ಆ್ಯಪ್ನಗರ

ಪ್ರವಾಸೋದ್ಯಮ ದಿನಾಚರಣೆ

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಶುಕ್ರವಾರ ಪ್ರವಾಸಿ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

Vijaya Karnataka 28 Sep 2019, 5:00 am
ಮಡಿಕೇರಿ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಶುಕ್ರವಾರ ಪ್ರವಾಸಿ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
Vijaya Karnataka Web MDK27JAY18_19


ಮ್ಯಾರಥಾನ್‌, ಸೈಕಲ್‌ ಮತ್ತು ಬೈಕ್‌ ರಾರ‍ಯಲಿ ಜತೆಗೆ ನಗರದ ಕೋಟೆ ಆವರಣದಲ್ಲಿಶ್ರಮದಾನ ಕಾರ್ಯಕ್ರಮ ನಡೆಯಿತು. ಮ್ಯಾರಥಾನ್‌ ಹಾಗೂ ಬೈಕ್‌ ರಾರ‍ಯಲಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌ ಹಾಗೂ ಇತರರು ಚಾಲನೆ ನೀಡಿದರು. ಸೈಕಲ್‌ ಜಾಥಾಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಮತ್ತು ಚೇಂಬರ್‌ ಆಫ್‌ ಕಾಮರ್ಸ್‌ ಕಾರ‍್ಯದರ್ಶಿ ಮೊಂತಿ ಗಣೇಶ್‌ ಚಾಲನೆ ನೀಡಿದರು.

ಸೈಕಲ್‌ ಜಾಥಾದಲ್ಲಿಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಟ್ರಾವೆಲ್‌ ಕೂರ್ಗ್‌ ಸಂಸ್ಥೆ ಅಧ್ಯಕ್ಷ ಚೈಯ್ಯಂಡ ಸತ್ಯ ಇತರರು ಪಾಲ್ಗೊಂಡು ಗಮನ ಸೆಳೆದರು.

ರಾರ‍ಯಲಿಯು ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿಆರಂಭಗೊಂಡು, ಜನರಲ್‌ ತಿಮ್ಮಯ್ಯ ವೃತ್ತ, ರಾಜಾಸೀಟು ರಸ್ತೆ ಮಾರ್ಗ, ಭಾರತೀಯ ಜೀವ ವಿಮಾ ನಿಗಮ ರಸ್ತೆ, ಪತ್ರಿಕಾ ಭವನ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಕೋಟೆಗೆ ತಲುಪಿತು. ಕೋಟೆ ಆವರಣದಲ್ಲಿಶ್ರಮದಾನವೂ ನಡೆಯಿತು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಮಾತನಾಡಿದರು. ಪ್ರವಾಸೋದ್ಯಮ, ಅರಣ್ಯ ಹಾಗೂ ದುಬಾರೆ ರಿವರ್‌ ರಾರ‍ಯಪ್ಟಿಂಗ್‌ ಅಸೋಷಿಯೇಷನ್‌ನಿಂದ ಸ್ವಸ್ಥ ಸಂಸ್ಥೆಯ 60 ಮಕ್ಕಳನ್ನು ದುಬಾರೆಯಲ್ಲಿರಿವರ್‌ ರಾರ‍ಯಪ್ಟಿಂಗ್‌ ಹಾಗೂ ಆನೆ ಶಿಬಿರಕ್ಕೆ ಕರೆದುಕೊಂಡು ಹೋಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.

ಜಾಥಾದಲ್ಲಿ ಹೋಂ ಸ್ಟೇ ಅಸೋಷಿಯೇಷನ್‌ ಅಧ್ಯಕ್ಷ ಬಿ.ಜಿ.ಅನಂತಶಯನ, ಗ್ರೀನ್‌ ಸಿಟಿ ಫೋರಂ ಅಧ್ಯಕ್ಷ ಜಯಚಿನ್ನಪ್ಪ, ಟ್ರಾವೆಲ್‌ ಕೂರ್ಗ್‌ ಸಂಸ್ಥೆ ಅಧ್ಯಕ್ಷರಾದ ಚೈಯ್ಯಂಡ ಸತ್ಯ, ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಪ್ರಕಾಶ್‌, ಮಾಜಿ ಅಧ್ಯಕ್ಷರಾದ ಜಿ.ಚಿದ್ವಿಲಾಸ್‌, ತಹಸೀಲ್ದಾರ್‌ ಮಹೇಶ್‌, ಪೌರಾಯುಕ್ತರಾದ ಎಂ.ಎಲ್‌.ರಮೇಶ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ