ಆ್ಯಪ್ನಗರ

ತೋರ: ಮತ್ತೊಂದು ಶವ ಪತ್ತೆ

ತೋರ ಗ್ರಾಮದಲ್ಲಿ 10 ದಿನಗಳ ಹಿಂದೆ ಸಂಭವಿಸಿದ ಭೂಕುಸಿತದ ವೇಳೆ ನಾಪತ್ತೆಯಾಗಿದ್ದವರ ಪೈಕಿ ಭಾನುವಾರ ಮತ್ತೊಂದು ಶವ ಪತ್ತೆಯಾಗಿದೆ.

Vijaya Karnataka 19 Aug 2019, 5:00 am
ಮಹಾ ಮಳೆಗೆ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ
Vijaya Karnataka Web torah another corpse found
ತೋರ: ಮತ್ತೊಂದು ಶವ ಪತ್ತೆ


ವಿರಾಜಪೇಟೆ:
ತೋರ ಗ್ರಾಮದಲ್ಲಿ 10 ದಿನಗಳ ಹಿಂದೆ ಸಂಭವಿಸಿದ ಭೂಕುಸಿತದ ವೇಳೆ ನಾಪತ್ತೆಯಾಗಿದ್ದವರ ಪೈಕಿ ಭಾನುವಾರ ಮತ್ತೊಂದು ಶವ ಪತ್ತೆಯಾಗಿದೆ.

ಮೃತರನ್ನು ಶಂಕರ (60) ಎಂದು ಗುರುತಿಸಲಾಗಿದೆ. ಕಾರ್ಯಾಚರಣೆ ತಂಡಗಳಿಗೆ ಈ ಮೃತ ದೇಹ ತೀವ್ರ ಕೊಳೆತ ಸ್ಥಿತಿಯಲ್ಲಿ ಮಧ್ಯಾಹ್ನದ ವೇಳೆಗೆ ಕಂಡುಬಂದಿದೆ. ಶವವನ್ನು ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಪಟ್ಟಣದ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ಮಾಡಲಾಯಿತು.

ತೋರ ಗ್ರಾಮದ ಸುಮಾರು 500 ಎಕರೆ ದುರ್ಗಮ ಪ್ರದೇಶದಲ್ಲಿ ನಿರಂತರ ಹರಿಯುತ್ತಿರುವ ನೀರು, ಕೆಸರಿನ ಮಧ್ಯೆ ರಕ್ಷ ಣಾ ತಂಡಗಳು ಶ್ರಮವಹಿಸಿ ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ ಪ್ರಭು ಎಂಬುವವರ ಪತ್ನಿ ಅನಸೂಯ, ಅಪ್ಪ್ಪು, ಇದೀಗ ಶಂಕರ ಅವರ ದೇಹ ಪತ್ತೆ ಆಗಿದೆ. ಪ್ರಭು ಅವರ ಇಬ್ಬರು ಮಕ್ಕಳು ಮತ್ತು ತಾಯಿ. ಅಲ್ಲದೇ, ಹರೀಶ್‌ ಎಂಬುವವರ ಪತ್ನಿ, ಮೃತ ಅಪ್ಪು ಪತ್ನಿ ಲೀಲಾ ಸೇರಿ ಐವರ ಪತ್ತೆಗಾಗಿ ಶೋಧ ಮುಂದುವರಿದಿದೆ.

ಶಂಕರ ಮೃತದೇಹ ಪತ್ತೆಯಾಗುವುದರೊಂದಿಗೆ ಈ ವರ್ಷದ ಪ್ರಾಕೃತಿಕ ವಿಕೋಪದಲ್ಲಿ ಕೊಡಗಿನಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ