ಆ್ಯಪ್ನಗರ

ಕಂಬದ ಮೇಲೆ ಮರ ಉರುಳಿ ವಿದ್ಯುತ್‌ ಸ್ಥಗಿತ

ಬೇತ್ರಿ ಕಾವೇರಿ ನದಿ ಬಳಿ ವಿದ್ಯುತ್‌ ಕಂಬದ ಮೇಲೆ ಮರ ಉರುಳಿ ಬಿದ್ದು ಕಂಬಗಳು ತುಂಡಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

Vijaya Karnataka 14 Jun 2018, 5:00 am
ಮೂರ್ನಾಡು : ಬೇತ್ರಿ ಕಾವೇರಿ ನದಿ ಬಳಿ ವಿದ್ಯುತ್‌ ಕಂಬದ ಮೇಲೆ ಮರ ಉರುಳಿ ಬಿದ್ದು ಕಂಬಗಳು ತುಂಡಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.
Vijaya Karnataka Web tree breaks onto the pole power breakdown
ಕಂಬದ ಮೇಲೆ ಮರ ಉರುಳಿ ವಿದ್ಯುತ್‌ ಸ್ಥಗಿತ


ಬುಧವಾರ ಬೆಳಗ್ಗೆ ಸುರಿದ ಮಳೆಗೆ ಬೇತ್ರಿ ಸೇತುವೆ ಬಳಿ 33 ಕೆವಿ ಹಾಗೂ 11 ಕೆವಿ ವಿದ್ಯುತ್‌ ಮಾರ್ಗದ ಮೇಲೆ ಮರ ಉರುಳಿ ಬಿದ್ದು ಕಂಬಗಳು ಜಖಂಗೊಂಡು ಹೊಳೆಗೆ ಬಿದ್ದಿವೆ. ಹೊಳೆ ಬದಿಯಲ್ಲಿದ್ದ ಕಂಬದ ಮೇಲೆ ಮರ ಉರುಳಿದ ಪರಿಣಾಮ ಮತ್ತೊಂದು ಬದಿಯಲ್ಲಿದ್ದ ಕಂಬ ತುಂಡಾಗಿ ತಂತಿಗಳು ಹೊಳೆಗೆ ಬಿದ್ದಿದೆ. ಇದರಿಂದ ವಿರಾಜಪೇಟೆ ಮೂರ್ನಾಡು ವಿದ್ಯುತ್‌ ಮಾರ್ಗವು ಕಡಿತಗೊಂಡಿದ್ದು ಮೂರ್ನಾಡು ನಾಪೋಕ್ಲು ವ್ಯಾಪ್ತಿಯ ಪ್ರದೇಶಗಳಿಗೆ ಗುರುವಾರ ವಿದ್ಯುತ್‌ ಸರಬರಾಜು ಸ್ಥಗಿತಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ