ಆ್ಯಪ್ನಗರ

ಯುಜಿಡಿ ಸಮಸ್ಯೆ: ಅಹೋರಾತ್ರಿ ಧರಣಿ ಆರಂಭ

ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಕುಶಾಲನಗರ ಹಿತರಕ್ಷ ಣಾ ವೇದಿಕೆ ಪ್ರಮುಖರು ಸೋಮವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

Vijaya Karnataka 12 Jun 2018, 5:00 am
ಕುಶಾಲನಗರ: ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಕುಶಾಲನಗರ ಹಿತರಕ್ಷ ಣಾ ವೇದಿಕೆ ಪ್ರಮುಖರು ಸೋಮವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
Vijaya Karnataka Web ugd overnight protest begins
ಯುಜಿಡಿ ಸಮಸ್ಯೆ: ಅಹೋರಾತ್ರಿ ಧರಣಿ ಆರಂಭ


52 ಕೋಟಿ ರೂ ವೆಚ್ಚದ ಕಾಮಗಾರಿ ಅಪೂರ್ಣಗೊಂಡಿದೆ. 4 ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಮಗಾರಿ ಸ್ಥಗಿತಗೊಳ್ಳಲು ಕಾರಣವಾಗಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ನಿರ್ಲಕ್ಷ ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯುಜಿಡಿ ಪೂರ್ಣಗೊಳಿಸಿ ಕಾವೇರಿ ನದಿ ಸ್ವಚ್ಛತೆ ಕಾಪಾಡಿ ಎಂಬ ಘೋಷಣೆಗಳು ಕೇಳಿಬಂತು.

ಪಟ್ಟಣದ ಕಾರ್‌ ನಿಲ್ದಾಣ ವೇದಿಕೆಯಲ್ಲಿ ಹಿತರಕ್ಷ ಣಾ ವೇದಿಕೆ ಸಂಚಾಲಕರಾದ ಕೆ.ಜಿ.ಮನು ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭ ವೇದಿಕೆ ಪ್ರಮುಖರಾದ ಕೆ.ಎನ್‌.ದೇವರಾಜ್‌, ಎಂ.ಎಸ್‌.ರಾಜೇಶ್‌, ಹರೀಶ್‌, ಡಿ.ವಿ.ರಾಜೇಶ್‌, ಮಂಜು, ಎಂ.ಡಿ.ಕೃಷ್ಣಪ್ಪ, ಕೆ.ಎಸ್‌.ನಾಗೇಶ್‌, ವಿ.ಎಸ್‌.ಆನಂದಕುಮಾರ್‌, ಸಂತೋಷ್‌, ಉಮಾಶಂಕರ್‌, ಎಂ.ಕೃಷ್ಣ, ಶಿವಾಜಿ, ಭಾಸ್ಕರ್‌ ನಾಯಕ್‌, ನಂಜುಂಡಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಈ ನಡುವೆ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿ ಮಧು ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು. ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳು ಈ ತಿಂಗಳ 14 ರಂದು ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ