ಆ್ಯಪ್ನಗರ

ಸಂಸ್ಕೃತಿ ಬಿಂಬಿಸುವ ಪ್ರಯತ್ನವಾಗಲಿ

ವಿರಾಜಪೇಟೆ: ಗಣೇಶನ ಹಬ್ಬ ಒಗ್ಗಟ್ಟನ್ನು ಸಾರುವಂತ ಹಬ್ಬವಾಗಿದ್ದು, ಹಬ್ಬಗಳ ಆಚರಣೆಯಿಂದ ಸಮಾಜದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತ ಪ್ರಯತ್ನ ಆಗಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಕಾರ‌್ಯಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದರು.

ವಿಕ ಸುದ್ದಿಲೋಕ 7 Sep 2016, 4:04 am
ವಿರಾಜಪೇಟೆ: ಗಣೇಶನ ಹಬ್ಬ ಒಗ್ಗಟ್ಟನ್ನು ಸಾರುವಂತ ಹಬ್ಬವಾಗಿದ್ದು, ಹಬ್ಬಗಳ ಆಚರಣೆಯಿಂದ ಸಮಾಜದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತ ಪ್ರಯತ್ನ ಆಗಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಕಾರ‌್ಯಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದರು.
Vijaya Karnataka Web transcend the culture
ಸಂಸ್ಕೃತಿ ಬಿಂಬಿಸುವ ಪ್ರಯತ್ನವಾಗಲಿ


ಸಮೀಪದ ಮರಂದೋಡ ಯವಕಪಾಡಿ ವಿನಾಯಕ ಸೇವಾ ಮಂಡಳಿ ವತಿಯಿಂದ ಗೌರಿ-ಗಣೇಶೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗ ಬಾರದು. ಹಿಂದಿನ ದಿನಗಳಲ್ಲಿ 3-4 ಗ್ರಾಮಗಳು ಸೇರಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುತಿದ್ದರು. ಆದರೆ ಇತ್ತಿಚೇಗೆ ಪ್ರತಿ ಗ್ರಾಮಗಳಲ್ಲೂ ಗಣಪತಿಯನ್ನು ಪ್ರತಿಷ್ಠಾಪನೆಮಾಡಿ, ಅದ್ದೂರಿ ಕಾರ್ಯಕ್ರಮಗಳನ್ನು ನಡೆಸುತಿದ್ದಾರೆ. ಹಬ್ಬವನ್ನು ಆಚರಣೆ ಮಾಡುವಾಗ ಎಲ್ಲಾ ಧರ್ಮದವರು ಸೇರಿ ಶಾಂತಿ ಸೌಹರ್ಧತೆಯಿಂದ ಆಚರಿಸುವಂತಾಗಬೇಕು ಎಂದರು.

ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ಮಾತನಾಡಿ, ಹಬ್ಬಗಳನ್ನು ಆಚರಿಸುವ ಸಂದರ್ಭ ಪುರುಷರೊಂದಿಗೆ ಮಹಿಳೆಯರು ಸೇರಿ ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸಂತು ಸುಬ್ರಮಣಿ ಮಾತನಾಡಿ, ಯಾವುದೇ ಹಬ್ಬಗಳನ್ನು ಆಚರಣೆ ಮಾಡಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಟಿರ ರಮೇಶ್, ಗ್ರಾಮದ ಹಿರಿಯರಾದ ಸುಬ್ಬಯ್ಯ, ಕಟ್ಟಿ ಮುತ್ತಪ್ಪ, ಸೇವಾ ಮಂಡಳಿಯ ಬಿ.ಮನು ಮಹೇಶ್, ಬಿ.ನಂದ ಗಿರೀಶ್, ರಹಿನ್ ಕಾರ್ಯಪ್ಪ, ಎ.ರಘು ರಾಜೇಶ್, ಕೆ.ಮಿಲನ್ ಮುತ್ತಣ್ಣ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ