ಆ್ಯಪ್ನಗರ

ಭತ್ತದ ಗದ್ದೆಗಳಿಗೆ ನುಗ್ಗಿದ ನೀರು: ಅಧಿಕಾರಿಗೆ ಮುತ್ತಿಗೆ

ರಂಗಿ ಜಲಾಶಯದ ಬಲದಂಡೆ ನಾಲೆ 9ನೇ ತೂಬಿನ ಕಾಲುವೆಗಳಿಗೆ ಬಿಟ್ಟ ನೀರು ಹುಲುಸೆ ಗ್ರಾಮದ ಭತ್ತದ ಗದ್ದೆಗಳಿಗೆ ನುಗ್ಗಿದೆ ಎಂದು ಆರೋಪಿಸಿ ರೈತರು ಹಾರಂಗಿ ಅಣೆಕಟ್ಟೆ ವಿಭಾಗದ ಅಧಿಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಪಡಿಸಿದರು.

Vijaya Karnataka Web 27 Jul 2018, 7:43 am
ಕುಶಾಲನಗರ: ಹಾರಂಗಿ ಜಲಾಶಯದ ಬಲದಂಡೆ ನಾಲೆ 9ನೇ ತೂಬಿನ ಕಾಲುವೆಗಳಿಗೆ ಬಿಟ್ಟ ನೀರು ಹುಲುಸೆ ಗ್ರಾಮದ ಭತ್ತದ ಗದ್ದೆಗಳಿಗೆ ನುಗ್ಗಿದೆ ಎಂದು ಆರೋಪಿಸಿ ರೈತರು ಹಾರಂಗಿ ಅಣೆಕಟ್ಟೆ ವಿಭಾಗದ ಅಧಿಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಪಡಿಸಿದ ಘಟನೆ ಗುರುವಾರ ನಡೆಯಿತು.
Vijaya Karnataka Web field


ನಾಲೆಯಲ್ಲಿ ಹೂಳು ತುಂಬಿದ್ದು, ಯಾವುದೇ ಮುನ್ಸೂಚನೆ ನೀಡದೆ ನಾಲೆಗಳಿಗೆ ಏಕಾಏಕಿ ನೀರು ಹರಿಸಿದ ಕಾರಣ ಭತ್ತದ ಬೆಳೆಯಲು ಸಿದ್ಧಪಡಿಸಿದ್ದ ಗದ್ದೆಗಳು ಮುಳುಗಡೆಯಾಗಿವೆ ಎಂದು ರೈತರು ದೂರಿದರು.

ಸ್ಥಳಕ್ಕಾಗಮಿಸಿದ ಹಾರಂಗಿ ಯೋಜನೆಯ ಸಹಾಯಕ ಎಂಜಿನಿಯರ್‌ ನಾಗರಾಜ್‌, ''ಹೂಳೆತ್ತಲು ಟೆಂಡರ್‌ ಆಗಿದೆ. ಈಗ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಟೆಂಡರ್‌ ಪಡೆದುಕೊಂಡವರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಡಿಸೆಂಬರ್‌ ನಂತರ ಹೂಳೆತ್ತುವುದಾಗಿ,'' ತಿಳಿಸಿದರು.

ಇದರಿಂದ ಸಮಾಧಾನಗೊಳ್ಳದ ರೈತರು ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಬರಲು ಹೇಳಿ. ಅಲ್ಲಿ ತನಕ ನೀವು ತೆರಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮಡಿಕೇರಿ ಶಾಸಕರನ್ನು ರೈತರು ಸಂಪರ್ಕಿಸಿದಾಗ, ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಸಮಾಧಾನಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ