ನೀರಿನ ಹೊಂಡದಲ್ಲಿಮುಳುಗಿ ವಿದ್ಯಾರ್ಥಿ ಸಾವು
ಪ್ರವಾಸಕ್ಕೆ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಹಾರಂಗಿ ಅಣೆಕಟ್ಟೆ ಮುಂಭಾಗ ನದಿ ನೀರಿನ ಹೊಂಡದಲ್ಲಿಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
Vijaya Karnataka 19 Nov 2019, 5:00 am
ಕುಶಾಲನಗರ: ಪ್ರವಾಸಕ್ಕೆ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಹಾರಂಗಿ ಅಣೆಕಟ್ಟೆ ಮುಂಭಾಗ ನದಿ ನೀರಿನ ಹೊಂಡದಲ್ಲಿಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಳ್ಳಿಯ ಶ್ರೀ ಸಾಯಿ ಗುರುಕುಲ ಪಪೂ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಪುನೀತ್ (17) ಮೃತ ವಿದ್ಯಾರ್ಥಿ.
ಶ್ರೀ ಸಾಯಿ ಗುರುಕುಲ ಕಾಲೇಜಿನ ಸುಮಾರು 90 ವಿದ್ಯಾರ್ಥಿಗಳು ಎರಡು ಬಸ್ಗಳಲ್ಲಿಪ್ರವಾಸಕ್ಕೆಂದು ಜಿಲ್ಲೆಗೆ ಆಗಮಿಸಿದ್ದರು. ಹಾರಂಗಿ ಜಲಾಶಯ ವೀಕ್ಷಿಸಲು ಆಗಮಿಸಿದ್ದ ಸಂದರ್ಭ ಸುಮಾರು 20 ವಿದ್ಯಾರ್ಥಿಗಳು ಅಣೆಕಟ್ಟೆಯ ಎದುರಿನ ರಸ್ತೆ ಪಕ್ಕದ ತಡೆಗೋಡೆಯನ್ನು ಹಾರಿ ಅಣೆಕಟ್ಟೆಯ ನೀರು ಧುಮುಕುವ ಸ್ಥಳಕ್ಕೆ ಇಳಿದು ನೀರಿನಲ್ಲಿಆಟವಾಡಲು ಮುಂದಾಗಿದ್ದಾರೆ. ಜಲಾಶಯದ ನೀರು ಧುಮ್ಮಿಕ್ಕಿ ಉಂಟಾಗಿದ್ದ ಹೊಂಡಕ್ಕೆ ಆಯತಪ್ಪಿ ಬಿದ್ದು ಪುನೀತ್ ಮೃತಪಟ್ಟಿದ್ದಾರೆ.
ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ವಿದ್ಯಾರ್ಥಿಯನ್ನು ನೀರಿನಿಂದ ಹೊರ ತೆಗೆದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರೂ ಅದಾಗಲೆ ವಿದ್ಯಾರ್ಥಿ ಸಾವನ್ನಪ್ಪಿದ್ದ. ಶವ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣವು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದಾಖಲಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಳ್ಳಿಯ ಶ್ರೀ ಸಾಯಿ ಗುರುಕುಲ ಪಪೂ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಪುನೀತ್ (17) ಮೃತ ವಿದ್ಯಾರ್ಥಿ.
ಶ್ರೀ ಸಾಯಿ ಗುರುಕುಲ ಕಾಲೇಜಿನ ಸುಮಾರು 90 ವಿದ್ಯಾರ್ಥಿಗಳು ಎರಡು ಬಸ್ಗಳಲ್ಲಿಪ್ರವಾಸಕ್ಕೆಂದು ಜಿಲ್ಲೆಗೆ ಆಗಮಿಸಿದ್ದರು. ಹಾರಂಗಿ ಜಲಾಶಯ ವೀಕ್ಷಿಸಲು ಆಗಮಿಸಿದ್ದ ಸಂದರ್ಭ ಸುಮಾರು 20 ವಿದ್ಯಾರ್ಥಿಗಳು ಅಣೆಕಟ್ಟೆಯ ಎದುರಿನ ರಸ್ತೆ ಪಕ್ಕದ ತಡೆಗೋಡೆಯನ್ನು ಹಾರಿ ಅಣೆಕಟ್ಟೆಯ ನೀರು ಧುಮುಕುವ ಸ್ಥಳಕ್ಕೆ ಇಳಿದು ನೀರಿನಲ್ಲಿಆಟವಾಡಲು ಮುಂದಾಗಿದ್ದಾರೆ. ಜಲಾಶಯದ ನೀರು ಧುಮ್ಮಿಕ್ಕಿ ಉಂಟಾಗಿದ್ದ ಹೊಂಡಕ್ಕೆ ಆಯತಪ್ಪಿ ಬಿದ್ದು ಪುನೀತ್ ಮೃತಪಟ್ಟಿದ್ದಾರೆ.
ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ವಿದ್ಯಾರ್ಥಿಯನ್ನು ನೀರಿನಿಂದ ಹೊರ ತೆಗೆದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರೂ ಅದಾಗಲೆ ವಿದ್ಯಾರ್ಥಿ ಸಾವನ್ನಪ್ಪಿದ್ದ. ಶವ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣವು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದಾಖಲಾಗಿದೆ.