ಆ್ಯಪ್ನಗರ

ಹುಲಿ ಸೆರೆಗೆ ಗ್ರಾಮಸ್ಥರ ಒತ್ತಾಯ

ಗ್ರಾಮ ವ್ಯಾಪ್ತಿಯಲ್ಲಿ ಹುಲಿಯ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದು, ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಸಿ.ಎ ಹಂಸ ಆರೋಪಿಸಿದ್ದಾರೆ.

Vijaya Karnataka 30 Dec 2017, 5:15 am
ಸಿದ್ದಾಪುರ: ಗ್ರಾಮ ವ್ಯಾಪ್ತಿಯಲ್ಲಿ ಹುಲಿಯ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದು, ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಸಿ.ಎ ಹಂಸ ಆರೋಪಿಸಿದ್ದಾರೆ.
Vijaya Karnataka Web tiger villagers insist on arrest
ಹುಲಿ ಸೆರೆಗೆ ಗ್ರಾಮಸ್ಥರ ಒತ್ತಾಯ


ಕಳೆದ ಎರಡು ತಿಂಗಳಿಂದ ಮಾಲ್ದಾರೆ,ಬಜಕೊಲ್ಲಿ,ಮಟಂ,ಬಾಡಗ,ಸಿದ್ದಾಪುರ ಸುತ್ತಮುತ್ತ ಗ್ರಾಮ ಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, 20ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಆದರೂ ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಬಜೆಕೊಲ್ಲಿಯ ಆಲೇತೋಪ್ ಕಾಫಿ ತೋಟದಲ್ಲಿ ಐದು ಜಾನುವಾರುಗಳು ಬಲಿಯಾಗಿದೆ. ಬಜೆಕೊಲ್ಲಿ ನಿವಾಸಿ ಮೊಹಮ್ಮದ್ ಎಂಬುವರಿಗೆ ಸೇರಿದ ಹಸು ಸೇರಿದಂತೆ ಇತರ 4 ಜಾನುವಾರು ಗಳನ್ನು ಮೇಯಲು ಬಿಡುತ್ತಿದ್ದರು. ಎಂದಿನಂತೆ ಸಂಜೆ ಹಿಂತಿರುಗಿ ಬಂದಿಲ್ಲ ಎನ್ನಲಾಗಿದೆ. ಇನ್ನು ವಯಸ್ಸಾದ ಹಿನ್ನೆಲೆಯಲ್ಲಿ ಮೊಹಮ್ಮದ್ ಸಾಕುತ್ತಿದ್ದ ಜಾನುವಾರುಗಳನ್ನು ರಸ್ತೆಯ ಬದಿಯಲ್ಲಿಯೇ ದಿನಂಪ್ರತಿ ಮೇಯಸಲು ಬಿಡುತ್ತಿದ್ದರು ಬಿಟ್ಟಂತಹ ಹಸುಗಳು 20 ದಿನ ಕಳೆದರೂ ಹಿಂತಿರುಗಿ ಬರಲಿಲ್ಲ ಎಂದು ಹೇಳಿದರು.

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೊಳೆತ ದುರ್ವಾಸನೆ ಬರುವುದನ್ನು ಗಮನಿಸಿ ತೋಟದ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಾಣುವಾರು ಕಾಣೆಯಾಗಿದ್ದ ಮೊಹಮದ್ದ ಅವರು ಮಕ್ಕಳು ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಐದು ಜಾನುವಾರುಗಳನ್ನು ಹುಲಿಯು ತಿಂದು ಅಸ್ಥಿಪಂಜರಗಳನ್ನು ಅಲ್ಲೆ ಬಿಟ್ಟಿದ್ದು ಕಂಡು ಬಂದಿದೆ. ಕಾಡಾನೆಗಳ ಹಾವಳಿ ಯಿಂದ ಇದು ತಿಳಿಯುವುದು ತಡವಾಗಿದೆ ಎಂದರು.

ಇತ್ತ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾನುವಾರು ಕಳೆದು ಕೊಂಡ ಕುಟುಂಬಕ್ಕೆ ಪರಿಹಾರ ನೀಡಬೇಕು. ಹುಲಿ ಸೆರೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜಾನುವಾರು ಕಳೆದುಕೊಂಡ ಮೊಹಮ್ಮದ್ ಎಂಬುವರ ಮನೆಗೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದಾಲಿ, ಕುನ್ನಿಮಹಮ್ಮದ್ ಕಬೀರ್ ಅಶ್ರಫ್ ನಿಜಾಮ್, ರಾಜು. ಸತೀಶ್, ರವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ