ಆ್ಯಪ್ನಗರ

ತೆಪ್ಪ ಮಗುಚಿ ಯುವಕ ನೀರುಪಾಲು

ಹಾರಂಗಿ ಹಿನ್ನೀರನ್ನು ದಾಟುತ್ತಿದ್ದ ವೇಳೆ ತೆಪ್ಪ ಮುಳುಗಿದ ಪರಿಣಾಮ ಯುವಕರೊಬ್ಬರು ಮೃತಪಟ್ಟಿದ್ದಾರೆ.

Vijaya Karnataka 18 Oct 2018, 5:00 am
ಸುಂಟಿಕೊಪ್ಪ
Vijaya Karnataka Web youth met watery grave
ತೆಪ್ಪ ಮಗುಚಿ ಯುವಕ ನೀರುಪಾಲು


ಹಾರಂಗಿ ಹಿನ್ನೀರನ್ನು ದಾಟುತ್ತಿದ್ದ ವೇಳೆ ತೆಪ್ಪ ಮುಳುಗಿದ ಪರಿಣಾಮ ಯುವಕರೊಬ್ಬರು ಮೃತಪಟ್ಟಿದ್ದಾರೆ.

ಸೋಮವಾರಪೇಟೆ ತಾಲೂಕು ನಾಕೂರು ಶಿರಂಗಾಲ ಗ್ರಾಮದ ಎ.ಪಿ.ವಿಶ್ವನಾಥ ಎಂಬುವವರ ಮಗ ಎ.ವಿ.ವಿಜಿತ್‌(26) ಮೃತರು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಈಶ್ವರ ದೇವಾಲಯದ ಮುಂಭಾಗದಲ್ಲಿ ಹಾರಂಗಿ ಹಿನ್ನೀರು ಹರಿಯುತ್ತಿದ್ದು, ಆಚೆ ದಡದ ನಿವಾಸಿಗಳು ಮತ್ತೊಂದು ದಂಡೆಯ ಕಡೆಗೆ ಹೋಗಿ ಬರುವುದಕ್ಕೆ ತೆಪ್ಪವನ್ನು ಅವಲಂಬಿಸಿದ್ದಾರೆ. ಅದೇ ರೀತಿ ವಿಜಿತ್‌ ಅ.15ರಂದು ಬೆಳಗ್ಗೆ ಮನೆಯಿಂದ ಕೆಲಸದ ನಿಮಿತ್ತ ಕಾನ್‌ ಬೈಲ್‌ ಗ್ರಾಮ ಪಂಚಾಯಿತಿಗೆ ಏಕಾಂಗಿಯಾಗಿ ತೆಪ್ಪದಲ್ಲಿ ಬರುತ್ತಿದ್ದ ಸಂದರ್ಭ ಹಿನ್ನೀರಿನ ಮಧ್ಯಭಾಗದಲ್ಲಿ ತೆಪ್ಪ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮ ಮುಳುಗಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಘಟನೆ ನಡೆದ ಅನತಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ