ಆ್ಯಪ್ನಗರ

19ರಂದು ಸಮ್ಮಿಲನ ಕಾರ್ಯಕ್ರಮ

ವಿದ್ಯೆ ಕಲಿಸಿದ ಗುರುಗಳನ್ನು ಬಹಳಷ್ಟು ವರ್ಷಗಳ ನಂತರ ಗೌರವಿಸುವ ಮತ್ತು ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಡಿ.19ರಂದು ಜಿಎಂಪಿ ಶಾಲಾ ಮೈದಾನದಲ್ಲಿ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ಡೆನಿಸ್‌ ಡಿ'ಸೋಜ ಹೇಳಿದರು.

Vijaya Karnataka 16 Dec 2018, 8:49 pm
ಸುಂಟಿಕೊಪ್ಪ: ವಿದ್ಯೆ ಕಲಿಸಿದ ಗುರುಗಳನ್ನು ಬಹಳಷ್ಟು ವರ್ಷಗಳ ನಂತರ ಗೌರವಿಸುವ ಮತ್ತು ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಡಿ.19ರಂದು ಜಿಎಂಪಿ ಶಾಲಾ ಮೈದಾನದಲ್ಲಿ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ಡೆನಿಸ್‌ ಡಿ'ಸೋಜ ಹೇಳಿದರು.
Vijaya Karnataka Web sammilana program on 19th
19ರಂದು ಸಮ್ಮಿಲನ ಕಾರ್ಯಕ್ರಮ


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಜಿಲ್ಲೆ, ರಾಜ್ಯ ಮತ್ತು ಹೊರದೇಶದಲ್ಲಿರುವ ಸ್ನೇಹಿತರನ್ನು ಜತೆಗೂಡಿಸುವ ಸಣ್ಣ ಪ್ರಯತ್ನ ನಮ್ಮದಾಗಿದೆ,'' ಎಂದರು.

ಸಂಘದ ಖಜಾಂಚಿ ಆರ್‌.ಎಚ್‌. ಶರೀಫ್‌ ಮಾತನಾಡಿ, ''ಈಗಾಗಲೇ ನಾವು ಎಲ್ಲ ಶಿಕ್ಷ ಕರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿದ್ದೇವೆ. ಹೆಚ್ಚಿನ ಶಿಕ್ಷ ಕರು ಆಗಮಿಸಲಿದ್ದಾರೆ. ಹಾಗೆಯೇ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಆಗಮಿಸಿ ಯಶಸ್ವಿಗೊಳಿಸಬೇಕು,'' ಎಂದರು.

ಸಿ.ಎಂ.ಮಹಮ್ಮದ್‌ ಶರೀಫ್‌ ಮಾತನಾಡಿ, ''ಮಧ್ಯಾಹ್ನ 2.30ಕ್ಕೆ ಸರಿಯಾಗಿ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು, ಸಮಯಕ್ಕೆ ಸರಿಯಾಗಿ ಆಗಮಿಸಬೇಕು ಎಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ ಮೊ: 8904040640 ಸಂಪರ್ಕಿಸಿ,'' ಎಂದು ಹೇಳಿದರು.

ಅಧ್ಯಕ್ಷ ಸುನಿಲ್‌, ಉಪಾಧ್ಯಕ್ಷ ಅಬ್ದುಲ್‌ ರಜಾಕ್‌, ನಿರಂಜನ್‌,ಮಹಮ್ಮದ್‌ ಆಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ