ಆ್ಯಪ್ನಗರ

ಕಾವೇರಿ ನದಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಕಾವೇರಿ ನದಿಗೆ ಜಿಗಿದು ಮೈಸೂರು ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Vijaya Karnataka Web 9 Jun 2018, 8:37 pm
ಮಡಿಕೇರಿ: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಕಾವೇರಿ ನದಿಗೆ ಜಿಗಿದು ಮೈಸೂರು ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೈಸೂರು ಜ್ಯೋತಿನಗರ ನಿವಾಸಿ ಪಳನಿಸ್ವಾಮಿ ಎಂಬವರ ಪುತ್ರ ರಮೇಶ (28) ಮೃತ ವ್ಯಕ್ತಿ. ಕುಟುಂಬ ಕಲಹದಿಂದ ಮನನೊಂದು ಅವರು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
Vijaya Karnataka Web Madikeri death.


ಮನೆಯಿಂದ ಹೊರಬಂದಿದ್ದ ಈತ ಸಂಬಂಧಿ ಕಿರಣ ಎಂಬಾತನ ಜತೆ ಬೈಕ್‌ನಲ್ಲಿ ಜಿಲ್ಲೆಗೆ ಆಗಮಿಸಿದ್ದ ಎಂದು ತಿಳಿದುಬಂದಿದೆ. ಅಲ್ಲಲ್ಲಿ ಅಡ್ಡಾಡಿ ಗುಮ್ಮನಕೊಲ್ಲಿಯ ಕಾವೇರಿ ನದಿ ದಂಡೆಗೆ ತೆರಳಿ ಇಬ್ಬರೂ ಮದ್ಯಪಾನ ಮಾಡಿದ್ದು ಈ ವೇಳೆ ರಮೇಶ ಏಕಾಏಕಿ ಓಡಿ ಹೋಗಿ ನದಿಗೆ ಜಿಗಿದಿದ್ದಾನೆ. ಆತನನ್ನು ರಕ್ಷಿಸಲು ಕಿರಣ್ ಕೂಡ ನದಿಗೆ ಹಾರಿದ್ದಾನೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದ ಕಾರಣ ರಮೇಶ ಕೊಚ್ಚಿಹೋಗಿದ್ದಾನೆ. ಕಿರಣ್‌ನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಕುಶಾಲನಗರ ನಗರ ಠಾಣೆಗೆ ಕಿರಣ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಂದಲೇ ಮೃತದೇಹಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ದುಬಾರೆಯ ನುರಿತ ರ್‍ಯಾಫ್ಟಿಂಗ್ ಗೈಡ್‌ಗಳು ಮಧ್ಯಾಹ್ನ 3 ಗಂಟೆ ತನಕ ಗುಮ್ಮನಕೊಲ್ಲಿಂದ ಕೂಡ್ಲೂರುವರೆಗೆ ನದಿಯಲ್ಲಿ ಜಾಲಾಡಿದರೂ ಮೃತದೇಹ ಪತ್ತೆಯಾಗಿಲ್ಲ. ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದ ಕಾರಣ 3 ಗಂಟೆಗೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ