ಆ್ಯಪ್ನಗರ

ಆಸ್ಪತ್ರೆಯೇ ಹರಡುತ್ತಿದೆ ಅನಾರೋಗ್ಯ

ನಿತ್ಯ ನೂರಾರೂ ರೋಗಿಗಳ ಆರೋಗ್ಯ ಕಾಪಾಡುವ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರ ಇದೀಗ ಪರಿಸರ ಮಾಲಿನ್ಯ ಮೂಲಕ ವಿವಿಧ ಕಾಯಿಲೆಗಳನ್ನು ಹರಡಲು ಮುಂದಾಗಿದೆ.

Vijaya Karnataka 12 Jun 2018, 5:00 am
ಗೋಣಿಕೊಪ್ಪಲು: ನಿತ್ಯ ನೂರಾರೂ ರೋಗಿಗಳ ಆರೋಗ್ಯ ಕಾಪಾಡುವ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರ ಇದೀಗ ಪರಿಸರ ಮಾಲಿನ್ಯ ಮೂಲಕ ವಿವಿಧ ಕಾಯಿಲೆಗಳನ್ನು ಹರಡಲು ಮುಂದಾಗಿದೆ.
Vijaya Karnataka Web the hospital is spreading ill
ಆಸ್ಪತ್ರೆಯೇ ಹರಡುತ್ತಿದೆ ಅನಾರೋಗ್ಯ


ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲೇ ಆಸ್ಪತ್ರೆಯ ತ್ಯಾಜ್ಯಗಳನ್ನು ಸುರಿಯುವ ಮೂಲಕ ನಾನಾ ರೋಗಗಳನ್ನು ಹರಡಲು ಕಾರಣವಾಗುತ್ತಿದೆ. ಆರೋಗ್ಯ ಕೇಂದ್ರದಲ್ಲಿ ಸಂಗ್ರಹವಾಗುವ ಔಷಧಿ ಬಾಟಲಿಗಳು, ಚುಚ್ಚುಮದ್ದು ಸಿರಂಜಿಗಳು, ಗಾಯಗಳಿಗೆ ಬಳಸಿದ ಬ್ಯಾಂಡೇಜ್‌ಗಳು, ಹತ್ತಿ ಸೇರಿದಂತೆ ಇತರ ತ್ಯಾಜ್ಯ ವಸ್ತುಗಳನ್ನು ನೇರವಾಗಿ ರಸ್ತೆಯ ಬದಿಗೆ ಸುರಿಯಲಾಗುತ್ತಿದೆ. ನಂತರ ಇದಕ್ಕೆ ಬೆಂಕಿ ಕೊಟ್ಟು ತ್ಯಾಜ್ಯಗಳನ್ನು ಸುಡಲು ಮುಂದಾಗುತ್ತಾರೆ. ಹೀಗೆ ನಿತ್ಯ ಸಂಗ್ರಹವಾಗುವ ತ್ಯಾಜ್ಯಗಳನ್ನು ರಸ್ತೆಯ ಬದಿಗೆ ಸುರಿಯಲಾಗುತ್ತಿದೆ ಇದನ್ನು ಪೌರ ಕಾರ್ಮಿಕರು ಸಹ ವಿಲೇವಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸುರಿದ ತ್ಯಾಜ್ಯದಲ್ಲಿ ಗಾಜಿನ ಚೂರುಗಳು, ಸಿರಂಜಿನ ಸೂಜಿಗಳು ಇರುವುದರಿಂದ ತ್ಯಾಜ್ಯ ತೆಗೆಯುವಾಗ ಕೈ ಕಾಲುಗಳಿಗೆ ಚುಚ್ಚಿಕೊಂಡು ಗಾಯಗಳಾಗುತ್ತದೆ. ಈ ಕಾರಣ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಪೌರ ಕಾರ್ಮಿಕರು ಮುಂದಾಗುತ್ತಿಲ್ಲ.

ಆಸ್ಪತ್ರೆಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಬೇರೆಡೆ ವಿಲೇವಾರಿ ಮಾಡಿ, ತ್ಯಾಜ್ಯವನ್ನು ಸುಟ್ಟು ಹಾಕಬೇಕು. ಆದರೆ. ಇಲ್ಲಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಸ್ಥಳ ಇಲ್ಲದೇ ಇರುವುದರಿಂದ ಸಮಸ್ಯೆ ಎದುರಾಗಿದೆ. ನೂರಾರು ರೋಗಿಗಳು ಭೇಟಿ ನೀಡುವ ಆರೋಗ್ಯ ಕೇಂದ್ರದಲ್ಲಿ ಶುಚಿತ್ವದ ಕೊರತೆ ಕಾಣುತ್ತಿದೆ. ಆಸ್ಪತ್ರೆಯ ಸುತ್ತಲಿನ ಆವರಣದ ಚರಂಡಿಗಳಲ್ಲಿ ಕೊಳಚೆ ನೀರು ನಿತ್ತು ಸೊಳ್ಳೆ, ನೊಣಗಳ ವಾಸಸ್ಥಾನವಾಗಿದೆ. ಹಿಂದೆ ಆರೋಗ್ಯ ಕೇಂದ್ರದಲ್ಲಿನ ಹಳೆಯ ಕಟ್ಟಡವನ್ನು ನವೀಕರಣಗೊಳಿಸಿದ ಸಂದರ್ಭ ಕೊಟ್ಟಡಿಯಲ್ಲಿದ್ದ ಹಾಸಿಗೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಆಸ್ಪತ್ರೆಯ ಆವರಣ ಒಳಗಿನ ತಡೆಗೋಡೆಯ ಒತ್ತಿನಲ್ಲಿ ಹಾಕಲಾಗಿದೆ. ಇದು ಮಳೆಯ ನೀರು ಬಿದ್ದು ಕೊಳೆತು ಹೋಗಿದೆ. ಇಲ್ಲಿ ಸೊಳ್ಳೆಗಳು ತನ್ನ ಸಂತಾನ ಅಭಿವೃದ್ಧಿ ಪಡಿಸಿಕೊಳ್ಳುತ್ತಿವೆ. ಆದರು ಆರೋಗ್ಯ ಕೇಂದ್ರದ ನಿರ್ವಹಣೆ ಹೊತ್ತಿರುವ ಆಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸದಾ ಶುಚಿತ್ವಕ್ಕೆ ಒತ್ತು ನೀಡಬೇಕಾದ ಆರೋಗ್ಯ ಕೇಂದ್ರ ಜನರಿಗೆ ಮಾರಕ ರೋಗಗಳನ್ನು ಹರಡುವ ವಾತಾವರಣ ನಿರ್ಮಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.


ಕಸ ವಿಲೇವಾರಿ ಪಂಚಾಯಿತಿ ಹಂಗಾಮಿ ನೌಕರ ವಿಂಗಡಿಸಿ ವಿಲೇವಾರಿ ಮಾಡಿದರೆ ಸಾಗಿಸಲು ಸಾಧ್ಯವಾಗುತ್ತದೆ. ಆರೋಗ್ಯ ಕೇಂದ್ರದ ತ್ಯಾಜ್ಯದಲ್ಲಿ ಗಾಜಿನ ಚೂರುಗಳು, ರಕ್ತ ಮೆತ್ತಿದ ಬ್ಯಾಂಡೇಜ್‌ಗಳು, ಸಿರಿಂಜ್‌ಗಳು ಸೇರಿದಂತೆ ಹಲವು ತ್ಯಾಜ್ಯಗಳು ಇರುತ್ತದೆ. ಇದು ಪೌರ ಕಾರ್ಮಿಕರ ಕೈಗಳಿಗೆ ಚುಚ್ಚುವುದರಿಂದ ಗಾಯಗಳಾಗುತ್ತವೆ. ಹೀಗಾಗಿ ನೌಕರರು ಕಸ ತೆಗೆಯಲು ಮುಂದಾಗುತ್ತಿಲ್ಲ.

-ನೌಷದ್‌, ಸ್ಥಳೀಯ

ಆಸ್ಪತ್ರೆಯ ತ್ಯಾಜ್ಯವನ್ನು ಮೈಸೂರಿನಿಂದ ಬಂದು ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ವಾರಕ್ಕೆ 2 ಬಾರಿ ಕಸವನ್ನು ಸಾಗಿಸಲಾಗುತ್ತಿದೆ. ಆರೋಗ್ಯ ಕೇಂದ್ರದ ಹೊರಭಾಗದಲ್ಲಿ ಹಾಕುವ ಕಸಕ್ಕೆ ಕೇಂದ್ರ ಜವಾಬ್ದಾರಿಯಲ್ಲ. ಸಾರ್ವಜನಿಕರೇ ಇಲ್ಲಿ ತಂದು ಕಸ ಹಾಕುತ್ತಿದ್ದಾರೆ.

-ಡಾ. ಸುರೇಶ್‌, ಆಡಳಿತಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ