ಸುನಿಲ್ ಪೊನ್ನೇಟಿ ಮಡಿಕೇರಿ
ಮಡಿಕೇರಿ: ತ್ಯಾಜ್ಯಮುಕ್ತ ಕೊಡಗು ನಿರ್ಮಾಣಕ್ಕೆ ಮತ್ತೆ ಮತ್ತೆ ಹಿನ್ನಡೆ ಆಗುತ್ತಿದೆ. ವೈಜ್ಞಾನಿಕ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗಮನಾರ್ಹ ಕೆಲಸಗಳು ಆಗುತ್ತಿದ್ದರೂ ಕಂಡ ಕಂಡಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಲಾಗುತ್ತಿಲ್ಲ. ಇದರಿಂದಾಗಿ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳ ಪ್ರಯತ್ನ ವೈಫಲ್ಯ ಕಾಣುತ್ತಿದೆ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆ. ಹೆಚ್ಚಿನ ಸ್ಥಳೀಯ ಆಡಳಿತಗಳು ಮನೆ ಮನೆಗಳಲ್ಲಿ ನಿತ್ಯ ಉತ್ಪಾದನೆ ಆಗುವ ತ್ಯಾಜ್ಯದ ಸಂಗ್ರಹ ಮತ್ತು ವಿಲೇವಾರಿಯ ಸವಾಲನ್ನು ಎದುರಿಸುವಲ್ಲಿ ಯಶಸ್ವಿಯಾಗಿವೆ. ಸ್ವಚ್ಛ ಭಾರತ ಅಭಿಯಾನದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ವಾಹನಗಳನ್ನು ಒದಗಿಸಿರುವುದು ತ್ಯಾಜ್ಯ ಸಂಗ್ರಹದ ಕೆಲಸಕ್ಕೆ ಮತ್ತಷ್ಟು ಬಲ ಕೊಟ್ಟಂತಾಗಿದೆ.
ಜಿಲ್ಲೆಯ ಶೇ. 50ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳನ್ನೂ ಆರಂಭಿಸಲಾಗಿದೆ. ಇಂತಹ ಕಡೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯದ ಮರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಸಿ ಕಸ ಗೊಬ್ಬರ ತಯಾರಿಕೆಗೆ ಬಳಸಿದರೆ, ಒಣಕಸವನ್ನು ಮತ್ತೆ ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ. ಗೊಬ್ಬರ ಮಾರಾಟ ಮತ್ತು ವಿಂಗಡಿಸಿದ ಒಣ ಕಸ ಮಾರಾಟದಿಂದ ಪಂಚಾಯಿತಿಗಳಿಗೆ ಸಣ್ಣಮಟ್ಟಿಗೆ ಹಣದ ಸಂಪಾದನೆಯೂ ಆಗುತ್ತಿದೆ.
ಸ್ವಚ್ಛ ಸುಂದರ ಕೊಡಗು ಆಗುವ ನಿಟ್ಟಿನಲ್ಲಿ ನಾಗಾಲೋಟದಿಂದ ಸಾಗುತ್ತಿರುವ ಪಂಚಾಯಿತಿಗಳ ಕಾರ್ಯವೈಖರಿಗೆ ಕಡಿವಾಣ ಹಾಕುವಂತಹ ಕೆಲಸಗಳೂ ಜಿಲ್ಲೆಯಲ್ಲಿ ಅಲ್ಲಲ್ಲಿ ಕಂಡುಬರುತ್ತಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರೂ, ಪ್ರತಿ ಮನೆಗಳಿಗೂ ಎರಡೆರಡು ಕಸದ ಬುಟ್ಟಿಗಳನ್ನು ಕೊಟ್ಟಿದ್ದರೂ ರಾತ್ರಿ ವೇಳೆ ಸಿಕ್ಕಸಿಕ್ಕಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿಯನ್ನು ತಡೆಯಲು ಮಾತ್ರ ಸಾಧ್ಯವಾಗುತ್ತಿಲ್ಲ.
ಜಿಲ್ಲೆಯ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಹಸಿರು ಸೌಂದರ್ಯಕ್ಕೆ ಕಪ್ಪುಚುಕ್ಕೆ ಇಟ್ಟಂತೆ ಕಸದ ರಾಶಿ ಈಗಲೂ ಕಂಡುಬರುತ್ತದೆ. ಹೊಟೇಲ್, ಲಾಡ್ಜ್, ಹೋಮ್ಸ್ಟೇ, ಮಾಂಸದ ಅಂಗಡಿ ತ್ಯಾಜ್ಯಗಳನ್ನು ರಾತ್ರೋ ರಾತ್ರಿ ವಾಹನಗಳಲ್ಲಿ ತಂದು ರಸ್ತೆ ಬದಿಯಲ್ಲಿ ಸುರಿದು ಸದ್ದಿಲ್ಲದೇ ತೆರಳುವುದು ಬಹುತೇಕ ಭಾಗಗಳಲ್ಲಿ ಸಾಮಾನ್ಯವಾಗಿದೆ.
ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೀಗೆ ಕಸ ತಂದು ಸುರಿಯುವವರು ಸಿಕ್ಕಿಬಿದ್ದರೆ ದೊಡ್ಡ ಮೊತ್ತದ ದಂಡ ಮತ್ತು ಈ ಕೆಲಸ ಮಾಡುವವರನ್ನು ಹಿಡಿದುಕೊಟ್ಟರೆ ಬಹುಮಾನ ಕೊಡುವುದಾಗಿ ಪ್ರಕಟಿಸಲಾಗಿತ್ತು. ಕೆಲವು ಕಡೆಗಳಲ್ಲಿ ಸಿಸಿಟಿವಿಯನ್ನೂ ಅಳವಡಿಸಲಾಗಿತ್ತು. ಆದರೂ 'ಇಲ್ಲಿ ಕಸ ಸುರಿಯಬೇಡಿ' ಎನ್ನುವ ನಾಮಫಲಕದ ಕೆಳಗೆಯೇ ಕಸದ ಬೆಟ್ಟ ಬೆಳೆಯುವುದು ಮಾತ್ರ ಕಡಿಮೆಯಾಗಿಲ್ಲ.
ಕೆರೆ ಏರಿ ಕಸ ಸುರಿಯುವ ಜಾಗ
ವಿರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ದೊಡ್ಡಕೆರೆ ಬಂಡೆ ಎನ್ನುವ ಸುಂದರ ಜಾಗವಿದೆ. ಸ್ವಚ್ಛ ನೀರಿನ ಕೆರೆ, ಸುತ್ತಲೂ ಕಾಫಿ ತೋಟ, ಮನೆಗಳಿಂದ ಆವೃತ್ತವಾದ ಹಸಿರು ತುಂಬಿದ ಸ್ಥಳವಿದು. ಈ ಪೈಸಾರಿ ಜಾಗ ರಸ್ತೆ ಬದಿಯಲ್ಲಿ ಇರುವುದೇ ಶಾಪವಾಗಿ ಪರಿಣಮಿಸಿದೆ. ಕಳೆದ 6-7 ವರ್ಷಗಳಿಂದ ಸುತ್ತಮುತ್ತಲಿನ ಊರಿನವರಿಗೆ ಇದು ಬಿಟ್ಟಿ ಸಿಕ್ಕಿರುವ ಕಸ ಸುರಿಯುವ ಸ್ಥಳವಾಗಿಬಿಟ್ಟಿದೆ. ಮಾಂಸದ ಅಂಗಡಿ ತ್ಯಾಜ್ಯ ಮತ್ತು ಮನೆಗಳಲ್ಲಿ ಸಂಗ್ರಹವಾಗುವ ಕಸ ರಾತ್ರೋ ರಾತ್ರಿ ಬಂದು ಇಲ್ಲಿ ಸುರಿಯಲಾಗುತ್ತದೆ. ದುರ್ವಾಸನೆಯಿಂದಾಗಿ ಅಕ್ಕಪಕ್ಕದಲ್ಲಿ ತಿರುಗಾಡುವುದೇ ಅಸಾಧ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು. ಇಂತಹ ಹಲವು ಸ್ಥಳಗಳು ಜಿಲ್ಲೆಯ ವಿವಿಧೆಡೆ ಅನಧಿಕೃತ ತ್ಯಾಜ್ಯ ಸಂಗ್ರಹ ಕೇಂದ್ರವಾಗುತ್ತಿದ್ದು, ಸಂಬಂಧಿಸಿದವರು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಗಂಭೀರ ಪರಿಣಾಗಳು ಉಂಟಾಗಬಹುದು ಎನ್ನುವುದು ಪರಿಸರವಾದಿಗಳ ಆತಂಕ.
ಹುಂಡಿ, ಒಳಮಳ, ಪಾಲಿಬೆಟ್ಟ ಸೇರಿದಂತೆ ಹಲವು ಭಾಗಗಳಿಂದ ನಮ್ಮೂರಿನ ದೊಡ್ಡಕೆರೆ ಬಂಡೆ ಬಳಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಸಂಬಂಧಿಸಿದವರು ಕೂಡಲೇ ಕ್ರಮ ವಹಿಸದಿದ್ದರೆ ಇಲ್ಲಿ ಕಸದ ಬೆಟ್ಟವೇ ಬೆಳೆಯಬಹುದು.
ಕುಪ್ಪಂಡ ಅಚ್ಚಯ್ಯ, ಕಾಫಿ ಬೆಳೆಗಾರ, ಚೆನ್ನಯನಕೋಟೆ
ಬಹುಮಾನ ಮತ್ತು ದಂಡದ ಪ್ರಯೋಗ ನಮ್ಮಲ್ಲಿ ಫಲ ಕೊಡುತ್ತಿದೆ. ರಾತ್ರಿ ವೇಳೆ ಕಸ ಸುರಿಯುವವರ ಫೋಟೋ ನಮಗೆ ಕಳುಹಿಸಿಕೊಡುತ್ತಾರೆ. ನಾವು ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಬೇರೆ ಕಡೆಯೂ ಈ ಪ್ರಯೋಗ ಮಾಡಬಹುದು. ಏನೇ ಆದರೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಸುಮೇಶ್ ಎಂ.ಆರ್., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುಳ್ಳುಸೋಗೆ
ಮಡಿಕೇರಿ: ತ್ಯಾಜ್ಯಮುಕ್ತ ಕೊಡಗು ನಿರ್ಮಾಣಕ್ಕೆ ಮತ್ತೆ ಮತ್ತೆ ಹಿನ್ನಡೆ ಆಗುತ್ತಿದೆ. ವೈಜ್ಞಾನಿಕ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗಮನಾರ್ಹ ಕೆಲಸಗಳು ಆಗುತ್ತಿದ್ದರೂ ಕಂಡ ಕಂಡಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಲಾಗುತ್ತಿಲ್ಲ. ಇದರಿಂದಾಗಿ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳ ಪ್ರಯತ್ನ ವೈಫಲ್ಯ ಕಾಣುತ್ತಿದೆ.
ಜಿಲ್ಲೆಯ ಶೇ. 50ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳನ್ನೂ ಆರಂಭಿಸಲಾಗಿದೆ. ಇಂತಹ ಕಡೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯದ ಮರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಸಿ ಕಸ ಗೊಬ್ಬರ ತಯಾರಿಕೆಗೆ ಬಳಸಿದರೆ, ಒಣಕಸವನ್ನು ಮತ್ತೆ ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ. ಗೊಬ್ಬರ ಮಾರಾಟ ಮತ್ತು ವಿಂಗಡಿಸಿದ ಒಣ ಕಸ ಮಾರಾಟದಿಂದ ಪಂಚಾಯಿತಿಗಳಿಗೆ ಸಣ್ಣಮಟ್ಟಿಗೆ ಹಣದ ಸಂಪಾದನೆಯೂ ಆಗುತ್ತಿದೆ.
ಸ್ವಚ್ಛ ಸುಂದರ ಕೊಡಗು ಆಗುವ ನಿಟ್ಟಿನಲ್ಲಿ ನಾಗಾಲೋಟದಿಂದ ಸಾಗುತ್ತಿರುವ ಪಂಚಾಯಿತಿಗಳ ಕಾರ್ಯವೈಖರಿಗೆ ಕಡಿವಾಣ ಹಾಕುವಂತಹ ಕೆಲಸಗಳೂ ಜಿಲ್ಲೆಯಲ್ಲಿ ಅಲ್ಲಲ್ಲಿ ಕಂಡುಬರುತ್ತಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರೂ, ಪ್ರತಿ ಮನೆಗಳಿಗೂ ಎರಡೆರಡು ಕಸದ ಬುಟ್ಟಿಗಳನ್ನು ಕೊಟ್ಟಿದ್ದರೂ ರಾತ್ರಿ ವೇಳೆ ಸಿಕ್ಕಸಿಕ್ಕಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿಯನ್ನು ತಡೆಯಲು ಮಾತ್ರ ಸಾಧ್ಯವಾಗುತ್ತಿಲ್ಲ.
ಜಿಲ್ಲೆಯ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಹಸಿರು ಸೌಂದರ್ಯಕ್ಕೆ ಕಪ್ಪುಚುಕ್ಕೆ ಇಟ್ಟಂತೆ ಕಸದ ರಾಶಿ ಈಗಲೂ ಕಂಡುಬರುತ್ತದೆ. ಹೊಟೇಲ್, ಲಾಡ್ಜ್, ಹೋಮ್ಸ್ಟೇ, ಮಾಂಸದ ಅಂಗಡಿ ತ್ಯಾಜ್ಯಗಳನ್ನು ರಾತ್ರೋ ರಾತ್ರಿ ವಾಹನಗಳಲ್ಲಿ ತಂದು ರಸ್ತೆ ಬದಿಯಲ್ಲಿ ಸುರಿದು ಸದ್ದಿಲ್ಲದೇ ತೆರಳುವುದು ಬಹುತೇಕ ಭಾಗಗಳಲ್ಲಿ ಸಾಮಾನ್ಯವಾಗಿದೆ.
ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೀಗೆ ಕಸ ತಂದು ಸುರಿಯುವವರು ಸಿಕ್ಕಿಬಿದ್ದರೆ ದೊಡ್ಡ ಮೊತ್ತದ ದಂಡ ಮತ್ತು ಈ ಕೆಲಸ ಮಾಡುವವರನ್ನು ಹಿಡಿದುಕೊಟ್ಟರೆ ಬಹುಮಾನ ಕೊಡುವುದಾಗಿ ಪ್ರಕಟಿಸಲಾಗಿತ್ತು. ಕೆಲವು ಕಡೆಗಳಲ್ಲಿ ಸಿಸಿಟಿವಿಯನ್ನೂ ಅಳವಡಿಸಲಾಗಿತ್ತು. ಆದರೂ 'ಇಲ್ಲಿ ಕಸ ಸುರಿಯಬೇಡಿ' ಎನ್ನುವ ನಾಮಫಲಕದ ಕೆಳಗೆಯೇ ಕಸದ ಬೆಟ್ಟ ಬೆಳೆಯುವುದು ಮಾತ್ರ ಕಡಿಮೆಯಾಗಿಲ್ಲ.
ಕೆರೆ ಏರಿ ಕಸ ಸುರಿಯುವ ಜಾಗ
ವಿರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ದೊಡ್ಡಕೆರೆ ಬಂಡೆ ಎನ್ನುವ ಸುಂದರ ಜಾಗವಿದೆ. ಸ್ವಚ್ಛ ನೀರಿನ ಕೆರೆ, ಸುತ್ತಲೂ ಕಾಫಿ ತೋಟ, ಮನೆಗಳಿಂದ ಆವೃತ್ತವಾದ ಹಸಿರು ತುಂಬಿದ ಸ್ಥಳವಿದು. ಈ ಪೈಸಾರಿ ಜಾಗ ರಸ್ತೆ ಬದಿಯಲ್ಲಿ ಇರುವುದೇ ಶಾಪವಾಗಿ ಪರಿಣಮಿಸಿದೆ. ಕಳೆದ 6-7 ವರ್ಷಗಳಿಂದ ಸುತ್ತಮುತ್ತಲಿನ ಊರಿನವರಿಗೆ ಇದು ಬಿಟ್ಟಿ ಸಿಕ್ಕಿರುವ ಕಸ ಸುರಿಯುವ ಸ್ಥಳವಾಗಿಬಿಟ್ಟಿದೆ. ಮಾಂಸದ ಅಂಗಡಿ ತ್ಯಾಜ್ಯ ಮತ್ತು ಮನೆಗಳಲ್ಲಿ ಸಂಗ್ರಹವಾಗುವ ಕಸ ರಾತ್ರೋ ರಾತ್ರಿ ಬಂದು ಇಲ್ಲಿ ಸುರಿಯಲಾಗುತ್ತದೆ. ದುರ್ವಾಸನೆಯಿಂದಾಗಿ ಅಕ್ಕಪಕ್ಕದಲ್ಲಿ ತಿರುಗಾಡುವುದೇ ಅಸಾಧ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು. ಇಂತಹ ಹಲವು ಸ್ಥಳಗಳು ಜಿಲ್ಲೆಯ ವಿವಿಧೆಡೆ ಅನಧಿಕೃತ ತ್ಯಾಜ್ಯ ಸಂಗ್ರಹ ಕೇಂದ್ರವಾಗುತ್ತಿದ್ದು, ಸಂಬಂಧಿಸಿದವರು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಗಂಭೀರ ಪರಿಣಾಗಳು ಉಂಟಾಗಬಹುದು ಎನ್ನುವುದು ಪರಿಸರವಾದಿಗಳ ಆತಂಕ.
ಹುಂಡಿ, ಒಳಮಳ, ಪಾಲಿಬೆಟ್ಟ ಸೇರಿದಂತೆ ಹಲವು ಭಾಗಗಳಿಂದ ನಮ್ಮೂರಿನ ದೊಡ್ಡಕೆರೆ ಬಂಡೆ ಬಳಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಸಂಬಂಧಿಸಿದವರು ಕೂಡಲೇ ಕ್ರಮ ವಹಿಸದಿದ್ದರೆ ಇಲ್ಲಿ ಕಸದ ಬೆಟ್ಟವೇ ಬೆಳೆಯಬಹುದು.
ಕುಪ್ಪಂಡ ಅಚ್ಚಯ್ಯ, ಕಾಫಿ ಬೆಳೆಗಾರ, ಚೆನ್ನಯನಕೋಟೆ
ಬಹುಮಾನ ಮತ್ತು ದಂಡದ ಪ್ರಯೋಗ ನಮ್ಮಲ್ಲಿ ಫಲ ಕೊಡುತ್ತಿದೆ. ರಾತ್ರಿ ವೇಳೆ ಕಸ ಸುರಿಯುವವರ ಫೋಟೋ ನಮಗೆ ಕಳುಹಿಸಿಕೊಡುತ್ತಾರೆ. ನಾವು ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಬೇರೆ ಕಡೆಯೂ ಈ ಪ್ರಯೋಗ ಮಾಡಬಹುದು. ಏನೇ ಆದರೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಸುಮೇಶ್ ಎಂ.ಆರ್., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುಳ್ಳುಸೋಗೆ