ಆ್ಯಪ್ನಗರ

ಗಾಯಗೊಂಡಿದ್ದ ಕಾಡಾನೆ ಸಾವು

ಕುಶಾಲನಗರ: ಕಾಲಿಗೆ ಗಾಯವಾಗಿ ಕುಶಾಲನಗರ ಸಮೀಪದ ಆನೆಕಾಡು ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದ ಕಾಡಾನೆ ‘ಕಾರ್ಯಪ್ಪ’ ಶನಿವಾರ ಬೆಳಗ್ಗೆ ಮೃತಪಟ್ಟಿದೆ.

Vijaya Karnataka 18 Aug 2018, 7:15 pm
ಕುಶಾಲನಗರ: ಕಾಲಿಗೆ ಗಾಯವಾಗಿ ಕುಶಾಲನಗರ ಸಮೀಪದ ಆನೆಕಾಡು ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದ ಕಾಡಾನೆ ‘ಕಾರ್ಯಪ್ಪ’ ಶನಿವಾರ ಬೆಳಗ್ಗೆ ಮೃತಪಟ್ಟಿದೆ.
Vijaya Karnataka Web the wounded elephant death
ಗಾಯಗೊಂಡಿದ್ದ ಕಾಡಾನೆ ಸಾವು


ಬಲಗಾಲಿಗೆ ಗಾಯವಾಗಿ ಕುಂಟುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆನೆಕಾಡು ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಲಗಾಲಿನ ನರ ಹಾಗೂ ಕಿರುಮೂಳೆಗೆ ಪೆಟ್ಟಾಗಿ ಊದಿಕೊಂಡ ಸ್ಥಿತಿಯಲ್ಲಿದ್ದ 30 ವರ್ಷದ ಕಾಡಾನೆಯನ್ನು ಆರೈಕೆ ಮಾಡಲಾಗುತ್ತಿತ್ತು.

ಇತ್ತೀಚೆಗ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಆನೆಕಾಡು ಶಿಬಿರಕ್ಕೆ ಭೇಟಿ ನೀಡಿದ ವೇಳೆ ಆನೆಯ ಆರೋಗ್ಯ ವಿಚಾರಿಸುವುದರೊಂದಿಗೆ ಆನೆಗೆ ‘ಕಾರ್ಯಪ್ಪ’ ಎಂದು ನಾಮಕರಣ ಕೂಡ ಮಾಡಿದ್ದರು.

ಆನೆಯು ಶೀಘ್ರವಾಗಿ ಚೇತರಿಸಿಕೊಳ್ಳುವ ಭರವಸೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ತಜ್ಞರು ವ್ಯಕ್ತಪಡಿಸಿದ್ದರು. ಕುಂಟುತ್ತಲೇ ಆಹಾರ ಸೇವಿಸಿ ಆರೋಗ್ಯವಾಗಿದ್ದ ಕಾಡಾನೆ ಶನಿವಾರ ದಿಢೀರನೆ ಮೃತಪಟ್ಟಿದೆ. ಮೃತ ಆನೆಯ ಅಂತ್ಯಕ್ರಿಯೆಯನ್ನು ಆನೆಕಾಡು ಅರಣ್ಯ ಪ್ರದೇಶದಲ್ಲಿ ನೆರವೇರಿಸಲಾಯಿತು.

ಕಾಲಿಗೆ ಗಾಯವಾಗಿ ಕುಶಾಲನಗರ ಸಮೀಪದ ಆನೆಕಾಡು ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಡಾನೆ ‘ಕಾರ್ಯಪ್ಪ’ ಶನಿವಾರ ಮೃತಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ