ಆ್ಯಪ್ನಗರ

ಕ್ಷುಲ್ಲಕ ಕಾರಣಕ್ಕೆ ಗುಂಡಿನ ದಾಳಿ: ಯುವಕನಿಗೆ ಗಾಯ

​​ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದ್ದು, ಯುವಕ ತೀವ್ರ ಗಾಯಗೊಂಡಿದ್ದಾನೆ. ಕಾನ್ವೆಂಟ್‌ ಬಾಣೆ ನಿವಾಸಿ ಸುಜಿತ್‌ ಗಾಯಗೊಂಡ ಯುವಕ. ಸೋಮವಾರಪೇಟೆಯ ಕಾನ್ವೆಂಟ್‌ ಬಾಣೆಯಲ್ಲಿಈ ಘಟನೆ ನಡೆದಿದೆ.

Vijaya Karnataka 21 Oct 2019, 5:00 am
ಸೋಮವಾರಪೇಟೆ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದ್ದು, ಯುವಕ ತೀವ್ರ ಗಾಯಗೊಂಡಿದ್ದಾನೆ. ಕಾನ್ವೆಂಟ್‌ ಬಾಣೆ ನಿವಾಸಿ ಸುಜಿತ್‌ ಗಾಯಗೊಂಡ ಯುವಕ. ಸೋಮವಾರಪೇಟೆಯ ಕಾನ್ವೆಂಟ್‌ ಬಾಣೆಯಲ್ಲಿ ಈ ಘಟನೆ ನಡೆದಿದೆ.
Vijaya Karnataka Web shooting for trivial cause injury to a young man
ಕ್ಷುಲ್ಲಕ ಕಾರಣಕ್ಕೆ ಗುಂಡಿನ ದಾಳಿ: ಯುವಕನಿಗೆ ಗಾಯ


ಮೂಲತ: ಸೂರ್ಲಬ್ಬಿ ಗ್ರಾಮದ, ಹಾಲಿ ಕಾನ್ವೆಂಟ್‌ ಬಾಣೆಯಲ್ಲಿವಾಸವಿರುವ ಗಣಪತಿ ಗುಂಡು ಹಾರಿಸಿದ ಆರೋಪಿ. ಭಾನುವಾರ ಸಂಜೆ ಕಾನ್ವೆಂಟ್‌ ಬಾಣೆ ಜಂಕ್ಷನ್‌ನಲ್ಲಿಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಇದರಿಂದ ಅಕ್ರೋಶಗೊಂಡ ಆರೋಪಿ ಗಣಪತಿ ತನ್ನ ಕಾರಿನಲ್ಲಿದ್ದ ಜೋಡಿ ನಳಿಕೆ ಕೋವಿಯಿಂದ ಸುಜಿತ್‌ ಹೊಟ್ಟೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಗಾಯಾಳುವನ್ನು ಸೋಮವಾರಪೇಟೆ ಸರಕಾರಿ ಅಸ್ಪತ್ರೆಯಲ್ಲಿಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸೋಮವಾರಪೇಟೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ