ಆ್ಯಪ್ನಗರ

ಕೊಡಗು: ಕಾಲೇಜಿಗೆ ತೆರಳುತ್ತಿದ್ದ ವೇಳೆ ಹುಲಿ ಪ್ರತ್ಯಕ್ಷ, ಪ್ರಜ್ಞೆ ತಪ್ಪಿದ ವಿದ್ಯಾರ್ಥಿನಿ

ಹಲವು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಪತ್ಯಕ್ಷದರ್ಶಿಗಳು ಹೇಳಿದ್ದರು. ಇದೀಗ ಹುಲಿಯನ್ನು ನೋಡಿ ಹೆದರಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪ್ರಜ್ಞೆ ತಪ್ಪಿರುವ ಘಟನೆ ನಡೆದಿದೆ.

Vijaya Karnataka Web 27 Jan 2021, 7:07 pm
ಶ್ರೀಮಂಗಲ: ಹುಲಿಯನ್ನು ನೋಡಿ ಹೆದರಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪ್ರಜ್ಞೆ ತಪ್ಪಿರುವ ಘಟನೆ ಸಮೀಪ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web ಕೊಡಗು


ವಿದ್ಯಾರ್ಥಿನಿ ತಶ್ಮಾ ದೇಚಮ್ಮ ಹುಲಿಯನ್ನು ದೂರದಿಂದ ನೋಡಿ ಮೂರ್ಚೆ ತಪ್ಪಿದ್ದಾಳೆ. ನಂತರ ಸ್ಥಳೀಯರು ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಕಾಲೇಜಿಗೆ ತೆರಳುತ್ತಿದ್ದ ಸಂಧರ್ಭ ಮಚ್ಚಮಾಡ ಕಾರ್ಯಪ್ಪ ಎಂಬವರ ತೋಟಕ್ಕೆ ಹುಲಿ ನುಗ್ಗುತ್ತಿರುವುದನ್ನು ನೋಡಿ ತಶ್ಮಾ ಹೆದರಿ ಪ್ರಜ್ಜೆ ತಪ್ಪಿದ್ದಾಳೆ.

ಹಲವು ದಿನಗಳಿಂದ ಇಲ್ಲಿ ಹುಲಿ ಸಂಚಾರವನ್ನು ಸಾರ್ವಜನಿಕರು ಗಮನಿಸಿದ್ದಾರೆ. ಇದರಿಂದ ಈ ವ್ಯಾಪ್ತಿಯ ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ಭಾಗದಲ್ಲಿ ಹುಲಿ ದಾಳಿಗೆ ಜಾನುವಾರುಗಳು ಸಹ ಬಲಿಯಗುತ್ತಿದ್ದು ಆದಷ್ಟು ಬೇಗ ಶಾಶ್ವತ ಪರಿಹಾರಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೈಸೂರು: ನಾಗರಹೊಳೆಯಲ್ಲಿ 6 ಹೊಸ ಪಕ್ಷಿ ಪ್ರಭೇದಗಳು ಪತ್ತೆ..! ಪ್ರಥಮ ಪಕ್ಷಿ ಸಮೀಕ್ಷೆಯಲ್ಲಿ ಬಹಿರಂಗ

ಮಡಿಕೇರಿ ಕಾಲೇಜಿನಲ್ಲಿಜೀವನ ಕೌಶಲ್ಯ ತರಬೇತಿ
ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್‌ ಕ್ರಾಸ್‌ ಘಟಕ, ರೆಡ್‌ ರಿಬ್ಬನ್‌ ಕ್ಲಬ್‌ ಮತ್ತು ಯುವಜನ ಸೇವಾ ಇಲಾಖೆಯ ಯುವ ಸ್ಪಂದನ ಇಲಾಖೆ ಸಂಯುಕ್ತ ಆಶ್ರಯದಲ್ಲಿಕಾಲೇಜಿನ ಸಭಾಂಗಣದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು.

ನದಿಯಲ್ಲಿ ಹುಲಿಯ ಸ್ವಚ್ಛಂದ ಈಜು : ಸುರಕ್ಷತೆ ಮರೆತು ವ್ಯಾಘ್ರನ ಸಮೀಪ ಹೋಗಿ ದುರ್ವತನೆ ತೋರಿದ ಯುವಕರು!

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ ಚಿತ್ರಾ. ವೈ ವಹಿಸಿದ್ದರು. ಕಾರ‍್ಯಕ್ರಮದ ಉದ್ದೇಶದ ಬಗ್ಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ದಯಾನಂದ.ಕೆ.ಸಿ.ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊಡಗು ಜಿಲ್ಲಾಯುವಸ್ಪಂದನದ ಕ್ಷೇತ್ರ ಸಂಪರ್ಕ ಅಧಿಕಾರಿ ಯೆಂಕೊಬ ಜೀವನ ಕೌಶ್ಯಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಹುಲಿ ಬಾಯಲ್ಲಿ ಪ್ಲಾಸ್ಟಿಕ್ ಬಾಟಲ್..! ಅರಣ್ಯದಲ್ಲಿ ವನ್ಯಜೀವಿಗಳ ಹೊಟ್ಟೆ ಸೇರುತ್ತಿದೆ ವಿಷ..!

ಕೊಡಗು ಜಿಲ್ಲಾಯುವ ಪರಿವರ್ತಕ ಮಾಲಾ.ವಿ.ಎಸ್‌ ಯುವ ಸ್ಪಂದನದ ನಾನಾ ಸವಲತ್ತುಗಳನ್ನು ವಿವರಿಸಿದರು. ಕಾರ‍್ಯಕ್ರಮದಲ್ಲಿಯುವಸ್ಪಂದನ ವಿಭಾಗದ ಹರ್ಷಿತಾ, ಅರುಣ್‌ ಹಾಗೂ ಕಾಲೇಜಿನ ಎಲ್ಲಾಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ