ಆ್ಯಪ್ನಗರ

ಡಿ.19ಕ್ಕೆ ರೂಪೇಶ್‌ ವಿಚಾರಣೆ ಮುಂದೂಡಿಕೆ

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿದಾಖಲಾಗಿರುವ 2 ಪ್ರತ್ಯೇಕ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾದ ಶಂಕಿತ ನಕ್ಸಲ್‌ ರೂಪೇಶ್‌ನ ಮುಂದಿನ ವಿಚಾರಣೆಯನ್ನು ಮಡಿಕೇರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯ ಡಿ.19 ಕ್ಕೆ ಮುಂದೂಡಿದೆ.

Vijaya Karnataka 16 Nov 2019, 5:00 am
ಮಡಿಕೇರಿ: ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿದಾಖಲಾಗಿರುವ 2 ಪ್ರತ್ಯೇಕ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾದ ಶಂಕಿತ ನಕ್ಸಲ್‌ ರೂಪೇಶ್‌ನ ಮುಂದಿನ ವಿಚಾರಣೆಯನ್ನು ಮಡಿಕೇರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯ ಡಿ.19 ಕ್ಕೆ ಮುಂದೂಡಿದೆ.
Vijaya Karnataka Web rupesh inquiry
ಡಿ.19ಕ್ಕೆ ರೂಪೇಶ್‌ ವಿಚಾರಣೆ ಮುಂದೂಡಿಕೆ


ಕೊಡಗಿನಲ್ಲಿಮಾವೋವಾದಿ ಚಟುವಟಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್‌ ಮುಖಂಡ ರೂಪೇಶ್‌ನನ್ನು ವಿಚಾರಣೆಗಾಗಿ ಗುರುವಾರ ಮಡಿಕೇರಿಗೆ ಕರೆತರಲಾಗಿತ್ತು. ಮೂರು ಗಂಟೆಗಳ ಕಾಲ ನಕ್ಸಲ್‌ ಪ್ರಕರಣದ ಕುರಿತು ರೂಪೇಶ್‌ ವಿಚಾರಣೆ ಎದುರಿಸಿದ. ನಕ್ಸಲ್‌ ಪ್ರಕರಣದ ಕುರಿತು ರೂಪೇಶ್‌ ವಿರುದ್ಧ ದೂರು ದಾಖಲಿಸಿದ್ದ ಅಂದಿನ ನಾಪೋಕ್ಲುಠಾಣೆಯ ಅಂದಿನ ಉಪ ನಿರೀಕ್ಷಕ ಷಣ್ಮುಗ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ವಿಚಾರಿಸಿದರು.

ತನ್ನ ಪರ ಪ್ರಕರಣದ ಕುರಿತು ತಾನೇ ವಾದ ಮಂಡಿಸಿದ ರೂಪೇಶ್‌ ಪೊಲೀಸ್‌ ಅಧಿಕಾರಿ ಷಣ್ಮುಗ ಅವರನ್ನು ಪ್ರಶ್ನೆ ಕೇಳಿದ. ಸರಕಾರಿ ವಕೀಲ ಸರಕಾರದ ಪರ ವಾದ ಮಂಡಿಸಿದರು. ಬಳಿಕ ಮುಂದಿನ ವಿಚಾರಣೆಯನ್ನು ನ್ಯಾಯಧೀಶರು ಡಿ.19ಕ್ಕೆ ಮುಂದೂಡಿ ಆದೇಶ ನೀಡಿದರು. ಮುಂದಿನ ವಿಚಾರಣೆಗೆ ಬರುವಾಗ ಸಂಕಿಪ್ತವಾಗಿ ವಾದ ಮಂಡಿಸಲು ಸಿದ್ಧತೆ ಮಾಡಿಕೊಂಡು ಬರಬೇಕು, ನ್ಯಾಯಾಲಯದ ಕಾಲಹರಣ ಮಾಡಬಾರದು ಎಂದು ಆರೋಪಿಗೆ ಸೂಚಿಸಿದರು.

ರೂಪೇಶ್‌ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿನಕ್ಸಲ್‌ ಚಟುವಟಿಕೆಗಳಲ್ಲಿಪಾಲ್ಗೊಂಡಿರುವ ಬಗ್ಗೆ ಆರೋಪಗಳಿವೆ. 2010ರಲ್ಲಿಭಾಗಮಂಡಲ ಸಮೀಪದ ಮುಂಡ್ರೋಟು ಮತ್ತು 2013ರಲ್ಲಿಕಾಲೂರು ಗ್ರಾಮದಲ್ಲಿಈತ ಪ್ರತ್ಯಕ್ಷನಾಗಿದ್ದ ಎನ್ನಲಾಗಿದೆ. ಮಾತ್ರವಲ್ಲದೆ ಕಾಲೂರಿನ ನಿವಾಸಿ ಗಣೇಶ್‌ ಎಂಬುವವರ ಮನೆಗೆ ನುಗ್ಗಿ ಪಡಿತರ ಸಾಮಗ್ರಿ ಹೊತ್ತೊಯ್ದಿರುವುದು ಮತ್ತು ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ2 ಪ್ರತ್ಯೇಕ ಪ್ರಕರಣಗಳೂ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ