರದೇಶ ಜತೆಗೆ ಗಣೇಶೋತ್ಸವ ಸಂದರ್ಭದಲ್ಲಿ ಎಲ್ಲಾ ಕಡೆ ಸಣ್ಣ ಪುಟ್ಟ ಗಲಾಟೆ ನಡೆಯುತ್ತದೆ ಇದನ್ನೂ ತಪ್ಪಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಆದರೆ ಗಣೇಶ ಹಬ್ಬವನ್ನು ಎಲ್ಲರೂ ಸೌರ್ಹಾದತೆ ಹಾಗೂ ಉತ್ತಮ ಬಾಂಧವ್ಯದೊಂದಿಗೆ ಹಬ್ಬ ಆಚರಿಸಬೇಕು ಎಂದು ಹೇಳಿದರು.

ನಗರ ಠಾಣಾಧಿಕಾರಿ ಸುಬ್ರಮಣಿ ಮಾತನಾಡಿ, ಇಲಾಖೆಯ ನಿಯಮಾವಳಿ ಪತ್ರವನ್ನು ಸಮಿತಿಯವರಿಗೆ ನೀಡಲಾಗಿದ್ದು ಅದನ್ನು ಪಾಲಿಸಿ. ಮುಖ್ಯವಾಗಿ ಡಿ.ಜೆ ಹಾಗೂ ಲೇಸರ್ ಲೈಟ್ ಪ್ರದರ್ಶನಕ್ಕೆ ಅವಕಾಶವಿಲ್ಲ. ಸಮಿತಿಯವರು ತಮ್ಮ ಕಾರ‌್ಯಕ್ರಮಗಳ ಮಾಹಿತಿ ಇಲಾಖೆಗೆ ನೀಡಿ ಸಹಕರಿಸಬೇಕು. ಅಯಾ ಸಮಿತಿಯವರು ಗಣೇಶನನ್ನು ಪ್ರತಿಷ್ಠಾಪಿಸುವ ಮಂಟಪವನ್ನು ಅಗ್ನಿಶಾಮಕ ದಳದವರಿಂದ ಪರಿಶೀಲನೆ ಮಾಡಿ ಪ್ರಮಾಣ ಪತ್ರ ಪಡೆಯಬೇಕು.ರಾತ್ರಿ 10ರೊಳಗೆ ಕಾರ‌್ಯಕ್ರಮ ಮುಗಿಸಿ ಇಲಾಖೆ ಜತೆ ಸಹಕರಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕಷ್ಣ ಪ್ರಸಾದ, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಾದ ಮಂಜುನಾಥ್, ಟಿ.ಪಿ. ಕಷ್ಣ, ದಿವಾಕರ ಶೆಟ್ಟಿ, ಕೇಶವ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ