ಆ್ಯಪ್ನಗರ

ಸಂಸ್ಕೃತಿ ಉಳಿಸಿ, ಬೆಳೆಸುವ ಅಗತ್ಯವಿದೆ

ವಿರಾಜಪೇಟೆ: ದೇಶದ ಸಂಸ್ಕೃತಿ ಅಚಾರ-ವಿಚಾರಗಳು ಉತ್ತಮವಾಗಿದ್ದು, ಅವುಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಟಿ.ಎಂ.ನಾಗರಾಜ ಹೇಳಿದರು.

ವಿಕ ಸುದ್ದಿಲೋಕ 14 Aug 2016, 4:04 am
ವಿರಾಜಪೇಟೆ: ದೇಶದ ಸಂಸ್ಕೃತಿ ಅಚಾರ-ವಿಚಾರಗಳು ಉತ್ತಮವಾಗಿದ್ದು, ಅವುಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಟಿ.ಎಂ.ನಾಗರಾಜ ಹೇಳಿದರು.
Vijaya Karnataka Web save the culture you need to cultivate
ಸಂಸ್ಕೃತಿ ಉಳಿಸಿ, ಬೆಳೆಸುವ ಅಗತ್ಯವಿದೆ


ವೀರಾಜಪೇಟೆ ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಸಭಾಣಗಣದಲ್ಲಿ ಕಕ್ಕಡ ಸಂತೋಷ ಕೂಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘದ ಸದಸ್ಯರುಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಕೊಡಗಿನ ಪರಿಸರ ನೋಡಿದರೆ ಹೊರ ಜಿಲ್ಲೆ, ರಾಜ್ಯದಿಂದ ಬರುವವರ ಮನಸೆಳೆಯುತ್ತಿದೆ. ಹಾಗೆ ಕೊಡಗಿನ ಸಂಸ್ಕೃತಿ, ಅಚಾರ-ವಿಚಾರಗಳು ಕೆಸರುಗದ್ದೆ ಓಟ ತುಂಬ ಮೆಚ್ಚಿಗೆ ಪಡುವಂತಹ ಕ್ರೀಡೆಯಾಗಿದ್ದು, ಮುಂದೆಯೂ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ನ್ಯಾಯಾದೀಶ ನಾಗರಾಜ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾದೀಶರಾದ ಡಿ.ಆರ್.ಜಯಪ್ರಕಾಶ್ ಮಾತನಾಡಿ, ವಕೀಲರ ಸಂಘದ ಸದಸ್ಯರುಗಳು ತಮ್ಮ ವತ್ತಿಯೋಂದಿಗೆ ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಉತ್ತಮ ಕಾರ್ಯ. ಸಾಧನೆ ಮಾಡಿದವರನ್ನು ಪ್ರೊತ್ಸಾಹಿಸುವುದು ಸಂಪ್ರದಾಯ. ಮುಂದೆಯೂ ಹೆಚ್ಚಿನ ಸಾಧನೆ ಮಾಡಲು ಸಹಕಾರ ನೀಡಿದಂತಾಗುತ್ತದೆ ಎಂದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರಾಗಿರುವ ವಕೀಲ ಕೆ.ಎನ್.ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ವಕೀಲ ಎನ್.ಕಿರಣ್ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ವಕೀಲ ಎನ್.ಎಸ್.ಪ್ರಶಾಂತ್, ರಾಜ್ಯ ಸರಕಾರದ ನೋಟರಿಯ ವಕೀಲ ಎಂ.ಎಸ್.ವೆಂಕಟೇಶ್, ಭಾರತ ಸರಕಾರದ ನೋಟರಿಯ ಎಂ.ಎಸ್.ಕಾಶಿಯಪ್ಪ ಅವರುಗಳಿಗೆ ಗೌರವಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್, ಉಪಾಧ್ಯಕ್ಷ ವಿ.ಜಿ.ರಾಕೇಶ್, ಸಿವಿಲ್ ನ್ಯಾಯಾದೀಶರಾದ ಶರ್ಮಿಳಾ ಕಾಮತ್, ಸಂಘದ ಕಾರ್ಯದರ್ಶಿ ಬಿ.ಎನ್.ಸುಬ್ಬಯ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ