ಮಡಿಕೇರಿ
ಭೂಕುಸಿತಕ್ಕೆ ಒಳಗಾಗಿರುವ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ನಾಲ್ಕು ದಿನಗಳ ನಂತರ ಒಂದು ಶವ ಸೋಮವಾರ ಪತ್ತೆಯಾಗಿದೆ.
ಪತ್ತೆಯಾಗಿರುವ ಶವ ಪ್ರಭು ಎನ್ನುವವರ ಪತ್ನಿ ಕೆ.ಪಿ. ಅನಸೂಯ (45) ಅವರದ್ದು ಎಂದು ಗುರುತಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಮುಖ್ಯರಸ್ತೆಯಿಂದ ಸುಮಾರು 6 ಕಿ.ಮೀ. ದೂರದಲ್ಲಿ ಅಂದಾಜು 500ಕ್ಕೂ ಅಧಿಕ ಎಕರೆಗಳಷ್ಟು ಜಾಗದಲ್ಲಿ ಬೆಟ್ಟ ಕುಸಿದಿದ್ದು, ಕಾಲಿಟ್ಟಲೆಲ್ಲ ಹೂತುಕೊಳ್ಳುವ ರೀತಿಯಲ್ಲಿ ಕೆಸರಿನ ಸ್ಥಿತಿ ಇರುವುದರಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ಪ್ರದೇಶದಲ್ಲಿ ಮನೆ, ತೋಟ ಇತ್ತು ಎಂದು ಸ್ಥಳೀಯರು ಹೇಳುತ್ತಾರಾದರೂ ದುರ್ಘಟನೆಯಿಂದಾಗಿ ಯಾವುದೇ ಕುರುಹು ಕಾಣದಂತಾಗಿದೆ. ಸ್ಥಳೀಯರಾದ ಹರೀಶ್ 8 ತಿಂಗಳ ಗರ್ಭಿಣಿ ಪತ್ನಿ ವೀಣಾ ಸೇರಿದಂತೆ ತಮ್ಮ ಕುಟುಂಬದ ಶಂಕರ, ಅಮ್ಮು ಹಾಗೂ ಲೀಲಾ ಎಂಬುವವರನ್ನು ಕಳೆದುಕೊಂಡಿದ್ದು, ಅವರ ರೋದನ ಎಂಥವರ ಮನಸ್ಸನ್ನೂ ಕರಗಿಸುವಂತಿದೆ.
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡಿದ್ದಾರೆ. ಘಟನೆ ನಡೆದಿರುವ ಪ್ರದೇಶ ತೀರಾ ದುರ್ಗಮವಾಗಿರುವುದರಿಂದ ಯಂತ್ರಗಳ ಮೂಲಕವೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ವರ್ಷ ಮಕ್ಕಂದೂರು, ಮುಕ್ಕೋಡ್ಲು ಭಾಗದಲ್ಲಿ ನಡೆದಿದ್ದಂತೆಯೇ ಇಲ್ಲಿಯೂ ಭಯಾನಕ ಭೂಕುಸಿತ ಸಂಭವಿಸಿದೆ.
ಸಹಜ ಸ್ಥಿತಿಯತ್ತ ಭಾಗಮಂಡಲ
5 ದಿನಗಳ ಕಾಲ ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಭಾಗಮಂಡಲ ಈಗ ಸಹಜ ಸ್ಥಿತಿಗೆ ಬರುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಇಳಿಮುಖವಾಗಿದೆ. ಕಾವೇರಿ, ಕನ್ನಿಕೆ ನದಿಗಳು ತ್ರಿವೇಣಿ ಸಂಗಮದ ಮಟ್ಟಕ್ಕೆ ಹರಿಯುತ್ತಿದೆ. ಸೋಮವಾರ ಭಾಗಮಂಡಲದಲ್ಲಿ ಸಂತೆಯ ದಿನವಾಗಿದ್ದು, ಪೇಟೆಗೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.
ಸಂಚಾರ ಪುನಾರಂಭ: ಕುಶಾಲನಗರದಲ್ಲೂ ಪ್ರವಾಹ ಇಳಿಮುಖವಾಗುತ್ತಿದೆ. ಮೈಸೂರು ರಸ್ತೆ ಭಾನುವಾರವೇ ಸಂಚಾರಕ್ಕೆ ತೆರೆದುಕೊಂಡರೆ, ಮಡಿಕೇರಿ ರಸ್ತೆಯಲ್ಲಿ ಸೋಮವಾರ ಬೆಳಗ್ಗೆಯಿಂದ ವಾಹನ ಸಂಚಾರ ಆರಂಭವಾಗಿದೆ. ಸಂತ್ರಸ್ತರು ತಮ್ಮ ಮನೆ, ಅಂಗಡಿ, ಕಚೇರಿಗಳಲ್ಲಿ ಸಂಗ್ರಹವಾಗಿರುವ ಕೆಸರು ಮಣ್ಣು ಶುಚಿ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ರಸ್ತೆ ಬಂದ್: ಮಳೆಯಿಂದಾಗಿ ಜಿಲ್ಲೆಯಲ್ಲಿ 6 ರಸ್ತೆಗಳು ಬಂದ್ ಆಗಿವೆ. ಮಡಿಕೇರಿ-ವಿರಾಜಪೇಟೆ, ಸಿದ್ದಾಪುರ-ಕರಡಿಗೋಡು, ಮಡಿಕೇರಿ-ವಿರಾಜಪೇಟೆ- ಮಾಕುಟ್ಟ, ಮೂರ್ನಾಡು-ನಾಪೋಕ್ಲು, ಸಿದ್ದಾಪುರ-ಕೊಂಡಂಗೇರಿ, ಗಾಳಿಬೀಡು-ಪಾಟಿ-ಕಾಲೂರು ರಸ್ತೆಗಳಲ್ಲಿ ಪ್ರಸ್ತುತ ವಾಹನ ಸಂಚಾರ ಇರುವುದಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಸಾಮಾನ್ಯ ಮಳೆ: ಕೊಡಗಿನಲ್ಲಿ ಸೋಮವಾರದಿಂದ 5 ದಿನಗಳ ಕಾಲ ಸಾಮಾನ್ಯ ಮಳೆಯಾಗಲಿದೆ. ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿರುವುದಾಗಿ ಜಿಲ್ಲಾಡಳಿತ ಹೇಳಿದೆ. ಜಿಲ್ಲೆಯಲ್ಲಿ ಈಗಾಗಲೇ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಆದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಇನ್ನೂ 2 ದಿನ ರಜೆ
ಜಿಲ್ಲೆಯ ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ಮತ್ತೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಆ.13 ಮತ್ತು ಆ. 14ರಂದು ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ. ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಕೆಲವು ರಸ್ತೆ ಸಂಪರ್ಕ ಕಡಿತ ಆಗಿರುವುದರಿಂದ ಮತ್ತು ಕೆಲವು ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆದಿರುವುದರಿಂದ ರಜೆ ಘೋಷಣೆ ಮಾಡಲಾಗಿದೆ.
8 ಗಂಟೆಯ ಸುಮಾರಿಗೆ ನಾನು ಹೊರಗೆ ಹೋಗಿದ್ದೆ. ಅಷ್ಟರಲ್ಲಿ ಗುಡುಗದಂತೆ ಜೋರು ಶಬ್ದ ಬಂತು. ವಾಪಸ್ ಬಂದು ನೋಡುವಾಗ ಈ ಪರಿಸ್ಥಿತಿ ಆಗಿದೆ. ಮನೆಯ ಒಂದೇ ಕೋಣೆಯಲ್ಲಿ ಪತ್ನಿ ಸೇರಿ ನಾಲ್ವರು ಇದ್ದರು. ಅವರು ಏನಾಗಿದ್ದಾರೆ ಎನ್ನುವುದೇ ಇನ್ನೂ ಗೊತ್ತಿಲ್ಲ.
-ಹರೀಶ್, ತೋರ ಗ್ರಾಮದ ನಿವಾಸಿ
ತೋರದ ಹೊಸ ಮನೆ ಮಂಗಳವಾರದ ಪ್ರವಾಹದಲ್ಲಿ ಮುಳುಗಡೆ ಅದ ಕಾರಣ ಗ್ರಾಮದ ಬೆಟ್ಟದ ಮೇಲಿನ ಹಳೆ ಮನೆಗೆ ಸ್ಥಳಾಂತರವಾಗಿದ್ದೆವು. ದುರಂತದ ದಿನ ನಾನು ತೋರದ ಕಡೆ ಹೋಗಿದ್ದೆ. ಅಲ್ಲಿಂದ ವಾಪಸ್ ಬರುವಾಗ ಗ್ರಾಮದ ಬೇರೊಬ್ಬರ ಮನೆಗೆ ಹೋಗಿದ್ದೆ. ಐದು ನಿಮಿಷದ ವ್ಯತ್ಯಾಸ, ನಾನು ಮನೆಗೆ ಹೋಗಬೇಕಿತ್ತು. ಮನೆ ಸಮೀಪ ತೆರಳಿದಾಗ ಭಾರಿ ಶಬ್ದ ಕೇಳಿ ಬಂತು. ಬೆಟ್ಟ ಜಾರಿಕೊಂಡು ಬರುತ್ತಿರುವುದು ಕಾಣಿಸಿತು, ನಾನು ಅಲ್ಲಿಂದ ಓಡಿದೆ. ಹಿಂದೆ ಬೆಟ್ಟ ಬರುತ್ತಿತ್ತು. ಹೇಗೊ ನಾನು ಬದುಕಿಕೊಂಡೆ. ಆದರೆ, ಮನೆಯೊಂದಿಗೆ ಪತ್ನಿ, ತಾಯಿ, ಮಕ್ಕಳು ಎಲ್ಲವನ್ನೂ ಕಳೆದುಕೊಂಡೆ, ಕಾಫಿ ತೋಟವೂ ಹೋಯಿತು.
-ಪ್ರಭು, ತೋರ ಗ್ರಾಮ
ಭೂಕುಸಿತಕ್ಕೆ ಒಳಗಾಗಿರುವ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ನಾಲ್ಕು ದಿನಗಳ ನಂತರ ಒಂದು ಶವ ಸೋಮವಾರ ಪತ್ತೆಯಾಗಿದೆ.
ಪತ್ತೆಯಾಗಿರುವ ಶವ ಪ್ರಭು ಎನ್ನುವವರ ಪತ್ನಿ ಕೆ.ಪಿ. ಅನಸೂಯ (45) ಅವರದ್ದು ಎಂದು ಗುರುತಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಮುಖ್ಯರಸ್ತೆಯಿಂದ ಸುಮಾರು 6 ಕಿ.ಮೀ. ದೂರದಲ್ಲಿ ಅಂದಾಜು 500ಕ್ಕೂ ಅಧಿಕ ಎಕರೆಗಳಷ್ಟು ಜಾಗದಲ್ಲಿ ಬೆಟ್ಟ ಕುಸಿದಿದ್ದು, ಕಾಲಿಟ್ಟಲೆಲ್ಲ ಹೂತುಕೊಳ್ಳುವ ರೀತಿಯಲ್ಲಿ ಕೆಸರಿನ ಸ್ಥಿತಿ ಇರುವುದರಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ಪ್ರದೇಶದಲ್ಲಿ ಮನೆ, ತೋಟ ಇತ್ತು ಎಂದು ಸ್ಥಳೀಯರು ಹೇಳುತ್ತಾರಾದರೂ ದುರ್ಘಟನೆಯಿಂದಾಗಿ ಯಾವುದೇ ಕುರುಹು ಕಾಣದಂತಾಗಿದೆ. ಸ್ಥಳೀಯರಾದ ಹರೀಶ್ 8 ತಿಂಗಳ ಗರ್ಭಿಣಿ ಪತ್ನಿ ವೀಣಾ ಸೇರಿದಂತೆ ತಮ್ಮ ಕುಟುಂಬದ ಶಂಕರ, ಅಮ್ಮು ಹಾಗೂ ಲೀಲಾ ಎಂಬುವವರನ್ನು ಕಳೆದುಕೊಂಡಿದ್ದು, ಅವರ ರೋದನ ಎಂಥವರ ಮನಸ್ಸನ್ನೂ ಕರಗಿಸುವಂತಿದೆ.
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡಿದ್ದಾರೆ. ಘಟನೆ ನಡೆದಿರುವ ಪ್ರದೇಶ ತೀರಾ ದುರ್ಗಮವಾಗಿರುವುದರಿಂದ ಯಂತ್ರಗಳ ಮೂಲಕವೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ವರ್ಷ ಮಕ್ಕಂದೂರು, ಮುಕ್ಕೋಡ್ಲು ಭಾಗದಲ್ಲಿ ನಡೆದಿದ್ದಂತೆಯೇ ಇಲ್ಲಿಯೂ ಭಯಾನಕ ಭೂಕುಸಿತ ಸಂಭವಿಸಿದೆ.
ಸಹಜ ಸ್ಥಿತಿಯತ್ತ ಭಾಗಮಂಡಲ
5 ದಿನಗಳ ಕಾಲ ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಭಾಗಮಂಡಲ ಈಗ ಸಹಜ ಸ್ಥಿತಿಗೆ ಬರುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಇಳಿಮುಖವಾಗಿದೆ. ಕಾವೇರಿ, ಕನ್ನಿಕೆ ನದಿಗಳು ತ್ರಿವೇಣಿ ಸಂಗಮದ ಮಟ್ಟಕ್ಕೆ ಹರಿಯುತ್ತಿದೆ. ಸೋಮವಾರ ಭಾಗಮಂಡಲದಲ್ಲಿ ಸಂತೆಯ ದಿನವಾಗಿದ್ದು, ಪೇಟೆಗೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.
ಸಂಚಾರ ಪುನಾರಂಭ: ಕುಶಾಲನಗರದಲ್ಲೂ ಪ್ರವಾಹ ಇಳಿಮುಖವಾಗುತ್ತಿದೆ. ಮೈಸೂರು ರಸ್ತೆ ಭಾನುವಾರವೇ ಸಂಚಾರಕ್ಕೆ ತೆರೆದುಕೊಂಡರೆ, ಮಡಿಕೇರಿ ರಸ್ತೆಯಲ್ಲಿ ಸೋಮವಾರ ಬೆಳಗ್ಗೆಯಿಂದ ವಾಹನ ಸಂಚಾರ ಆರಂಭವಾಗಿದೆ. ಸಂತ್ರಸ್ತರು ತಮ್ಮ ಮನೆ, ಅಂಗಡಿ, ಕಚೇರಿಗಳಲ್ಲಿ ಸಂಗ್ರಹವಾಗಿರುವ ಕೆಸರು ಮಣ್ಣು ಶುಚಿ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ರಸ್ತೆ ಬಂದ್: ಮಳೆಯಿಂದಾಗಿ ಜಿಲ್ಲೆಯಲ್ಲಿ 6 ರಸ್ತೆಗಳು ಬಂದ್ ಆಗಿವೆ. ಮಡಿಕೇರಿ-ವಿರಾಜಪೇಟೆ, ಸಿದ್ದಾಪುರ-ಕರಡಿಗೋಡು, ಮಡಿಕೇರಿ-ವಿರಾಜಪೇಟೆ- ಮಾಕುಟ್ಟ, ಮೂರ್ನಾಡು-ನಾಪೋಕ್ಲು, ಸಿದ್ದಾಪುರ-ಕೊಂಡಂಗೇರಿ, ಗಾಳಿಬೀಡು-ಪಾಟಿ-ಕಾಲೂರು ರಸ್ತೆಗಳಲ್ಲಿ ಪ್ರಸ್ತುತ ವಾಹನ ಸಂಚಾರ ಇರುವುದಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಸಾಮಾನ್ಯ ಮಳೆ: ಕೊಡಗಿನಲ್ಲಿ ಸೋಮವಾರದಿಂದ 5 ದಿನಗಳ ಕಾಲ ಸಾಮಾನ್ಯ ಮಳೆಯಾಗಲಿದೆ. ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿರುವುದಾಗಿ ಜಿಲ್ಲಾಡಳಿತ ಹೇಳಿದೆ. ಜಿಲ್ಲೆಯಲ್ಲಿ ಈಗಾಗಲೇ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಆದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಇನ್ನೂ 2 ದಿನ ರಜೆ
ಜಿಲ್ಲೆಯ ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ಮತ್ತೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಆ.13 ಮತ್ತು ಆ. 14ರಂದು ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ. ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಕೆಲವು ರಸ್ತೆ ಸಂಪರ್ಕ ಕಡಿತ ಆಗಿರುವುದರಿಂದ ಮತ್ತು ಕೆಲವು ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆದಿರುವುದರಿಂದ ರಜೆ ಘೋಷಣೆ ಮಾಡಲಾಗಿದೆ.
8 ಗಂಟೆಯ ಸುಮಾರಿಗೆ ನಾನು ಹೊರಗೆ ಹೋಗಿದ್ದೆ. ಅಷ್ಟರಲ್ಲಿ ಗುಡುಗದಂತೆ ಜೋರು ಶಬ್ದ ಬಂತು. ವಾಪಸ್ ಬಂದು ನೋಡುವಾಗ ಈ ಪರಿಸ್ಥಿತಿ ಆಗಿದೆ. ಮನೆಯ ಒಂದೇ ಕೋಣೆಯಲ್ಲಿ ಪತ್ನಿ ಸೇರಿ ನಾಲ್ವರು ಇದ್ದರು. ಅವರು ಏನಾಗಿದ್ದಾರೆ ಎನ್ನುವುದೇ ಇನ್ನೂ ಗೊತ್ತಿಲ್ಲ.
-ಹರೀಶ್, ತೋರ ಗ್ರಾಮದ ನಿವಾಸಿ
ತೋರದ ಹೊಸ ಮನೆ ಮಂಗಳವಾರದ ಪ್ರವಾಹದಲ್ಲಿ ಮುಳುಗಡೆ ಅದ ಕಾರಣ ಗ್ರಾಮದ ಬೆಟ್ಟದ ಮೇಲಿನ ಹಳೆ ಮನೆಗೆ ಸ್ಥಳಾಂತರವಾಗಿದ್ದೆವು. ದುರಂತದ ದಿನ ನಾನು ತೋರದ ಕಡೆ ಹೋಗಿದ್ದೆ. ಅಲ್ಲಿಂದ ವಾಪಸ್ ಬರುವಾಗ ಗ್ರಾಮದ ಬೇರೊಬ್ಬರ ಮನೆಗೆ ಹೋಗಿದ್ದೆ. ಐದು ನಿಮಿಷದ ವ್ಯತ್ಯಾಸ, ನಾನು ಮನೆಗೆ ಹೋಗಬೇಕಿತ್ತು. ಮನೆ ಸಮೀಪ ತೆರಳಿದಾಗ ಭಾರಿ ಶಬ್ದ ಕೇಳಿ ಬಂತು. ಬೆಟ್ಟ ಜಾರಿಕೊಂಡು ಬರುತ್ತಿರುವುದು ಕಾಣಿಸಿತು, ನಾನು ಅಲ್ಲಿಂದ ಓಡಿದೆ. ಹಿಂದೆ ಬೆಟ್ಟ ಬರುತ್ತಿತ್ತು. ಹೇಗೊ ನಾನು ಬದುಕಿಕೊಂಡೆ. ಆದರೆ, ಮನೆಯೊಂದಿಗೆ ಪತ್ನಿ, ತಾಯಿ, ಮಕ್ಕಳು ಎಲ್ಲವನ್ನೂ ಕಳೆದುಕೊಂಡೆ, ಕಾಫಿ ತೋಟವೂ ಹೋಯಿತು.
-ಪ್ರಭು, ತೋರ ಗ್ರಾಮ