ಸೋಮವಾರಪೇಟೆ: ತಾಲೂಕಿನ ಕುಂದಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ವಾಹನವೊಂದರಲ್ಲಿ ಅನಾಲ್ತಾರಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಅರಣ್ಯ ಇಲಾಖೆಯವರು ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಕುಂದಳ್ಳಿ ಗ್ರಾಮದ ಪೈಸಾರಿ ಜಾಗದಿಂದ ಪಿಕ್ಅಪ್ ವಾಹನದಲ್ಲಿ ಸುಮಾರು 1ಲಕ್ಷ ರೂ.ಮೌಲ್ಯದ ಅನಾಲ್ತಾರಿ ಮರದ ನಾಟಾಗಳನ್ನು ಶಾಂತಳ್ಳಿ ಗ್ರಾಮದ ಸಜನ್ ಎಂಬಾತ ಸಾಗಿಸುತ್ತಿದ್ದನು. ಖಚಿತ ವರ್ತಮಾನದ ಮೇರೆಗೆ ಸೋಮವಾರಪೇಟೆ ವಲಯ ಅರಣ್ಯ ಇಲಾಖೆಯ ಡಿಆರ್ಎಫ್ಒ ಮಹದೇವ್ ನಾಯಕ್, ಲಾಲ್ ಸಾಬ್, ಅರಣ್ಯ ರಕ್ಷ ಕರಾದ ರಾಘವೇಂದ್ರ ಮತ್ತು ಸಿಬ್ಬಂದಿ ಸುಂದರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.