ಆ್ಯಪ್ನಗರ

ಕೇಂದ್ರದ ಅನುದಾನ ತರಲು ಶ್ರಮಿಸಿ

ಕಾಫಿ ಉದ್ಯಮ ಈಗ ಸಂಕಷ್ಟದಲ್ಲಿದೆ. ಹವಾ ಮಾನ ವೈಪರೀತ್ಯ, ನುರಿತ ಕೂಲಿ ಕಾರ್ಮಿಕರ ಕೊರತೆ ರಸಗೊಬ್ಬರ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಬೆಲೆ ಕಡಿಮೆಯಾಗುತ್ತಿದೆ. ಪರಿಣಾಮ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಫಿ ಮಂಡಳಿ ಸದಸ್ಯ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದರು.

Vijaya Karnataka Web 14 Aug 2016, 5:14 am
ನಾಪೋಕ್ಲು: ಕಾಫಿ ಉದ್ಯಮ ಈಗ ಸಂಕಷ್ಟದಲ್ಲಿದೆ. ಹವಾ ಮಾನ ವೈಪರೀತ್ಯ, ನುರಿತ ಕೂಲಿ ಕಾರ್ಮಿಕರ ಕೊರತೆ ರಸಗೊಬ್ಬರ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಬೆಲೆ ಕಡಿಮೆಯಾಗುತ್ತಿದೆ. ಪರಿಣಾಮ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಫಿ ಮಂಡಳಿ ಸದಸ್ಯ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದರು.
Vijaya Karnataka Web work hard to bring the centers grant
ಕೇಂದ್ರದ ಅನುದಾನ ತರಲು ಶ್ರಮಿಸಿ


ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ವತಿಯಿಂದ ಬೇತು ದವಸ ಭಂಡಾರ ಕಟ್ಟಡದಲ್ಲಿ ನಡೆದ ಗ್ರಾಮಮಟ್ಟದ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಕಾಫಿ ವಹಿವಾಟು ಶೇ. 70ರಷ್ಟು ವಿದೇಶ ವನ್ನು ಅವಲಂಬಿಸಿರುವುದರಿಂದ ಬೆಳೆಗಾರ ಕಾಫಿಯ ಗುಣಮಟ್ಟ ಮತ್ತು ಉತ್ಪಾದನಾ ಹೆಚ್ಚೆಳಕ್ಕೆ ಶ್ರಮಿಸಬೇಕಾಗಿದೆ. ಇದಕ್ಕೆ ಮುಖ್ಯ ವಾಗಿ ಮಣ್ಣಿನ ಪರೀಕ್ಷೆ ಮಾಡಿ ಅದಕ್ಕೆ ತಕ್ಕಂತೆ ರಸಗೊಬ್ಬರ ಮತ್ತು ಸುಣ್ಣ ನೀಡಬೇಕಾಗುತ್ತದೆ ಎಂದರು.

ಕಾಫಿ ಮಂಡಳಿ ಕೋಮಾ ಸ್ಥಿತಿಯಲ್ಲದ್ದು, ಎಂಟು ತಿಂಗಳಿಂದ ಕೇಂದ್ರ ಸರಕಾರ ಬೆಳೆಗಾರರಿಗೆ ಅನುದಾನ ನೀಡುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ವಿದ್ಯಾರ್ಥಿ ವೇತನದ ಹಣವಿಲ್ಲ. ಕಳೆದ ಒಂದು ವರ್ಷ ಎರಡು ತಿಂಗಳಿನಿಂದ ಕಾಫಿ ಮಂಡಳಿಯ ಯಾವುದೇ ಸಭೆ ನಡೆದಿಲ್ಲ. ಕಾಫಿ ಮಂಡಳಿ ಯಿಂದ ಬರುವ ಅನುದಾನ ಶೇ.30 ಕಡಿತಗೊಂಡಿದೆ. ನಮ್ಮ ಜನಪ್ರತಿನಿಧಿಗಳು ಬೆಳೆಗಾರರ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ತಿಳಿಸಿ ಅನುಧಾನ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಎಲ್ಲಾ ಬೆಳೆಗಾರರು ಮತ್ತು ಬೆಳೆಗಾರ ಸಂಘಟನೆಗಳು ರಾಜಕೀಯ ಮುಖಂಡರು ಒಟ್ಟಾಗಿ ನಮ್ಮ ಜನಪ್ರತಿನಿಧಿಗಳ ಮೂಲಕ ಒತ್ತಡ ಹೇರಿ ಅನುದಾನ ಬಿಡುಗಡೆಗೊಳಿಸಲು ಶ್ರಮಿಸಬೇಕಾಗಿದೆ. ಈ ಹಣ ಮಾರ್ಚ್ 2017ರ ಒಳಗೆ ಬಿಡುಗಡೆಗೊಳ್ಳದಿದ್ದಲ್ಲಿ ಕಾಫಿ ಮಂಡಳಿಗೆ ದೊರೆತ 950ಕೋಟಿ ಹಣ ವಾಪಾಸು ಹೋಗಲಿದೆ. ಇನ್ನಾದರೂ ಒಂದು ಸದಢ ಬೆಳೆಗಾರರ ಸಂಘಟನೆ ರೂಪುಗೊಂಡಲ್ಲಿ ಮಾತ್ರ ಬೆಳೆಗಾರರಿಗೆ ಉಳಿಗಾಲವಿದೆ ಎಂದರು

ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಅಂಕೇಗೌಡ ಮಾತನಾಡಿ, ಕಾಳುಮೆಣಸಿನ ಬಗ್ಗೆ ಸಮಗ್ರ ಮಾಹಿತಿ ನೀಡಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಸಿಕ್ಕರೆ ಮಾತ್ರ ಉತ್ತಮ ಇಳುವರಿ ಸಾಧ್ಯ. ಬೆಳೆಗಾರರು ತಮ್ಮ ತೋಟದಲ್ಲಿ ನರ್ಸರಿ ಮಾಡುವುದರಿಂದ ಉತ್ತಮ ಬೆಳೆ ಪಡೆಯಬಹುದು ಎಂದರು.

ನಿವತ್ತ ಶಿಕ್ಷಕ ಚೋಕಿರ ಪೊನ್ನಪ್ಪ, ಕಾಫಿ ಮಂಡಳಿಯ ನಾಪೋಕ್ಲು ವಿಭಾಗದ ಜೆಎಲ್‌ಓ ಬೊಪ್ಪಂಡ. ಕೆ. ಪೂಣಚ್ಚ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬೆಳೆಗಾರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ