ಆ್ಯಪ್ನಗರ

ಬಿಳಿ ಆಮೆ ಮಾರಾಟ ಯತ್ನ, ಆರೋಪಿ ಸೆರೆ

ವಿರಾಜಪೇಟೆ ನಗರದ ಹೊರವಲಯದಲ್ಲಿ ಅಪರೂಪವೆಂದು ಪರಿಗಣಿಸಲಾದ ಬಿಳಿ ಆಮೆಯನ್ನು ಹಿಡಿದು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ...

Vijaya Karnataka 28 Nov 2019, 5:00 am
ವಿರಾಜಪೇಟೆ: ನಗರದ ಹೊರವಲಯದಲ್ಲಿ ಅಪರೂಪವೆಂದು ಪರಿಗಣಿಸಲಾದ ಬಿಳಿ ಆಮೆಯನ್ನು ಹಿಡಿದು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
Vijaya Karnataka Web MDK27VPT04B_19
white turtle


ಭಾಗಮಂಡಲ ಕೊಪಟ್ಟಿ ಗ್ರಾಮದ ನಿವಾಸಿ ಪಡನೊಳನ ಎಸ್‌. ಮಹೇಶ್‌(42) ಬಂಧಿತ. ಪೊನ್ನಂಪೇಟೆ ಹಳ್ಳಿ ಗಟ್ಟು ನಿವಾಸಿ ಉಮೇಶ್‌ ಮತ್ತು ಸಹಚರ ರವಿ ಎಂಬುವವರು ಕೊಪಟ್ಟಿ ಗ್ರಾಮದ ಮಹೇಶ್‌ನನ್ನು ಸಂಪರ್ಕಿಸಿ ಈ ಆಮೆ ಖರೀದಿಗೆಂದು ವಿರಾಜ ಪೇಟೆ ನಗರಕ್ಕೆ ಆಗಮಿಸಿದ್ದರು. ಇಲಾಖೆ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ರಾತ್ರಿ 9 ರ ಸಮಯದಲ್ಲಿಕಾವೇರಿ ಕಾಲೇಜು ಬಳಿಯ ತಂಗುದಾಣದ ಬಳಿಗೆ ಅರಣ್ಯ ಸಂಚಾರ ಸಿಐಡಿ ದಳದ ವಿರಾಜಪೇಟೆ ಸಿಬ್ಬಂದಿ ವ್ಯಾಪಾರಿಗಳ ಸೋಗಿನಲ್ಲಿ ತೆರಳಿ ಆರೋಪಿಯನ್ನು ಬಂಧಿಸಿದರು.

ಅರಣ್ಯ ಸಂಚಾರ ದಳದವರು ಮಹೇಶ್‌ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ವೇಳೆ ಕಾರಿನಲ್ಲಿಆಗಮಿಸುತ್ತಿದ್ದ ಉಮೇಶ್‌ ಮತ್ತು ರವಿಗೆ ಇದು ಗೊತ್ತಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ದೂರು ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಐಡಿ ಅರಣ್ಯ ಸಂಚಾರ ಘಟಕದ ಎಸ್‌ಪಿ ಸುರೇಶ್‌ ಬಾಬು ಅವರ ಮಾರ್ಗದರ್ಶನದಲ್ಲಿ ಸಿಐಡಿ ಅರಣ್ಯ ಸಂಚಾರ ಘಟಕದ ವಿರಾಜಪೇಟೆ ಸಿಬ್ಬಂದಿ ಕೆ.ಬಿ.ಸೊಮಣ್ಣ, ಟಿ.ಪಿ.ಮಂಜುನಾಥ್‌, ಎಂ.ಬಿ.ಗಣೇಶ್‌, ಪಿ.ಬಿ.ಮೊಣ್ಣಪ್ಪ ಮತ್ತು ಚಾಲಕ ಸಿ.ಎನ್‌. ರೇವಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ