ಆ್ಯಪ್ನಗರ

ವೈಯಕ್ತಿಕ ಕಾರಣಕ್ಕೆ ಯುವತಿ ಆತ್ಮಹತ್ಯೆ: ಸ್ಪಷ್ಪನೆ

ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟದಿಂದ ಗೌಳಿಬೀದಿಯಲ್ಲಿ ವಾಸವಿದ್ದ ವನಜಾ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಮಡಿಕೇರಿ ತಹಸೀಲ್ದಾರ್‌ ತಿಳಿಸಿದ್ದಾರೆ.

Vijaya Karnataka 16 Jun 2019, 5:00 am
ಮಡಿಕೇರಿ: ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟದಿಂದ ಗೌಳಿಬೀದಿಯಲ್ಲಿ ವಾಸವಿದ್ದ ವನಜಾ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಮಡಿಕೇರಿ ತಹಸೀಲ್ದಾರ್‌ ತಿಳಿಸಿದ್ದಾರೆ.
Vijaya Karnataka Web suicide to a personal cause the clearence
ವೈಯಕ್ತಿಕ ಕಾರಣಕ್ಕೆ ಯುವತಿ ಆತ್ಮಹತ್ಯೆ: ಸ್ಪಷ್ಪನೆ


ಪತ್ರಿಕಾ ಹೇಳಿಕೆ ನೀಡಿರುವ ಅವರು, ''ಶುಕ್ರವಾರ ಗೌಳಿಬೀದಿಯಲ್ಲಿರುವ ಪಿಜಿಯಲ್ಲಿ ವನಜಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇವರ ಕುಟುಂಬ ಕಾಲೂರಿನಲ್ಲಿ ವಾಸವಾಗಿತ್ತು. ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಇವರ ವಾಸದ ಮನೆ ಭಾಗಶಃ ಹಾನಿಯಾಗಿದ್ದು, 5,200 ರೂ. ಪರಿಹಾರ ನೀಡಲಾಗಿತ್ತು. ಪ್ರಕೃತಿ ವಿಕೋಪದಲ್ಲಿ ಇವರಿಗೆ ತೀವ್ರವಾದ ಹಾನಿ ಹಾಗೂ ತೀವ್ರ ನಷ್ಟ ಉಂಟಾಗಿಲ್ಲ. ಇವರು ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,'' ಎಂದು ಮಡಿಕೇರಿ ತಹಸೀಲ್ದಾರ್‌ ಎ.ಎ.ಕುಸುಮಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ