ಆ್ಯಪ್ನಗರ

ಆಟೊ ಪಲ್ಟಿ: ಮೂವರಿಗೆ ಗಾಯ

ಇಲ್ಲಿಗೆ ಸಮೀಪದ ಬಾಳೆ ಕಾಡು ತಿರುವಿನಲ್ಲಿ ಗೂಡ್ಸ್‌ ಆಟೊವೊಂದು ಪಲ್ಟಿಯಾಗಿ ಮೂವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ...

Vijaya Karnataka 8 Jul 2019, 5:00 am
ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಬಾಳೆ ಕಾಡು ತಿರುವಿನಲ್ಲಿ ಗೂಡ್ಸ್‌ ಆಟೊವೊಂದು ಪಲ್ಟಿಯಾಗಿ ಮೂವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
Vijaya Karnataka Web three injured
ಆಟೊ ಪಲ್ಟಿ: ಮೂವರಿಗೆ ಗಾಯ


ಹುಣಸೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಗೂಡ್ಸ್‌ ಆಟೊವೊಂದು ಬಾಳೆ ಕಾಡು ತಿರುವಿನಲ್ಲಿ ಮಗುಚಿದ ಪರಿಣಾಮ ಆಟೋ ಚಾಲಕ ಸೇರಿದಂತೆ ಮೂವರು ಆಟೊರಿಕ್ಷಾದ ಅಡಿಗೆ ಸಿಲುಕಿಕೊಂಡು ಮೇಲೆ ಬರಲಾಗದೆ ಪರದಾಡುತ್ತಿದ್ದರು. ಅದೇ ದಾರಿಯಲ್ಲಿ ಆಟೋ ಪ್ರಯಾಣಿಕರನ್ನು ಕರೆದಕೊಂಡು ಹೋಗುತ್ತಿದ್ದ ಸುಂಟಿಕೊಪ್ಪ ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್‌.ಸಂತೋಷ್‌(ದಿನು) ಆಟೋವನ್ನು ಮೇಲಕ್ಕೆತ್ತಿ ಗಾಯಾಳುಗಳನ್ನು ರಕ್ಷಿಸಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸುಂಟಿಕೊಪ್ಪ ಪೊಲೀಸರು ವಾಹನ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

8 ಎಸ್‌ಎನ್‌ಟಿ 1: ಸುಂಟಿಕೊಪ್ಪ ಸಮೀಪದ ಬಾಳೆ ಕಾಡು ತಿರುವಿನಲ್ಲಿ ಗೂಡ್ಸ್‌ ಆಟೊವೊಂದು ಪಲ್ಟಿಯಾಗಿ ಜಖಂ ಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ