ಆ್ಯಪ್ನಗರ

​ ಮೂವರು ಬಾಲ ಕಾರ್ಮಿಕರು ಪತ್ತೆ

ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಬೆಳಗಿನಿಂದಲೇ ಪೆಟ್ರೋಲ್ ಬಂಕ್, ಹೊಟೇಲ್, ಅಂಗಡಿಗಳ ಮೇಲೆ ದಾಳಿ ನಡೆಸಿ ಸಾಕ್ಷಿ ಸಮೇತವಾಗಿ 3 ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ್ದಾರೆ.

Vijaya Karnataka Web 25 May 2017, 8:24 am
ವಿರಾಜಪೇಟೆ: ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಬೆಳಗಿನಿಂದಲೇ ಪೆಟ್ರೋಲ್ ಬಂಕ್, ಹೊಟೇಲ್, ಅಂಗಡಿಗಳ ಮೇಲೆ ದಾಳಿ ನಡೆಸಿ ಸಾಕ್ಷಿ ಸಮೇತವಾಗಿ 3 ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ್ದಾರೆ.
Vijaya Karnataka Web three child laborers detected
​ ಮೂವರು ಬಾಲ ಕಾರ್ಮಿಕರು ಪತ್ತೆ


ವಿರಾಜಪೇಟೆ ಗೋಣಿಕೊಪ್ಪ ರಸ್ತೆಯಲ್ಲಿರುವ ಮೋಹನ್ ಪೆಟ್ರೋಲ್ ಬಂಕ್‌ನ ಮೇಲೆ ಬಾಲ ಕಾರ್ಮಿಕರಿಗಾಗಿ ದಾಳಿ ನಡೆಸಿದಾಗ ಹದಿನಾರು ವರ್ಷದ ಇಬ್ಬರು ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿ ಇಲ್ಲಿನ ಮಲೆತಿರಿಕೆ ಬೆಟ್ಟದ ನಿವಾಸಿ ತಮಿಳರ ಮಣಿ ಎಂಬುವರ ಮಗ ಪೂವರಸನ್(16) ಬೋಯಿಕೇರಿಯ ರಂಗೇಗೌಡ ಅವರ ಮಗ ಕಾರ್ತಿಕ್ ಸಹ ಇದೇ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದುದು ಪತ್ತೆಯಾಗಿದೆ. ಅಧಿಕಾರಿಗಳ ತಂಡ ಮಹಜರು ನಡೆಸಿ ಪೆಟ್ರೋಲ್ ಬಂಕ್ ಮಾಲೀಕ ಎನ್.ಯು. ಅಯ್ಯಪ್ಪ ಮೋಹನ್ ಅವರನ್ನು ವಿಚಾರಣೆ ನಡೆಸಿ ನಂತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸ ಲಾಗುವುದು ಎಂದು ಅಧಿಕಾರಿಗಳ ತಂಡ ತಿಳಿಸಿದೆ.

ವಿರಾಜಪೇಟೆಯ ಕಾರು ನಿಲ್ದಾಣದಲ್ಲಿರುವ ಸ್ವಾಗತ್ ಹೊಟೇಲ್‌ಗೆ ದಾಳಿ ಮಾಡಿದ ಅಧಿಕಾರಿಗಳ ತಂಡ ಅಲ್ಲಿಯು ಒಬ್ಬ ಬಾಲ ಕಾರ್ಮಿಕ ನನ್ನು ಪತ್ತೆ ಹಚ್ಚಿದೆ. ಅಧಿಕಾರಿಗಳ ತಂಡ ಹೋಟೆಲ್‌ಗೆ ದಾಳಿ ನಡೆಸಿದಾಗ 16 ವರ್ಷದ ಬಾಲಕ ಎಸ್.ಆರ್.ದರ್ಶನ್ ಎಂಬಾತನು ಗಿರಾಕಿಗಳಿಗೆ ತಿಂಡಿ, ಪಾನೀಯ ಸರಬರಾಜು ಮಾಡುತ್ತಿದ್ದು ಪತ್ತೆಯಾಗಿದೆ. ಬಾಲಕ ದರ್ಶನ್ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿದ್ದು ಇಲ್ಲಿನ ರಂಗೇಗೌಡರ ಮಗನಾಗಿದ್ದಾನೆ. ಅಧಿಕಾರಿಗಳ ತಂಡ ಹೋಟೆಲ್‌ನ ಮಹಜರು ನಡೆಸಿ ಮಾಲೀಕ ಕಿಶೋರ್ ಶೆಟ್ಟಿ ವಿರುದ್ಧ ಕ್ರಮ ಜರುಗಿಸಲು ಹೋಟೆಲ್ ಪರವಾನಗಿಯನ್ನು ಪರಿಶೀಲಿಸಿ ಪ್ರಕರಣ ದಾಖಲಿಸಲು ಮುಂದಿನ ಕ್ರಮ ಕೆಗೊಂಡಿದ್ದಾರೆ.

ಅಧಿಕಾರಿಗಳ ತಂಡದ ದಾಳಿಯಲ್ಲಿ ಮಡಿಕೇರಿಯ ಹಿರಿಯ ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಿಕ್, ಸೋಮವಾರಪೇಟೆ ವಿಭಾಗದ ಹಿರಿಯ ಅಧಿಕಾರಿ ಮಹದೇವಸ್ವಾಮಿ, ಮಡಿಕೇರಿಯ ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೆಟಿಯ ಅಧಿಕಾರಿ ಆರ್.ಸಿರಾಜ್ ಅಹಮ್ಮದ್, ತಾಲೂಕು ಕಚೇರಿಯ ತಹಸೀಲ್ದಾರ್ ಪರವಾಗಿ ರೆವಿನ್ಯೂ ಇನ್ಸ್ ಪೆಕ್ಟರ್ ಶ್ರೀನಿವಾಸ್, ಆರೋಗ್ಯಾಧಿಕಾರಿ ಡಾ.ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿಯ ಸಹಾಯಕ ವೆಂಕಟೇಶ್, ಪೊನ್ನಂಪೇಟೆಯ ಶಿಶು ಅಭಿವದ್ಧಿ ಕಲ್ಯಾಣ ಯೋಜನೆಯ ಅಧಿಕಾರಿ ಲೀಲಾವತಿ, ವಿರಾಜಪೇಟೆಯ ಕಾರ್ಮಿಕ ಅಧಿಕಾರಿ ವನಜಾಕ್ಷಿ, ನಗರ ಪೊಲೀಸರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ