ಆ್ಯಪ್ನಗರ

ಮರ ಸಾಗಣೆ ನಿರ್ಬಂಧ: ಮನವಿಗೆ ನಿರ್ಣಯ

ಕೊಡಗು ಜಿಲ್ಲೆಯಲ್ಲಿ ಮರ ಸಾಗಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದನ್ನು ವಾಪಸ್‌ ಪಡೆಯುವಂತೆ ಕೊಡಗು ಜಿಲ್ಲಾ ಮರ ಕೆಲಸ ಮತ್ತು ತಲೆಹೊರೆ ಕಾರ್ಮಿಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

Vijaya Karnataka 23 Jun 2019, 9:13 pm
ಸುಂಟಿಕೊಪ್ಪ: ಕೊಡಗು ಜಿಲ್ಲೆಯಲ್ಲಿ ಮರ ಸಾಗಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದನ್ನು ವಾಪಸ್‌ ಪಡೆಯುವಂತೆ ಕೊಡಗು ಜಿಲ್ಲಾ ಮರ ಕೆಲಸ ಮತ್ತು ತಲೆಹೊರೆ ಕಾರ್ಮಿಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
Vijaya Karnataka Web tree shipping restriction decision on appeal
ಮರ ಸಾಗಣೆ ನಿರ್ಬಂಧ: ಮನವಿಗೆ ನಿರ್ಣಯ


ಸುಂಟಿಕೊಪ್ಪ ಮಾರುಕಟ್ಟೆಯಲ್ಲಿರುವ ತಲೆಹೊರೆ ಕಾರ್ಮಿಕರ ಸಂಘದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಪಿ.ಮುತ್ತುರಾಜ್‌ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ವರ್ಷದ ಅತಿವೃಷ್ಟಿಯಿಂದ ಜಿಲ್ಲೆಯ ಜನತೆಗೆ ಅಪಾರ ನಷ್ಟವಾಗಿದೆ. ಕೇವಲ ಮರಗಳನ್ನು ಸಾಗಿಸುವುದರಿಂ¨ ರಸ್ತೆ ಹಾಳಾಗುತ್ತದೆ ಎಂಬ ಕಲ್ಪನೆ ಸರಿಯಲ್ಲ. ಲೋಕೋಪಯೋಗಿ ಇಲಾಖೆಯಿಂದ ಗುಣಮಟ್ಟದ ರಸ್ತೆ ನಿರ್ಮಿಸದೆ ಇರುವುದು ರಸ್ತೆ ಬದಿಯಲ್ಲಿರುವ ತೋಟದ ಮರದ ರಂಬೆ ಕಡಿಯದೇ ಇರುವುದರಿಂದಲ್ಲೂ ರಸ್ತೆ ಹಾಳಾಗುತ್ತಿದೆ. ಮರ ಸಾಗಣೆಯಿಂದ ರಸ್ತೆ ಹಾಳಾಗುತ್ತದೆ ಎಂಬ ಕಾರಣಕ್ಕೆ ನಿರ್ಬಂಧ ಹೇರಿದ್ದು , ನೂರಾರು ಮರ ಕೆಲಸದ ಕಾರ್ಮಿಕರು ಕೆಲಸವಿಲ್ಲದೆ ಜೀವನ ಸಾಗಿಸಲು ಪರದಾಡುವಂತಾಗಿದೆ. ಮರ ಸಾಗಿಸಲು ಮತ್ತು ಲೋಡ್‌ಗೆ ಅನುಮತಿ ನೀಡಬೇಕು ಸಭೆಯಲ್ಲಿ ಜಿಲ್ಲಾ ಮರ ಕೆಲಸ ಮತ್ತು ತಲೆಹೊರೆ ಕಾರ್ಮಿಕರ ಸಂಘದ ಪ್ರಭಾವ ಕಾರ್ಯದರ್ಶಿ ಕುಟ್ಟಪ್ಪ ನಿರ್ಣಯ ಮಂಡಿಸಿದರು.

ಸಭೆಯಲ್ಲಿ ಕುಶಾಲನಗರ ವ್ಯಾಪ್ತಿಯ ಅಧ್ಯಕ್ಷ ದಾವೂದ್‌, ಪೊನ್ನತ್‌ಮೊಟ್ಟೆಯ ಸುಧೀರ್‌, ಸುಂಟಿಕೊಪ್ಪದ ಅಧ್ಯಕ್ಷ ಬೆಟ್ಟಪ್ಪ,ಉಪಾಧ್ಯಕ್ಷ ಇಲ್ಯಾಸ್‌, ಕಾರ್ಯದರ್ಶಿ ರಶೀದ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ