ಆ್ಯಪ್ನಗರ

ವೇಶ್ಯಾವಾಟಿಕೆ: ಆರು ಮಂದಿ ಬಂಧನ

ವಿಕ ಸುದ್ದಿಲೋಕ ಮಡಿಕೇರಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಂಸ್ಟೇ ಮೇಲೆ ದಾಳಿ ನಡೆಸಿದ ಜಿಲ್ಲಾಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ...

Vijaya Karnataka 15 Oct 2019, 5:00 am
ವಿಕ ಸುದ್ದಿಲೋಕ ಮಡಿಕೇರಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಂಸ್ಟೇ ಮೇಲೆ ದಾಳಿ ನಡೆಸಿದ ಜಿಲ್ಲಾಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web six arrested
ವೇಶ್ಯಾವಾಟಿಕೆ: ಆರು ಮಂದಿ ಬಂಧನ

ಕೇರಳ ರಾಜ್ಯದ ತಲಚೇರಿ ನಿವಾಸಿ ಗಳಾದ ಶಾಜಿ, ದೇವದಾಸನ್‌, ಪೇರಾವೂರಿನ ಮನು, ಕೂತುಪರಂಬು ನಿವಾಸಿ ನಿಷಾದ್‌ ಮತ್ತು ಅಕ್ಷಯ್‌ ಹಾಗೂ ಹೋಂಸ್ಟೇ ನಡೆಸುತ್ತಿದ್ದ ಅನಸೂಯ ಎಂಬುವವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಅನಸೂಯ ಪತಿ ಭೀಮಯ್ಯ ಪರಾರಿಯಾಗಿದ್ದು, ಆತನ ಬಂಧನಕ್ಕೆ ತಂಡ ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದಿನ ಕಾಂತೂರು ಮೂರ್ನಾಡು ಗ್ರಾಮದಲ್ಲಿಭೀಮಯ್ಯ ಹಾಗೂ ಅವರ ಪತ್ನಿ ಅನಸೂಯ ನಡೆ ಸುತ್ತಿದ್ದ ಹೋಂಸ್ಟೇಯಲ್ಲಿವೇಶ್ಯಾವಾಟಿಕೆ ನಡೆ ಸುತ್ತಿದ್ದು, ಮಹಿಳೆಯರನ್ನು ಪುಸಲಾಯಿಸಿ ಲೈಂಗಿಕ ಶೋಷಣೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ದೊರೆತ ಮಾಹಿತಿ ಹಿನ್ನೆಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಡಾ ಸುಮನ್‌ ಡಿ. ಪನ್ನೇಕರ್‌ ನೇತೃತ್ವದಲ್ಲಿ, ಮಡಿಕೇರಿ ಉಪ ವಿಭಾಗ ಉಪ ಪೊಲೀಸ್‌ ಅಧೀಕ್ಷಕ ದಿನೇಶ್‌ ಕುಮಾರ್‌ ಮಾರ್ಗದರ್ಶನದಲ್ಲಿಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್‌ ಮಾದಪ್ಪ, ಉಪ ನಿರೀಕ್ಷಕ ಚೇತನ್‌ ವಿ. ಹಾಗೂ ಸಿಬ್ಬಂದಿ ನೇತೃತ್ವದಲ್ಲಿಆರೋಪಿಗಳನ್ನು ವಶಕ್ಕೆ ಪಡೆಯಲು ತಂಡ ರಚನೆ ಮಾಡಲಾಗಿತ್ತು. ಪ್ರಕರಣದಲ್ಲಿಕೇರಳ ಹಾಗೂ ಕರ್ನಾಟಕ ನೋಂದಣಿಯ ಎರಡು ಕಾರು, ಕರ್ನಾಟಕ ನೋಂದಣಿಯ ಎರಡು ಮೋಟಾರ್‌ ಸೈಕಲ್‌, ಆರು ಮೊಬೈಲ್‌ ಹಾಗೂ 22,030 ರೂ. ವಶಪಡಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ