ಆ್ಯಪ್ನಗರ

ಕಾಡಾನೆ ಸಮಸ್ಯೆ: ಹೋರಾಟ ಮುಂದುವರಿಕೆ ಅಗತ್ಯ

ಕಾಡಾನೆ ಸಮಸ್ಯೆಗೆ ಸಂಬಂಧಿಸಿದಂತೆ ಒಂದೇ ಕೂಗಿನಲ್ಲಿ ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಬೆಳೆಗಾರರಿಗೆ ಸಲಹೆ ನೀಡಿದರು.

Vijaya Karnataka 27 Dec 2018, 5:00 am
ಮಡಿಕೇರಿ: ಕಾಡಾನೆ ಸಮಸ್ಯೆಗೆ ಸಂಬಂಧಿಸಿದಂತೆ ಒಂದೇ ಕೂಗಿನಲ್ಲಿ ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಬೆಳೆಗಾರರಿಗೆ ಸಲಹೆ ನೀಡಿದರು.
Vijaya Karnataka Web wild elephant menace continue fight
ಕಾಡಾನೆ ಸಮಸ್ಯೆ: ಹೋರಾಟ ಮುಂದುವರಿಕೆ ಅಗತ್ಯ


ಆನೆಚೌಕೂರು ವನ್ಯಜೀವಿ ವಲಯ ಅಧಿಕಾರಿ ಕಚೇರಿ ಎದುರು ತಿತಿಮತಿ, ದೇವರಪುರ, ಬಾಳೆಲೆ ಹಾಗೂ ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳಿಂದ ಆಯೋಜಿಸಿದ್ದ ಕಾಡಾನೆ ನಿಯಂತ್ರಣ ಕುರಿತು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಕಾಡಾನೆ ನಿಯಂತ್ರಣ ಕುರಿತು ಎಷ್ಟೇ ಪ್ರತಿಭಟನೆ ನಡೆದರೂ ಜನರಿಗೆ ಸೂಕ್ತ ಸ್ಪಂದನೆ ಸಿಗದೆ ನಿರಾಸೆಯಾಗಿದೆ. ಬೇಸತ್ತು ಹೋರಾಟ ಕೈಬಿಡಬಾರದು. ಜನರೊಂದಿಗೆ ಜನಪ್ರತಿನಿಧಿಯಾಗಿ ಹೋರಾಟ ನಡೆಸಲು ಸಿದ್ಧನಾಗಿದ್ದೇನೆ. ಕೊಡಗಿನಲ್ಲಿರುವವರಿಗೆ ಸಮಸ್ಯೆಯಾದಾಗ ಎಲ್ಲಾರೂ ಒಂದಾಗಿ ಬೀದಿಗಿಳಿಯಬೇಕು. ನಮಗೇನೂ ಆಗಲಿಲ್ಲ ಎಂಬ ತಾತ್ಸಾರ ಜಿಲ್ಲೆಗೆ ಹಿನ್ನಡೆಯಾಗಿದೆ ಎಂದರು.

ಕಾಡಾನೆಗಳು ಗ್ರಾಮಗಳಿಗೆ ನುಸುಳದಂತೆ ರೈಲ್ವೆಕಂಬಿ ಬ್ಯಾರಿಕೇಡ್‌ ಯೋಜನೆ ಹೆಚ್ಚು ಫಲ ಕಾಣುತ್ತಿರುವುದರಿಂದ ಯೋಜನೆ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು. ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ರೈಲ್ವೆ ಕಂಬಿ ಜೋಡಣೆಗೆ 500 ಕೋಟಿ ರೂ.ಗಳ ಪ್ರಸ್ತಾವ ಇದೆ. ಇದರ ಅನುಷ್ಠಾನದಿಂದ ಮಾತ್ರ ಆನೆಗಳ ನಿಯಂತ್ರಣ ಸಾಧ್ಯ ಎಂದರು.

ಕೊಡಗಿನಲ್ಲಿ ಕೃಷಿ ಭೂಮಿ ಪಾಳು ಬಿಡಲು ಕಾಡಾನೆಗಳ ನಿರಂತರ ಸಮಸ್ಯೆ ಕಾರಣ, ಆದರೆ, ಸರಕಾರಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡದಿರುವುದರಿಂದ ಪಾಳು ಬಿಟ್ಟಿರುವ ಭೂಮಿ ವಶಕ್ಕೆ ಸರಕಾರ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸರಕಾರಕ್ಕೆ ಅರಣ್ಯ ಇಲಾಖೆ ಮಾಹಿತಿ ನೀಡಬೇಕು ಎಂದರು.

ಬೆಳೆಗಾರ ಚೆಪ್ಪುಡೀರ ಕಿರಣ್‌ ಅಪ್ಪಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಂಕಜಾ, ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ, ಬಾನಂಡ ಪ್ರಥ್ಯು ಮಾತನಾಡಿದರು.

ಮಾಯಮುಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಲ್ಯಂಡ ಭವಾನಿ, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್‌, ದೇವರಪುರ ಪಂಚಾಯಿತಿ ಪರವಾಗಿ ಮನೆಯಪಂಡ ಮಹೇಶ್‌, ಬಾಳೆಲೆ ವ್ಯಾಪ್ತಿಯ ಪರವಾಗಿ ಶುಭಾಶ್‌ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ಕಾಡಾನೆ ನಿಯಂತ್ರಣಕ್ಕೆ ಒತ್ತಾಯಿಸಿದರು.

ಈ ವೇಳೆ ಎಸಿಎಫ್‌ ಶ್ರೀಪತಿ ಮಾತನಾಡಿ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಸೋಲಾರ್‌ ಬೇಲಿ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಹಂತ ಹಂತವಾಗಿ ಯೋಜನೆಗಳು ಪೂರ್ಣಗೊಳ್ಳಲಿದೆ ಎಂದರು.

ಕಾಫಿ ಬೆಳೆಗಾರರಾದ ಚೆಪ್ಪುಡೀರ ರಾಮಕೃಷ್ಣ, ಶರಿ ಸುಬ್ಬಯ್ಯ, ಪೂಣಚ್ಚ, ತಿತಿಮತಿ ಆರ್‌ಎಫ್‌ಒ ಅಶೋಕ್‌, ಪೊನ್ನಂಪೇಟೆ ಆರ್‌ಎಫ್‌ಒ ಗಂಗಾಧರ್‌, ಆನೆಚೌಕೂರು ಆರ್‌ಎಫ್‌ಒ ಶಿವಾನಂದ್‌, ವೃತ್ತ ನಿರೀಕ್ಷ ಕ ದಿವಾಕರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ