ಆ್ಯಪ್ನಗರ

ಸಾಹಿತ್ಯ ಪರಿಷತ್‌ ಪ್ರವಾಸಕ್ಕೆ ಚಾಲನೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿರುವ ಸಾಹಿತ್ಯ ಪ್ರವಾಸಕ್ಕೆ ಕಸಾಪದ ಹಿರಿಯ ಸದಸ್ಯ ಬಿ. ಆರ್‌. ನಾಗೇಂದ್ರ ಪ್ರಸಾದ್‌ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚಾಲನೆ ನೀಡಿದರು.

Vijaya Karnataka Web 3 Jan 2019, 5:00 am
ಕುಶಾಲನಗರ
Vijaya Karnataka Web sahitya parishat tour started
ಸಾಹಿತ್ಯ ಪರಿಷತ್‌ ಪ್ರವಾಸಕ್ಕೆ ಚಾಲನೆ


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿರುವ ಸಾಹಿತ್ಯ ಪ್ರವಾಸಕ್ಕೆ ಹಿರಿಯ ಸದಸ್ಯ ಬಿ. ಆರ್‌. ನಾಗೇಂದ್ರ ಪ್ರಸಾದ್‌ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚಾಲನೆ ನೀಡಿದರು.

ಕೊಡಗು ಜಿಲ್ಲಾ ಕಸಾಪ, ಶಿವಮೊಗ್ಗ ಜಿಲ್ಲಾ ಕಸಾಪದ ಸಹಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ಹೇಮಾಂಗಣದಲ್ಲಿ ಆಯೋಜಿಸಲಾಗಿರುವ ಮಲೆನಾಡಿನ ಭಾವಸಂಗಮ ಕವಿಗೋಷ್ಠಿಯಲ್ಲಿ ಭಾಗವಹಿಸಲಿರುವ ಈ 40 ಮಂದಿಯ ಪ್ರವಾಸಿ ತಂಡ ನಂತರ ಧಾರವಾಡದಲ್ಲಿ ನಡೆಯುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದೆ.

ಕಸಾಪದ ಜಿಲ್ಲಾ ಅಧ್ಯಕ್ಷ ಲೋಕೇಶ್‌ ಸಾಗರ್‌, ಕಾರ್ಯದರ್ಶಿ ಕೆ. ಎಸ್‌. ರಮೇಶ್‌, ಎನ್‌. ಎ. ಅಶ್ವತ್ಥ್‌ಕುಮಾರ್‌, ಕೋಶಾಧ್ಯಕ್ಷ ಎಸ್‌.ಎ. ಮುರಳಿಧರ್‌, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್‌ ಸಂತೋಷ್‌, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ವಿಜೇತ, ಕುಶಾಲನಗರ ಹೋಬಳಿ ಅಧ್ಯಕ್ಷ ರಂಗಸ್ವಾಮಿ, ಶನಿವಾರ ಸಂತೆ ಹೋಬಳಿ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಸೇರಿ ಜಿಲ್ಲೆಯ ಸಾಹಿತ್ಯ ಆಸಕ್ತರು ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ