ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿ
ಕೊಡಗು ಜಿಲ್ಲೆಯ ಪ್ರಮುಖ ಆಡಳಿತ ಹುದ್ದೆಗಳಲ್ಲಿ ಈಗ ಮಹಿಳಾ ಅಧಿಕಾರಿಗಳದ್ದೇ ಪಾರುಪತ್ಯ.
ಜಿಲ್ಲೆಯ ಪ್ರಮುಖ ಹುದ್ದೆಗಳಲ್ಲಿ ಸೈ ಎನಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಕೊಡಗಿನಲ್ಲಿ ಜಿಲ್ಲಾಧಿಕಾರಿಯಾಗಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೇಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಸುಮನ್ ಡಿ ಪನ್ನೇಕರ್ ಕೆಲಸ ನಿರ್ವಹಿಸುತ್ತಿದ್ದಾರೆ.
ಅಧಿಕಾರಿ ವರ್ಗ: ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಯೋಜನಾಧಿಕಾರಿಯಾಗಿ ಕೆ.ಎಸ್ ಸಂಧ್ಯಾ, ಲೆಕ್ಕಾಧಿಕಾರಿಯಾಗಿ ದಮಯಂತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿಯಾಗಿ ಭಾರತಿ ಸಿ.ಆರ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾಗಿ ದಮಯಂತಿ ಟಿ.ಎಸ್., ಮೀನುಗಾರಿಕೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ (ಪ್ರಭಾರ) ಇಲಾಖೆಯ ಕೆ.ಟಿ. ದರ್ಶನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯಾಗಿ ರೇಷ್ಮಾ ಬಿ., ಅಂತರ್ಜಲ ಹಿರಿಯ ಭೂ ವಿಜ್ಞಾನಿಯಾಗಿ ಸೌಮ್ಯಾ, ತಾಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೇ, ಕೆಎಸ್ಆರ್ಟಿಸಿ ಡಿಪೊ ವ್ಯವಸ್ಥಾಪಕಿ ಗೀತಾ, ಮುಖ್ಯ ಗ್ರಂಥಾಲಯ ಅಧಿಕಾರಿ ಎನ್.ಲೀಲಾವತಿ, ಸೈನಿಕ ಕಲ್ಯಾಣ ಇಲಾಖೆಯಲ್ಲಿ ಕರ್ನಲ್ ಗೀತಾ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಕೊಡಗು ಜಿಲ್ಲೆಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುವುದು ಸಾಮಾನ್ಯ. ಗುಡ್ಡಗಾಡು ಪ್ರದೇಶ, ಹವಾಮಾನ ವೈಪರೀತ್ಯ, ಗ್ರಾಮೀಣ ಪ್ರದೇಶವಾದರಿಂದ ಬಹುತೇಕ ಅಧಿಕಾರಿಗಳು ಇಲ್ಲಿಗೆ ಆಗಮಿಸುವದೇ ಇಲ್ಲ. ಸರಕಾರದ ಆದೇಶದ ಮೇರೆಗೆ ಬಂದರೂ ಕೆಲವೇ ತಿಂಗಳಲ್ಲಿ ಬೇರೆಡೆ ತೆರಳಿದ ಉದಾಹರಣೆಗಳು ಸಾಕಷ್ಟಿದೆ. ಇಂತಹ ಪರಿಸ್ಥಿತಿ ನಡುವೆಯೂ ಮಹಿಳಾ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜನಪ್ರತಿನಿಧಿಗಳು: ಕೊಡಗಿನಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ಶಾಂತೆಯಂಡ ವೀಣಾ ಅಚ್ಚಯ್ಯ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಿಗೂ ಭೇಟಿ ನೀಡಿ ಜನತೆಯ ಸಮಸ್ಯೆ ಆಲಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಲೋಕೇಶ್ವರಿ ಗೋಪಾಲ್ ಕೆಲಸ ನಿರ್ವಹಿಸುತ್ತಿದ್ದರೆ, ಸದಸ್ಯರಾಗಿ ಅಪ್ಪಂಡೇರಂಡ ಭವ್ಯಾ, ಕೆ.ಸರಿತಾ ಪೂಣಚ್ಚ, ಪಿ.ಆರ್ ಪಂಕಜಾ, ಶ್ರೀಜಾ ಶಾಜಿ , ಲೀಲಾವತಿ, ಯಾಲದಾಳು ಡಿ.ಪದ್ಮಾವತಿ, ಕಲಾವತಿ ಪೂವಪ್ಪ, ಕವಿತಾ ಪ್ರಭಾಕರ್, ಪೂರ್ಣಿಮಾ ಗೋಪಾಲ್, ಕುಮುದಾ ಧರ್ಮಪ್ಪ, ಕೆ.ಪಿ ಚಂದ್ರಕಲಾ, ಕೆ.ಆರ್ ಮಂಜುಳಾ, ಎಂ.ಬಿ ಸುನೀತಾ ಆಡಳಿತದ ಚುಕ್ಕಾಣಿಯಲ್ಲಿ ಪ್ರಮುಖ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ತೆಕ್ಕಡೆ ಶೋಭಾ ಮೋಹನ್, ಸೋಮವಾರಪೇಟೆಯಲ್ಲಿ ಪುಷ್ಪಾ ರಾಜೇಶ್ ಹಾಗೂ ವಿರಾಜಪೇಟೆಯಲ್ಲಿ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಆಡಳಿತದ ಪ್ರಮುಖ ಹುದ್ದೆಯಲ್ಲಿದ್ದಾರೆ. ಮಡಿಕೇರಿ ನಗರಸಭೆಯಲ್ಲಿ ಅಧ್ಯಕ್ಷೆಯಾಗಿ ಕಾವೇರಮ್ಮ ಸೋಮಣ್ಣ ಆಡಳಿತ ನಡೆಸುತ್ತಿದ್ದರೆ, 12 ಮಹಿಳಾ ಸದಸ್ಯರು ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಕೃತಿ ವಿಕೋಪ ಪರಿಸ್ಥಿತಿ
ನಿಭಾಯಿಸಿದ್ದ ಡಿಸಿ ಶ್ರೀವಿದ್ಯಾ
ಕೊಡಗಿನಲ್ಲಿ ಮಹಿಳಾ ಅಧಿಕಾರಿ ಎಂದರೆ ತಕ್ಷ ಣ ನೆನಪಾಗುವುದು ಪಿ.ಐ. ಶ್ರೀವಿದ್ಯಾ ಎಂಬ ದಕ್ಷ ಅಧಿಕಾರಿ. ಈಚೆಗೆ ಜಿಲ್ಲೆಯಲ್ಲಿ ಸಾಕಷ್ಟು ಹೆಸರುಗಳಿಸಿದ್ದ ಅಧಿಕಾರಿ 2 ತಿಂಗಳ ಹಿಂದೆ ದೀರ್ಘ ರಜೆ ಮೇಲೆ ತೆರಳಿದ್ದರು. ಕಳೆದ ವರ್ಷ ಆಗಸ್ಟ್ನಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭ ಆಡಳಿತ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಳೆಗಾಳಿಯನ್ನು ಲೆಕ್ಕಿಸದೇ ಅತ್ಯುತ್ತಮ ಕೆಲಸ ಮಾಡಿ ಭೇಷ್ ಎನಿಸಿಕೊಂಡಿದ್ದರು. ಅಲ್ಲದೇ, 2018 ಮಾರ್ಚ್ನಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲೂ ಕೆಲಸ ಮಾಡಿದ್ದರು. ಜಿಲ್ಲೆಯ ಗಡಿಯಲ್ಲಿ ಅಕ್ರಮವಾಗಿ ಮದ್ಯ ಸಾಗಣೆಯಾಗುತ್ತಿದ್ದ, ಸಂದರ್ಭ ಮಧ್ಯರಾತ್ರಿ ಖಾಸಗಿ ಕಾರಿನಲ್ಲಿ ತೆರಳಿ ಅಕ್ರಮಗಳನ್ನು ಬಯಲಿಗೆಳೆದಿದ್ದರು. ವಿಕೋಪದ ಸಂದರ್ಭದಲ್ಲೇ ಕರ್ತವ್ಯ ಲೋಪ ಎಸಗಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಕೆಲಸ ಮಾಡದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.
ಕೊಡಗು ಜಿಲ್ಲೆಯ ಪ್ರಮುಖ ಆಡಳಿತ ಹುದ್ದೆಗಳಲ್ಲಿ ಈಗ ಮಹಿಳಾ ಅಧಿಕಾರಿಗಳದ್ದೇ ಪಾರುಪತ್ಯ.
ಜಿಲ್ಲೆಯ ಪ್ರಮುಖ ಹುದ್ದೆಗಳಲ್ಲಿ ಸೈ ಎನಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಕೊಡಗಿನಲ್ಲಿ ಜಿಲ್ಲಾಧಿಕಾರಿಯಾಗಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೇಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಸುಮನ್ ಡಿ ಪನ್ನೇಕರ್ ಕೆಲಸ ನಿರ್ವಹಿಸುತ್ತಿದ್ದಾರೆ.
ಅಧಿಕಾರಿ ವರ್ಗ: ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಯೋಜನಾಧಿಕಾರಿಯಾಗಿ ಕೆ.ಎಸ್ ಸಂಧ್ಯಾ, ಲೆಕ್ಕಾಧಿಕಾರಿಯಾಗಿ ದಮಯಂತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿಯಾಗಿ ಭಾರತಿ ಸಿ.ಆರ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾಗಿ ದಮಯಂತಿ ಟಿ.ಎಸ್., ಮೀನುಗಾರಿಕೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ (ಪ್ರಭಾರ) ಇಲಾಖೆಯ ಕೆ.ಟಿ. ದರ್ಶನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯಾಗಿ ರೇಷ್ಮಾ ಬಿ., ಅಂತರ್ಜಲ ಹಿರಿಯ ಭೂ ವಿಜ್ಞಾನಿಯಾಗಿ ಸೌಮ್ಯಾ, ತಾಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೇ, ಕೆಎಸ್ಆರ್ಟಿಸಿ ಡಿಪೊ ವ್ಯವಸ್ಥಾಪಕಿ ಗೀತಾ, ಮುಖ್ಯ ಗ್ರಂಥಾಲಯ ಅಧಿಕಾರಿ ಎನ್.ಲೀಲಾವತಿ, ಸೈನಿಕ ಕಲ್ಯಾಣ ಇಲಾಖೆಯಲ್ಲಿ ಕರ್ನಲ್ ಗೀತಾ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಕೊಡಗು ಜಿಲ್ಲೆಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುವುದು ಸಾಮಾನ್ಯ. ಗುಡ್ಡಗಾಡು ಪ್ರದೇಶ, ಹವಾಮಾನ ವೈಪರೀತ್ಯ, ಗ್ರಾಮೀಣ ಪ್ರದೇಶವಾದರಿಂದ ಬಹುತೇಕ ಅಧಿಕಾರಿಗಳು ಇಲ್ಲಿಗೆ ಆಗಮಿಸುವದೇ ಇಲ್ಲ. ಸರಕಾರದ ಆದೇಶದ ಮೇರೆಗೆ ಬಂದರೂ ಕೆಲವೇ ತಿಂಗಳಲ್ಲಿ ಬೇರೆಡೆ ತೆರಳಿದ ಉದಾಹರಣೆಗಳು ಸಾಕಷ್ಟಿದೆ. ಇಂತಹ ಪರಿಸ್ಥಿತಿ ನಡುವೆಯೂ ಮಹಿಳಾ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜನಪ್ರತಿನಿಧಿಗಳು: ಕೊಡಗಿನಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ಶಾಂತೆಯಂಡ ವೀಣಾ ಅಚ್ಚಯ್ಯ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಿಗೂ ಭೇಟಿ ನೀಡಿ ಜನತೆಯ ಸಮಸ್ಯೆ ಆಲಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಲೋಕೇಶ್ವರಿ ಗೋಪಾಲ್ ಕೆಲಸ ನಿರ್ವಹಿಸುತ್ತಿದ್ದರೆ, ಸದಸ್ಯರಾಗಿ ಅಪ್ಪಂಡೇರಂಡ ಭವ್ಯಾ, ಕೆ.ಸರಿತಾ ಪೂಣಚ್ಚ, ಪಿ.ಆರ್ ಪಂಕಜಾ, ಶ್ರೀಜಾ ಶಾಜಿ , ಲೀಲಾವತಿ, ಯಾಲದಾಳು ಡಿ.ಪದ್ಮಾವತಿ, ಕಲಾವತಿ ಪೂವಪ್ಪ, ಕವಿತಾ ಪ್ರಭಾಕರ್, ಪೂರ್ಣಿಮಾ ಗೋಪಾಲ್, ಕುಮುದಾ ಧರ್ಮಪ್ಪ, ಕೆ.ಪಿ ಚಂದ್ರಕಲಾ, ಕೆ.ಆರ್ ಮಂಜುಳಾ, ಎಂ.ಬಿ ಸುನೀತಾ ಆಡಳಿತದ ಚುಕ್ಕಾಣಿಯಲ್ಲಿ ಪ್ರಮುಖ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ತೆಕ್ಕಡೆ ಶೋಭಾ ಮೋಹನ್, ಸೋಮವಾರಪೇಟೆಯಲ್ಲಿ ಪುಷ್ಪಾ ರಾಜೇಶ್ ಹಾಗೂ ವಿರಾಜಪೇಟೆಯಲ್ಲಿ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಆಡಳಿತದ ಪ್ರಮುಖ ಹುದ್ದೆಯಲ್ಲಿದ್ದಾರೆ. ಮಡಿಕೇರಿ ನಗರಸಭೆಯಲ್ಲಿ ಅಧ್ಯಕ್ಷೆಯಾಗಿ ಕಾವೇರಮ್ಮ ಸೋಮಣ್ಣ ಆಡಳಿತ ನಡೆಸುತ್ತಿದ್ದರೆ, 12 ಮಹಿಳಾ ಸದಸ್ಯರು ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಕೃತಿ ವಿಕೋಪ ಪರಿಸ್ಥಿತಿ
ನಿಭಾಯಿಸಿದ್ದ ಡಿಸಿ ಶ್ರೀವಿದ್ಯಾ
ಕೊಡಗಿನಲ್ಲಿ ಮಹಿಳಾ ಅಧಿಕಾರಿ ಎಂದರೆ ತಕ್ಷ ಣ ನೆನಪಾಗುವುದು ಪಿ.ಐ. ಶ್ರೀವಿದ್ಯಾ ಎಂಬ ದಕ್ಷ ಅಧಿಕಾರಿ. ಈಚೆಗೆ ಜಿಲ್ಲೆಯಲ್ಲಿ ಸಾಕಷ್ಟು ಹೆಸರುಗಳಿಸಿದ್ದ ಅಧಿಕಾರಿ 2 ತಿಂಗಳ ಹಿಂದೆ ದೀರ್ಘ ರಜೆ ಮೇಲೆ ತೆರಳಿದ್ದರು. ಕಳೆದ ವರ್ಷ ಆಗಸ್ಟ್ನಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭ ಆಡಳಿತ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಳೆಗಾಳಿಯನ್ನು ಲೆಕ್ಕಿಸದೇ ಅತ್ಯುತ್ತಮ ಕೆಲಸ ಮಾಡಿ ಭೇಷ್ ಎನಿಸಿಕೊಂಡಿದ್ದರು. ಅಲ್ಲದೇ, 2018 ಮಾರ್ಚ್ನಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲೂ ಕೆಲಸ ಮಾಡಿದ್ದರು. ಜಿಲ್ಲೆಯ ಗಡಿಯಲ್ಲಿ ಅಕ್ರಮವಾಗಿ ಮದ್ಯ ಸಾಗಣೆಯಾಗುತ್ತಿದ್ದ, ಸಂದರ್ಭ ಮಧ್ಯರಾತ್ರಿ ಖಾಸಗಿ ಕಾರಿನಲ್ಲಿ ತೆರಳಿ ಅಕ್ರಮಗಳನ್ನು ಬಯಲಿಗೆಳೆದಿದ್ದರು. ವಿಕೋಪದ ಸಂದರ್ಭದಲ್ಲೇ ಕರ್ತವ್ಯ ಲೋಪ ಎಸಗಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಕೆಲಸ ಮಾಡದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.