ಆ್ಯಪ್ನಗರ

ಹುಲಿ ದಾಳಿಗೆ ಹಸು, ಕರು ಬಲಿ

ಸೋಮವಾರಪೇಟೆ ತಾಲೂಕು ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಸುಣ್ಣದಕೆರೆಯಲ್ಲಿ ಹುಲಿ ದಾಳಿಗೆ ಗಬ್ಬದ ಹಸು ಮತ್ತು ಕರು ಮೃತಪಟ್ಟಿದೆ.

Vijaya Karnataka 22 Feb 2019, 5:00 am
ಕುಶಾಲನಗರ
Vijaya Karnataka Web tiger attack cow calf killed
ಹುಲಿ ದಾಳಿಗೆ ಹಸು, ಕರು ಬಲಿ


ಸೋಮವಾರಪೇಟೆ ತಾಲೂಕು ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಸುಣ್ಣದಕೆರೆಯಲ್ಲಿ ಹುಲಿ ದಾಳಿಗೆ ಗಬ್ಬದ ಹಸು ಮತ್ತು ಕರು ಮೃತಪಟ್ಟಿದೆ.

ಗ್ರಾಮದ ಎಚ್‌.ಎಂ.ಲೋಕೇಶ್‌ ಅವರಿಗೆ ಸೇರಿದ ಹಸು ಮತ್ತು ಕರುವನ್ನು ಕೊಂದು ಹಾಕಿರುವ ಹುಲಿ ಭಾಗಶಃ ತಿಂದು ಹಾಕಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 20 ದಿನಗಳ ಹಿಂದೆ ಸಮೀಪದ ಬೆಟಗೇರಿ ಗ್ರಾಮದಲ್ಲಿ ಹುಲಿ ಹಸುವೊಂದನ್ನು ಕೊಂದು ತಿಂದು ಹಾಕಿರುವ ಘಟನೆ ಮಾಸುವ ಮುನ್ನವೇ ಈ ಪ್ರಕರಣ ನಡೆದಿದ್ದು ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ