ಆ್ಯಪ್ನಗರ

ಗೋಣಿಕೊಪ್ಪ: ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿ ಸೆರೆಗೆ ವಿಶೇಷ ತಂಡ

ಶ್ರೀಮಂಗಲ ಸಮೀಪದ ಟಿ.ಶೆಟ್ಟಿಗೇರಿಯಲ್ಲಿ ಹುಲಿ ಸೆರೆ ಹಿಡಿಯಲು ವಿಶೇಷ ತಂಡ ಬೀಡುಬಿಟ್ಟಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ, ಶೀಘ್ರವೇ ಹುಲಿ ಹಿಡಿಯಲು ಕ್ರಮಕೈಗೊಳ್ಳಿ ಎಂದು ಜಿಲ್ಲಾ ಪ್ರಧಾನ ಅರಣ್ಯಾಧಿಕಾರಿ ಹಿರಲಾಲ್‌ ಅವರಿಗೆ ಸೂಚಿಸಿದರು.

Vijaya Karnataka Web 23 Feb 2021, 8:16 pm
ಗೋಣಿಕೊಪ್ಪ: ಎರಡು ಜೀವಗಳ ಬಲಿ ಪಡೆದ ನರಹಂತಕ ಹುಲಿ ಸೆರೆಗೆ ವಿಶೇಷ ತಂಡ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಮಳೆಯ ಕಾರಣದಿಂದಾಗಿ ಹೆಜ್ಜೆ ಗುರುತು ಸಿಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಶ್ರೀಮಂಗಲ ಸಮೀಪದ ಟಿ.ಶೆಟ್ಟಿಗೇರಿಯಲ್ಲಿ ಹುಲಿ ಸೆರೆ ಹಿಡಿಯಲು ವಿಶೇಷ ತಂಡ ಬೀಡುಬಿಟ್ಟಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ, ಶೀಘ್ರವೇ ಹುಲಿ ಹಿಡಿಯಲು ಕ್ರಮಕೈಗೊಳ್ಳಿ ಎಂದು ಜಿಲ್ಲಾ ಪ್ರಧಾನ ಅರಣ್ಯಾಧಿಕಾರಿ ಹಿರಲಾಲ್‌ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ''ಮಳೆಯಿಂದ ಹೆಜ್ಜೆ ಗುರುತು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಅತೀ ಶೀಘ್ರದಲ್ಲಿ ನರಹಂತಕ ಹುಲಿಯನ್ನು ಹಿಡಿಯಲಾಗುವುದು''ಎಂದು ತಿಳಿಸಿದರು.

ಮಹಾಶಕ್ತಿ ಕೇಂದ್ರ ಪ್ರಮುಖ್‌ ಮಚ್ಚಮಾಡ ಮುರುಳಿ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮದುದೇವಯ್ಯ, ಅರಣ್ಯಾಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ