ಆ್ಯಪ್ನಗರ

ಮನೆಯೊಳಗೆ ನುಗ್ಗಿದ ಕಾಡಾನೆ: ಪ್ರಾಣಭೀತಿಯಲ್ಲಿ ಬದುಕುತ್ತಿದೆ ಕುಟುಂಬ..!

ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಸೋಮುಣು ಚಂದ್ರ ಅವರ ಮನೆಯೊಳಗೆ ನಿನ್ನೆ ಏಕಾಏಕಿ ನುಗ್ಗಿದ ಕಾಡಾನೆ ಆಹಾರ ಪದಾರ್ಥಗಳನ್ನು ತಿಂದು ಪಾತ್ರೆಗಳನ್ನು ತುಳಿದು ಹಾಕಿದೆ. ಅಲ್ಲದೇ ಮನೆಯ ಬಾಗಿಲನ್ನು ಒಡೆದು ಹಾಕಿದ್ದು, ಸೋಮುಣು ಅವರ ಮನೆ ಹಾನಿಗೊಳಗಾಗಿದೆ.

Vijaya Karnataka Web 30 Jun 2020, 1:05 pm
ಕೊಡಗು: ಮನೆಯೊಳಗೆ ನುಗ್ಗಿ ಕಾಡಾನೆಯೊಂದು ದಾಂಧಲೆ ನಡೆಸಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.
Vijaya Karnataka Web A wild elephant rushing into the house


ನಿನ್ನೆ ರಾತ್ರಿ ಮನೆಯವರೆಲ್ಲ ನಿದ್ರಿಸಲು ತಯಾರಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಾಡಾನೆಯೊಂದು ಮನೆಗೆ ಲಗ್ಗೆ ಇಟ್ಟಿದ್ದು, ಆನೆ ದಾಳಿ ಮಾಡ್ತಿದ್ದಂತೆ ಮನೆಯಲ್ಲಿದ್ದವರೆಲ್ಲ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊನ್ನಂಪೇಟೆಯಲ್ಲಿ ಜಿಂಕೆ ಬೇಟೆ, ಮೂವರ ಬಂಧನ

ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಸೋಮುಣು ಚಂದ್ರ ಅವರು ತಮ್ಮ ಹೆಂಡತಿ ಮತ್ತು ಮೂವರು ಪುಟ್ಟ ಮಕ್ಕಳೊಂದಿಗೆ ಕಳೆದ ಕೆಲ ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ನಿನ್ನೆ ಏಕಾಏಕಿ ಮನೆಯೊಳಗೆ ನುಗ್ಗಿದ ಆನೆ ಆಹಾರ ಪದಾರ್ಥಗಳನ್ನು ತಿಂದು ಪಾತ್ರೆಗಳನ್ನು ತುಳಿದು ಹಾಕಿದೆ. ಅಲ್ಲದೇ ಮನೆಯ ಬಾಗಿಲನ್ನು ಒಡೆದು ಹಾಕಿದ್ದು, ಸೋಮುಣು ಅವರ ಮನೆ ಹಾನಿಗೊಳಗಾಗಿದೆ.

ಸಂಕಷ್ಟದಲ್ಲಿ ಕೊಡಗು ಪ್ರವಾಸೋದ್ಯಮ: ಎರಡು ವರ್ಷ ಪ್ರಾಕೃತಿಕ ವಿಕೋಪ, ಈಗ ಕೊರೊನಾ ಹಾವಳಿ

ಈ ಭಾಗದಲ್ಲಿ ಕಳೆದ ಕೆಲ ವರ್ಷಗಳಿಂದ ಕಾಡಾನೆಗಳ ಸಂಚಾರವಿದ್ದು, ಜನರು ಭಯ ಭೀತಿಯಿಂದಲೇ ದಿನದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಸೋಮುಣು ಅವರ ಮನೆ ಕಾಡಾನೆ ದಾಳಿಯಿಂದ ಹಾನಿಗೊಳಗಾಗಿದ್ದು, ಕೂಲಿ ಕಾರ್ಮಿಕರಾಗಿರುವ ಅವರು ಪರಿಹಾರ ನೀಡುವಂತೆ ಒತ್ತಾಯಿಸಿದ್ದು, ಸರ್ಕಾರದ ನೆರವಿಗಾಗಿ ಎದುರು ನೊಡುತ್ತಿದ್ದಾರೆ.

ಕೊಡಗಿನಲ್ಲಿ ಮತ್ತೆ 7 ಜನಕ್ಕೆ ಸೋಂಕು: 18ಕ್ಕೇರಿದ ಕಂಟೇನ್ಮೆಂಟ್‌ ಝೋನ್ಸ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ