ಆ್ಯಪ್ನಗರ

ಕೊಡಗು:ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಸ್ನೇಹಿತರೊಂದಿಗೆ ಈಜಲು ತೆರಳಿದ ಇಬ್ಬರು ಯುವಕರು ಗೋಣಿಕೊಪ್ಪಲು ಬಾಳಜಿ ಗ್ರಾಮದಲ್ಲಿ ನೀರುಪಾಲಾಗಿರುವ ಘಟನೆ ನಡೆದಿದೆ. ಒಟ್ಟು 8 ಮಂದಿ ಯುವಕರು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ.

Vijaya Karnataka Web 27 Dec 2020, 7:09 pm
ಗೋಣಿಕೊಪ್ಪಲು: ಸ್ನೇಹಿತರೊಂದಿಗೆ ಈಜಲು ತೆರಳಿದ ಇಬ್ಬರು ಯುವಕರು ಗೋಣಿಕೊಪ್ಪಲು ಸಮೀಪದ ಬಾಳಜಿ ಗ್ರಾಮದಲ್ಲಿ ನೀರುಪಾಲಾಗಿದ್ದಾರೆ. ಮಂಡೆಗಡ ಬೋಪಯ್ಯ ಮತ್ತು ಶೀಲಾ ದಂಪತಿ ಪುತ್ರ ಬೋಪಣ್ಣ(18) ಮತ್ತು ಗುತ್ತಿಗೆದಾರ ಅಣ್ಣಪ್ಪ ಅವರ ಪುತ್ರ ಮನೇಷ್(17 )ಮೃತರು.
Vijaya Karnataka Web kodagu


ಅಬ್ದುಲ್ಲ, ರಿಯಾಜ್, ಹೆಮಂತ್, ಬೋಪಣ್ಣ, ಮನೇಷ್, ಚಂಗಪ್ಪ ಹಾಗೂ ಅಂಸದ್ ಸೇರಿದಂತೆ ಎಂಟು ಯುವಕರು ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮೈದಾನದಿಂದ ಹೊರಟ ಯುವಕರ ತಂಡ ಜೋಡುಬೀಟಿ ಸಮೀಪದ ಬಾಳಜಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಹರಿಯುತ್ತಿರುವ ಕೀರೆ ಹೂಳೆಗೆ ಈಜಲು ತೆರಳಿದರು.

ಈಜುತ್ತಾ ದಣಿದ ಯುವಕರ ತಂಡದಲ್ಲಿ ಕೆಲವರು ದಡಹತ್ತಿ ಕುಳಿತುಕೊಂಡಿದ್ದರು. ಹೇಮಂತ್, ಬೋಪಣ್ಣ, ಮನೇಷ್ ಈ ಮೂವರು ನದಿಯಲ್ಲಿ ಈಜುತ್ತಿದ್ದರು. ಆಳ ಪರೀಕ್ಷಿಸಲೆಂದು ನೀರಿನಲ್ಲಿ ನಡೆಯುವಾಗ ಕಲ್ಲುಬಂಡೆಯೊಂದರ ಮೇಲೆ ಕಾಲಿಟ್ಟು ಕಾಲುಜಾರಿ ಬೋಪಣ್ಣ ನೀರಿನ ಆಳಕ್ಕೆ ಬಿದ್ದಿದ್ದಾನೆ.

ಖಗೋಳ ವಿಸ್ಮಯಗಳ ವರ್ಷ: 2021ರಲ್ಲಿ 4 ಸೂಪರ್‌ ಮೂನ್.. 4 ಗ್ರಹಣ.. 3 ಉಲ್ಕಾಪಾತ..!

ಇವನನ್ನು ರಕ್ಷಿಸಲು ತೆರಳಿದ ಮನೇಷ್ ಕೂಡ ಮುಳುಗಿದ್ದಾನೆ. ಮತ್ತೊಬ್ಬ ಸ್ನೇಹಿತ ಹೇಮಂತ್ ಇಬ್ಬರನ್ನು ರಕ್ಷಿಸಲು ತೆರಳಿದಾಗ ನೀರಿನಲ್ಲಿ ಮೂವರೂ ಮುಳುಗಿದ್ದಾರೆ. ಇದನ್ನು ನೋಡಿ ಉಳಿದ ಸ್ನೇಹಿತರು ಕಿರುಚಿಕೊಂಡಿದ್ದಾರೆ. ಮಕ್ಕಳು ಕಿರುಚುವ ಶಬ್ದಕ್ಕೆ ಸಮೀಪದಲ್ಲೇ ಇದ್ದ ಅಸ್ಸಾಂ ಮೂಲದ ಕಾರ್ಮಿಕರು ಓಡಿಬಂದು ನೀರಿಗೆ ಧುಮುಕಿ ರಕ್ಷಿಸಲು ಮುಂದಾದಾಗ ಹೇಮಂತ್‌ನನ್ನು ಮಾತ್ರ ಉಳಿಸಲು ಸಾಧ್ಯವಾಗಿದೆ. ಎಂದು ಮೃತಪಟ್ಟವರ ಸ್ನೇಹಿತ ಚೆಂಗಪ್ಪ ವಿಜಯಕರ್ನಾಟಕಕ್ಕೆ ಮಾಹಿತಿ ನೀಡಿದ್ದಾನೆ.

ಕುರುಬರ ಎಸ್‌ಟಿ ಹೋರಾಟಕ್ಕೆ ಎಲ್ಲಾ ಸಮುದಾಯ, ಪಕ್ಷಗಳ ಬೆಂಬಲ ಅಗತ್ಯ: ಎಚ್. ವಿಶ್ವನಾಥ್

ಸ್ಥಳಕ್ಕೆ ಗೋಣಿಕೊಪ್ಪಲು ವೃತ್ತನಿರೀಕ್ಷಕ ರಾಮರೆಡ್ಡಿ, ಠಾಣಾಧಿಕಾರಿ ಸುಬ್ಬಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಯುವಕರ ಪೋಷಕರು, ಸಹೋದರರು ಹಾಗೂ ಸಂಬಂಧಿಕರು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ಮುಂಭಾಗದಲ್ಲಿ ಘಟನೆ ನೆನೆದು ರೋದಿಸುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ