ಆ್ಯಪ್ನಗರ

ಏಣಿಗೆ ವಿದ್ಯುತ್‌ ತಂತಿ ತಗುಲಿ ಕಾರ್ಮಿಕ ಸಾವು

ನೆಲ್ಯಹುದಿಕೇರಿಯಲ್ಲಿಬುಧವಾರ ಬೆಳಗ್ಗೆ ಕಾಫಿ ತೋಟದಲ್ಲಿಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಅಲ್ಯುಮಿನಿಯಂ ಏಣಿ ವಿದ್ಯುತ್‌ ತಂತಿಗೆ ತಗುಲಿ ಕೂಲಿ ಕಾರ್ಮಿಕ ಮೃತಪಟ್ಟರು.

Vijaya Karnataka 21 Nov 2019, 5:00 am
ಸಿದ್ದಾಪುರ : ನೆಲ್ಯಹುದಿಕೇರಿಯಲ್ಲಿಬುಧವಾರ ಬೆಳಗ್ಗೆ ಕಾಫಿ ತೋಟದಲ್ಲಿಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಅಲ್ಯುಮಿನಿಯಂ ಏಣಿ ವಿದ್ಯುತ್‌ ತಂತಿಗೆ ತಗುಲಿ ಕೂಲಿ ಕಾರ್ಮಿಕ ಮೃತಪಟ್ಟರು.
Vijaya Karnataka Web MDK20SDR2_19
ಕಬ್ಬಿಣದ ಏಣಿಗೆ ವಿದ್ಯುತ್‌ ತಂತಿ ತಗುಲಿ ಕಾರ್ಮಿಕ ಮೃತ ಪಟ್ಟ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಸಿಲನೆ ನಡೆಸಿದರು.


ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಪ್ರಕಾಶ್‌ ಎಂಬುವವರ ಅತ್ತಿಮಂಗಲ ಎಸ್ಟೇಟ್‌ನಲ್ಲಿಕೆಲಸ ನಿರ್ವಹಿಸುತ್ತಿದ್ದ ರಾಜನ್‌ (45) ಮೃತರು.

ನಲ್ವತೇಕ್ರೆಯ ಬರಡಿ ಗ್ರಾಮದ ಕಾರ್ಮಿಕ ರಾಜನ್‌ ಎಂದಿನಂತೆ ತನ್ನ ಮನೆಯಿಂದ ನೆಲ್ಯಹುದಿಕೇರಿಯ ಅತ್ತಿಮಂಗಲ ಎಸ್ಟೇಟ್‌ಗೆ ತೆರಳಿ, ತೋಟದಲ್ಲಿಕೆಲಸ ನಿರ್ವಹಿಸುವ ಸಂದರ್ಭ ಅಲ್ಯುಮಿನಿಯಂ ಏಣಿಗೆ 11 ಕೆ.ವಿ ವಿದ್ಯುತ್‌ ತಂತಿ ಸ್ಪರ್ಶವಾಗಿದೆ. ಕೂಡಲೇ ಪಕ್ಕದ ತೋಟದಲ್ಲಿಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಸ್ಥಳಕ್ಕಾಗಮಿಸಿ ಜೀವ ರಕ್ಷಣೆಗೆ ಮುಂದಾದರೂ ಫಲಕಾರಿಯಾಗಲಿಲ್ಲ.

ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ