ಆ್ಯಪ್ನಗರ

ಓಂಕಾರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್‌

ನಗರದ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪುಲಿಯಂಡ ಕ.ಎ ಜಗದೀಶ್‌ ಅವರು ಆಯ್ಕೆಯಾಗಿದ್ದಾರೆ.

Vijaya Karnataka 24 May 2018, 5:00 am
ಮಡಿಕೇರಿ: ನಗರದ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪುಲಿಯಂಡ ಕ.ಎ ಜಗದೀಶ್‌ ಅವರು ಆಯ್ಕೆಯಾಗಿದ್ದಾರೆ.
Vijaya Karnataka Web selected to omkareshwara temple committee
ಓಂಕಾರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್‌


ವ್ಯವಸ್ಥಾಪನಾ ಸಮಿತಿಯ 9 ಮಂದಿ ಸದಸ್ಯರ ಸಭೆ ಬುಧವಾರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ಪುಲಿಯಂಡ ಕೆ.ಜಗದೀಶ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಸಮಿತಿ ಮುಂದಿನ ಮೂರು ವರ್ಷಗಳ ತನಕ ಅಧಿಕಾರದಲ್ಲಿರುತ್ತದೆ.

ಈಗಾಗಲೇ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕರು, ಹೊಸ ಬಡಾವಣೆಯ ಪಿ.ಎಚ್‌.ಸೀತಾ ಚಿಕ್ಕಣ್ಣ, ಕನ್ನಂಡ ಬಾಣೆಯ ಕನ್ನಂಡ ಕವಿತಾ ಕಾವೇರಮ್ಮ, ಗೌಳಿ ಬೀದಿಯ ಯು.ಸಿ. ದಮಯಂತಿ, ದೇಚೂರಿನ ಪುಲಿಯಂಡ ಕೆ.ಜಗದೀಶ್‌, ಮಹದೇವಪೇಟೆಯ ಟಿ.ಎಚ್‌.ಉದಯಕುಮಾರ್‌, ಪೆನ್‌ಷನ್‌ಲೇನ್‌ನ ಎ.ಎಚ್‌.ಪ್ರಕಾಶ್‌ ಆಚಾರ್ಯ, ಕಾವೇರಿ ಬಡಾವಣೆಯ ಕೆ.ಎ.ಆನಂದ, ಗೌಳಿಬೀದಿಯ ಸುನೀಲ್‌ ಕುಮಾರ್‌ ಅವರನ್ನು ್ನ ಸಮಿತಿ ಸದಸ್ಯರಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ನೇಮಿಸಿತ್ತು. ಇದೀಗ ಜಗದೀಶ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ