ಆ್ಯಪ್ನಗರ

ತಂಡಸ್ಫ್ಫೂರ್ತಿಯೇ ಕುಲ್ಲೇಟಿರ ಕಪ್‌ ಯಶಸ್ವಿಗೆ ಕಾರಣ: ಅಜಿತ್‌

ನಾಪೋಕ್ಲುವಿನಲ್ಲಿ ಜರುಗಿದ 22ನೇ ಕೌಟುಂಬಿಕ ಕೊಡವ ಹಾಕಿ ಕುಲ್ಲೇಟಿರ ಕಪ್‌ ಯಶಸ್ಸಿಗೆ ಕುಟುಂಬ ಮತ್ತು ಗ್ರಾಮಸ್ಥರ ತಂಡಸ್ಫೂರ್ತಿಯೇ ಮುಖ್ಯಕಾರಣವಾಯಿತು ಎಂದು ಕುಲ್ಲೇಟಿರ ಹಾಕಿ ಪಂದ್ಯಾವಳಿ ಸಮಿತಿ ಕಾರ್ಯದರ್ಶಿ ಅಜಿತ್‌ ನಾಣಯ್ಯ ತಿಳಿಸಿ

Vijaya Karnataka 24 May 2018, 5:00 am
ಮಡಿಕೇರಿ: ನಾಪೋಕ್ಲುವಿನಲ್ಲಿ ಜರುಗಿದ 22ನೇ ಕೌಟುಂಬಿಕ ಕೊಡವ ಹಾಕಿ ಕುಲ್ಲೇಟಿರ ಕಪ್‌ ಯಶಸ್ಸಿಗೆ ಕುಟುಂಬ ಮತ್ತು ಗ್ರಾಮಸ್ಥರ ತಂಡಸ್ಫೂರ್ತಿಯೇ ಮುಖ್ಯಕಾರಣವಾಯಿತು ಎಂದು ಕುಲ್ಲೇಟಿರ ಹಾಕಿ ಪಂದ್ಯಾವಳಿ ಸಮಿತಿ ಕಾರ್ಯದರ್ಶಿ ಅಜಿತ್‌ ನಾಣಯ್ಯ ತಿಳಿಸಿದರು
Vijaya Karnataka Web team spirit being reason for success
ತಂಡಸ್ಫ್ಫೂರ್ತಿಯೇ ಕುಲ್ಲೇಟಿರ ಕಪ್‌ ಯಶಸ್ವಿಗೆ ಕಾರಣ: ಅಜಿತ್‌


ಕುಲ್ಲೇಟಿರ ಹಾಕಿ ಕಪ್‌ನ ಸವಾಲುಗಳು ಮತ್ತು ಯಶಸ್ಸು ಕುರಿತಂತೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‌ ಸಭೆಯಲ್ಲಿ ಮಾತನಾಡಿದ ಅಜಿತ್‌ ನಾಣಯ್ಯ, ಮಳೆಯ ಸಮಸ್ಯೆಯನ್ನು ಎದುರಿಸಿದ್ದೇ ಈ ಬಾರಿಯ ಕುಲ್ಲೇಟಿರ ಕಪ್‌ ಹಾಕಿ ಸಮಿತಿಗೆ ಮುಖ್ಯ ಸವಾಲಾಗಿತ್ತು ಎಂದರು.

33 ದಿನಗಳ ಸುದೀರ್ಘ ದಿನ ಕುಲ್ಲೇಟಿರ ಹಾಕಿ ಪಂದ್ಯಾವಳಿಗೆ 334 ತಂಡಗಳು ನೋಂದಾಯಿಸಿಕೊಂಡಿದ್ದು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಮಳೆಯ ಸಮಸ್ಯೆಯ ಸವಾಲನ್ನು ಕುಲ್ಲೇಟಿರ ಕುಟುಂಬಸ್ಥರು ಎದುರಿಸಿ ಮೂರೂ ಮೈದಾನವನ್ನು ಪಂದ್ಯಾವಳಿಗೆ ಯಾವುದೇ ಸಮಸ್ಯೆಯಾಗದಂತೆ ಅಣಿಗೊಳಿಸಿದ್ದಾರೆ. ಕುಲ್ಲೇಟಿರ ಕುಟುಂಬಸ್ಥರೊಂದಿಗೆ ನಾಪೋಕ್ಲು ಗ್ರಾಮಸ್ಥರು, ನಾನಾ ಕುಟುಂಬಸ್ಥರು ಪಂದ್ಯಾವಳಿಯ ಯಶಸ್ಸಿಗೆ ನೀಡಿದ ಸಹಕಾರ ಅವಿಸ್ಮರಣೀಯ ಎಂದು ಹೇಳಿದರು.

ಪ್ರತೀ ತಂಡಕ್ಕೂ ಒಡಿಕತ್ತಿಯನ್ನು ಕೊಡುಗೆಯಾಗಿ ನೀಡಿದ ವಿನೂತನ ಕಲ್ಪನೆ, ಪಂದ್ಯದಲ್ಲಿ ಸ್ವಚ್ಛ ಕ್ರೀಡಾಂಗಣಕ್ಕೆ ಆದ್ಯತೆ ನೀಡಿದ್ದು, ಮೊದಲ ಬಾರಿಗೆ ಜಿಲ್ಲೆಯಾದ್ಯಂತ ಹಾಕಿ ಪಂದ್ಯಾವಳಿಯನ್ನು ರೋಡ್‌ ಶೋ ಮೂಲಕ ಪ್ರಚಾರಗೊಳಿಸಿದ್ದು, ಹೊನಲು ಬೆಳಕಿನ ಪಂದ್ಯ ಆಯೋಜಿಸಿದ್ದು, ಕುಲ್ಲೇಟಿರ ಕುಟುಂಬದಲ್ಲಿನ ಏಳು ಮಂದಿ ತಂದೆ ಹಾಗೂ ಅವರ ಮಕ್ಕಳು ಹಾಕಿ ಆಟವಾಡಿದ್ದು ಕೂಡ ಕುಲ್ಲೇಟಿರ ಹಾಕಿ ಪಂದ್ಯದ ಸಾಧನೆಗಳ ಕಿರೀಟಕ್ಕೆ ಗರಿ ಮೂಡಿಸಿದ ಅಂಶಗಳೆಂದೂ ಅಜಿತ್‌ ಹೇಳಿದರು.

ಕುಲ್ಲೇಟಿರ ಹಾಕಿ ಪಂದ್ಯಕ್ಕೆ ಸುಮಾರು 1.20 ಕೋಟಿ ರು. ವೆಚ್ಚವಾಗಿರುವ ಅಂದಾಜಿದ್ದು, ಸರಕಾರದಿಂದ 40 ಲಕ್ಷ ರೂ. ನಿರೀಕ್ಷಿಸಲಾಗಿದೆ. ನಾಪೋಕ್ಲು ವ್ಯಾಪ್ತಿಯ ಹಲವು ಕೊಡವ ಕುಟುಂಬಗಳು ಆರ್ಥಿಕ ನೆರವು ನೀಡಿವೆ. 35 ಕುಟುಂಬಗಳು, 134 ಮಂದಿಯನ್ನು ಮಾತ್ರ ಹೊಂದಿರುವ ಪುಟ್ಟ ಕುಟುಂಬವಾದರೂ ಯಾವುದಕ್ಕೂ ಕೊರತೆಯಾಗದಂತೆ ಕೊಡವ ಹಾಕಿ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಸಣ್ಣ ಕುಟುಂಬದವರೂ ಬೃಹತ್‌ ಪಂದ್ಯಾವಳಿ ಆಯೋಜಿಸಲು ಸಾಧ್ಯ ಎಂದು ನಿರೂಪಿಸಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್‌ ಪರವಾಗಿ ಅಜಿತ್‌ ನಾಣಯ್ಯ ಅವರನ್ನು ಅಧ್ಯಕ್ಷ ಅನಿಲ್‌ ಎಚ್‌.ಟಿ. ಸ್ಮರಣಿಕೆ ನೀಡಿ ಗೌರವಿಸಿದರು. ಮಿಸ್ಟಿ ಹಿಲ್ಸ್‌ ಕಾರ್ಯದರ್ಶಿ ಪಿ.ಎಂ.ಸಂದೀಪ್‌, ಮುಂದಿನ ಸಾಲಿನ ಅಧ್ಯಕ್ಷ ಜಿ.ಆರ್‌.ರವಿಶಂಕರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ