ಆ್ಯಪ್ನಗರ

ಸುಂಟಿಕೊಪ್ಪ: ಜನತೆ ತತ್ತರ

ಹೋಬಳಿಯಲ್ಲಿ ಎಡೆಬಿಡದೆ ಸುರಿದ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ.

Vijaya Karnataka 8 Jul 2018, 5:00 am
ಸುಂಟಿಕೊಪ್ಪ: ಹೋಬಳಿಯಲ್ಲಿ ಎಡೆಬಿಡದೆ ಸುರಿದ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ.
Vijaya Karnataka Web suntikoppa heavy rain
ಸುಂಟಿಕೊಪ್ಪ: ಜನತೆ ತತ್ತರ


ತಾ. 6 ರಂದು ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರಿಗೆ ರಜೆ ನೀಡಲಾಗಿದೆ.

ಒಂದೇ ದಿನದಲ್ಲಿ 5ರಿಂದ 8 ಇಂಚು ಮಳೆಯಾದ ಕಾರಣ ಸುಂಟಿಕೊಪ್ಪದಿಂದ- ನಾಕೂರು - ಶಿರಂಗಾಲಕ್ಕೆ ತೆರಳುವ ರಸ್ತೆ ನೀರಿನಲ್ಲಿ ಮುಳುಗಿದೆ. ಈ ಭಾಗದ ಪ್ರಯಾಣಿಕರು ಕಷ್ಟ ಅನುಭವಿಸುವಂತಾಯಿತು. ಶಾಂತಗೇರಿ, ಕಾನ್‌ಬೈಲು, ಪನ್ಯ, ಎಮ್ಮೆಗುಂಡಿಯಲ್ಲಿ ಮಳೆಗೆ ಮರಗಳು ಬಿದ್ದ ಪರಿಣಾಮ ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡು ನಾಗರಿಕರು ಪರದಾಡುವಂತಾಯಿತು

ಹಟ್ಟಿಹೊಳೆ, ಮಾದಾಪುರ, ಐಗೂರು, ಚೋರನಹೊಳೆ, ಗರಗಂದೂರು ಹೊಳೆ ತುಂಬಿ ಹರಿಯುತ್ತಿದ್ದು ನಾಲೆ, ತೊರೆಗಳು ತುಂಬಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ