ಆ್ಯಪ್ನಗರ

ಮಡಿಕೇರಿಯಲ್ಲಿ ಪೌರ ಕಾರ್ಮಿಕರಿಬ್ಬರ ಆತ್ಮಹತ್ಯೆ

ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿದ್ದ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Vijaya Karnataka 6 Sep 2018, 5:00 am
ಮಡಿಕೇರಿ: ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿದ್ದ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
Vijaya Karnataka Web suicide of civic workers in madikeri
ಮಡಿಕೇರಿಯಲ್ಲಿ ಪೌರ ಕಾರ್ಮಿಕರಿಬ್ಬರ ಆತ್ಮಹತ್ಯೆ


ಮೈಸೂರಿನ ಅಶೋಕಪುರಂನ ನಿವಾಸಿಗಳಾದ ಸತೀಶ್‌ (40) ಹಾಗೂ ಉಷಾ (35) ಮೃತರು. ಈ ಇಬ್ಬರೂ ಮಡಿಕೇರಿಯ ನಗರಸಭೆಯಲ್ಲಿ ಏಳು ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಇಬ್ಬರಿಗೂ ಹಿಂದೆ ಬೇರೆ ವಿವಾಹವಾಗಿದ್ದು, ಅದನ್ನು ತೊರೆದು ನಗರಕ್ಕೆ ಆಗಮಿಸಿ ಒಟ್ಟಿಗೆ ವಾಸವಿದ್ದರು.

ಎರಡು ದಿನಗಳಿಂದ ಮನೆಯ ಬಾಗಿಲು ತೆರೆದಿರಲಿಲ್ಲ. ಕಿಟಕಿ ಮೂಲಕ ಸ್ಥಳೀಯರು ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕಾರಣ ತಿಳಿದು ಬಂದಿಲ್ಲ. ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ