ಆ್ಯಪ್ನಗರ

ವಿರಾಜಪೇಟೆ ತಾಲೂಕು ಕಚೇರಿ ಮುತ್ತಿಗೆ: ಎಚ್ಚರಿಕೆ

ಭಾರತೀಯ ಕಿಸಾನ್‌ ಸಂಘದಿಂದ ಇಂದು ಜಿಲ್ಲಾಧಿಕಾರಿಗೆ ಮನವಿ ವಿರಾಜಪೇಟೆ ತಾಲೂಕು ಕಚೇರಿ ಮುತ್ತಿಗೆ: ಎಚ್ಚರಿಕೆ ವಿಕ ಸುದ್ದಿಲೋಕ ಶ್ರೀಮಂಗಲ ಜಿಲ್ಲೆಯ ಕಂದಾಯ ಕಚೇರಿಗಳು ...

ವಿಕ ಸುದ್ದಿಲೋಕ 8 May 2017, 4:00 am

* ಸರಕಾರಿ ಕಚೇರಿಗಳಲ್ಲಿ ಲಂಚಾವತಾರ ಆರೋಪ: ಅವ್ಯವಸ್ಥೆ ಸರಿಪಡಿಸಲು ತಿಂಗಳ ಗಡುವು

Vijaya Karnataka Web virajpet taluk office siege warning
ವಿರಾಜಪೇಟೆ ತಾಲೂಕು ಕಚೇರಿ ಮುತ್ತಿಗೆ: ಎಚ್ಚರಿಕೆ

*ಭಾರತೀಯ ಕಿಸಾನ್‌ ಸಂಘದಿಂದ ಇಂದು ಜಿಲ್ಲಾಧಿಕಾರಿಗೆ ಮನವಿ

ಶ್ರೀಮಂಗಲ: ಜಿಲ್ಲೆಯ ಕಂದಾಯ ಕಚೇರಿಗಳು ಅವ್ಯವಸ್ಥೆಯ ಕೇಂದ್ರವಾಗಿದ್ದು, ಇದರಿಂದ ಜನರು ನಿತ್ಯ ಪರಿತಪಿಸುವಂತಾಗಿದೆ. ಒಂದು ತಿಂಗಳೊಳಗೆ ಈ ಅವ್ಯವಸ್ಥೆ ಸರಿಪಡಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಭಾರತೀಯ ಕಿಸಾನ್‌ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

ಪೊನ್ನಂಪೇಟೆಯಲ್ಲಿ ವಿರಾಜಪೇಟೆ ತಾಲೂಕು, ಕಿಸಾನ್‌ ಸಂಘದ ಅಧ್ಯಕ್ಷ ಮುಕ್ಕಾಟೀರ ಪ್ರವೀಣ್‌ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯ ತಾಲೂಕು ಕಚೇರಿ, ನಾಡ ಕಚೇರಿ ಸೇರಿದಂತೆ ಕಂದಾಯ ಕಚೇರಿ ಮತ್ತು ಸರ್ವೆ ಇಲಾಖೆಯ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಪ್ರತಿಯೊಂದು ಕೆಲಸಕ್ಕೂ ಲಂಚಕ್ಕಾಗಿ ಹಾತೊರೆಯುತ್ತಾರೆ. ಇದಲ್ಲದೆ ದಲ್ಲಾಳಿಗಳ ಹಾವಳಿಯಿಂದ ಜನ ಸಮಾನ್ಯರು ನೇರವಾಗಿ ತಮ್ಮ ಕೆಲಸ ಮಾಡಿಕೊಳಲು ಆಗುತ್ತಿಲ್ಲ ಎಂದು ಆರೋಪಿಸಿದರು.

ಕಂದಾಯ ಕಚೇರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅಥವಾ ಲಂಚ ನೀಡದಿದ್ದರೆ ಅಂತಹವರ ಕಡತಗಳನ್ನು ನಾಪತ್ತೆ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ತಮ್ಮ ಸಿಬ್ಬಂದಿ ಮೇಲೆ ಹಿಡಿತವಿಲ್ಲ. ಕರ್ತವ್ಯದ ಸಮಯದಲ್ಲಿ ಸಿಬ್ಬಂದಿ ಹಾಗೂ ಆಧಿಕಾರಿಗಳು ಲಭ್ಯವಿರುವುದಿಲ್ಲ. ಆದ್ದರಿಂದ ಶೀಘ್ರ ಕೆಲಸವಾಗಲು ಏಕ ಗವಾಕ್ಷಿ ಪದ್ಧತಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮೇ 8ರಂದು ಮನವಿ ಪತ್ರ ಸಲ್ಲಿಸಲಾಗುವುದು. ತಿಂಗಳ ಗಡುವಿನೊಳಗೆ ಅವ್ಯವಸ್ಥೆ ಸರಿಪಡಿಸದಿದ್ದರೆ ಜೂನ್‌ 7ರಂದು ವಿರಾಜಪೇಟೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀಮಾನ ಕೈಗೊಳ್ಳಲಾಯಿತು.

ಶೀಘ್ರದಲ್ಲೇ ಕಿಸಾನ್‌ ಸಂಘದ ಕಚೇರಿಯನ್ನು ಪೊನ್ನಂಪೇಟೆಯಲ್ಲಿ ಆರಂಭಿಸಿ ಜನರ ಸಮಸ್ಯೆಗೆ ಸ್ಪಂದಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕಿಸಾನ್‌ ಸಂಘದ ವಿರಾಜಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ನೂರೇರ ಮನೋಜ್‌, ಉಪಾಧ್ಯಾಕ್ಷರಾದ ಚೊಟ್ಟ್ಟೆಯಂಡಮಾಡ ಡಿ.ಮಾದಪ್ಪ, ಎಸ್‌.ಎಸ್‌. ಸುರೇಶ್‌, ಕಾರ್ಯದರ್ಶಿಗಳಾದ ಗಾಂಡÜಂಗಡ ಕೌಶಿಕ್‌ ದೇವಯ್ಯ, ಮಚ್ಚಮಾಡ ಅಯ್ಯಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್‌, ಯುವ ಪ್ರಮುಖ್‌ ದೇಯಂಡ ರತನ್‌ ಬೋಪಣ್ಣ, ಪದಾಧಿಕಾರಿಯಾದ ಚೋಡುಮಾಡ ವಿಕ್ರಂ, ಮಹಿಳ ಪ್ರಮುಖ್‌ ನೂರೇರ ರತಿ ಅಚ್ಚಪ್ಪ, ಮೀದೇರಿರ ಕವಿತಾ ರಾಮು ಅವರು ಸಭೆಯಲ್ಲಿ ತಮ್ಮ ಆಭಿಪ್ರಾಯ ವ್ಯಕ್ತಪಡಿಸಿದರು. ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್‌ ಬೋಪಯ್ಯ, ಸದಸ್ಯ ಕೆ.ಟಿ. ಬಿದ್ದಪ್ಪ, ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ