ಆ್ಯಪ್ನಗರ

ರಾಜ್ಯ ಮಟ್ಟದ ಕಬಡ್ಡಿ: ಜೆಬಿಎಸ್‌ಸಿ ಪ್ರಥಮ

ತೋಳೂರುಶೆಟ್ಟಳ್ಳಿಯ ಸೂರ್ಯೋದಯ ಯುವಕ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ಜೆಬಿಎಸ್‌ಸಿ ತಂಡ ಪ್ರಥಮ, ಚಾವಡಿಮನೆ ತೋಳೂರುಶೆಟ್ಟಳ್ಳಿ ತಂಡ ದ್ವಿತೀಯ ಸ್ಥಾನ ಪಡೆದವು.

Vijaya Karnataka Web 21 Feb 2019, 5:00 am
ಸೋಮವಾರಪೇಟೆ: ತೋಳೂರುಶೆಟ್ಟಳ್ಳಿಯ ಸೂರ್ಯೋದಯ ಯುವಕ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ಜೆಬಿಎಸ್‌ಸಿ ತಂಡ ಪ್ರಥಮ, ಚಾವಡಿಮನೆ ತೋಳೂರುಶೆಟ್ಟಳ್ಳಿ ತಂಡ ದ್ವಿತೀಯ ಸ್ಥಾನ ಪಡೆದವು.
Vijaya Karnataka Web state level kabaddi jbsc firts
ರಾಜ್ಯ ಮಟ್ಟದ ಕಬಡ್ಡಿ: ಜೆಬಿಎಸ್‌ಸಿ ಪ್ರಥಮ


ಎಂಡಬ್ಲ್ಯುಎ ತಂಡ ತೃತೀಯ ಹಾಗೂ ಬಜೆಗುಂಡಿಯ ಅಣ್ಣಪ್ಪ ಫ್ರೆಂಡ್ಸ್‌ ತಂಡ 4ನೇ ಬಹುಮಾನವನ್ನು ಪಡೆಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಗೆ ಆಯೋಜಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭತ್ತದರಾಶಿ-ಸಿಂಗನಹಳ್ಳಿ ತಂಡ ಪ್ರಥಮ, ತೋಳೂರುಶೆಟ್ಟಳ್ಳಿ ತಂಡ ದ್ವಿತೀಯ ಸ್ಥಾನ ಪಡೆದವು.

ಕ್ರೀಡಾಕೂಟಕ್ಕೆ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ವಿ.ಜೆ. ಭಾರತಿ ಉಮೇಶ್‌, ಸೂರ್ಯೋದಯ ಯುವಕ ಸಂಘದ ಅಧ್ಯಕ್ಷ ಟಿ.ಜೆ. ರಂಜನ್‌, ಯುವ ಒಕ್ಕೂಟದ ಅಧ್ಯಕ್ಷೆ ಕೆ.ಆರ್‌. ಚಂದ್ರಿಕಾ, ಉದ್ಯಮಿಗಳಾದ ಗಿರೀಶ್‌ ಮಲ್ಲಪ್ಪ, ಪ್ರಮುಖರಾದ ಎಂ.ಡಿ. ಹರೀಶ್‌, ಸಿ.ಕೆ. ಶಿವಕುಮಾರ್‌, ಡಿ.ಎನ್‌. ರಾಜಗೋಪಾಲ್‌, ಬಿ.ಬಿ. ಆದರ್ಶ್‌, ಬಿ.ಈ. ಶಿವಯ್ಯ ಅವರುಗಳು ಇದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೌಡ್ಲು ವಿಎಸ್‌ಎಸ್‌ಎನ್‌ ಅಧ್ಯಕ್ಷ ಕೆ.ಟಿ. ಪರಮೇಶ್‌ ವಹಿಸಿದ್ದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜ ಸೇವಕ ಜಯಣ್ಣ, ಮಾಜಿ ಸೈನಿಕರಾದ ಕೆ.ಸಿ. ದೇವಕ್ಕಿ, ಕಬಡ್ಡಿ ಆಟಗಾರ ರತನ್‌, ಅಥ್ಲೀಟ್‌ ರಾಶಿ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ