ಆ್ಯಪ್ನಗರ

ಗ್ರಾಮದ ಯುವಕರಿಂದಲೇ ತಿಂಗಳಿಗೊಮ್ಮೆ ಗ್ರಾಮ ಸ್ವಚ್ಚತೆ

ಗ್ರಾಮದಲ್ಲಿನ ಅನೈರ್ಮಲ್ಯವನ್ನು ಹೋಗಾಲಾಡಿಸಿವ ದಿಕ್ಕಿನಲ್ಲಿ ತಿಂಗಳಿಗೊಮ್ಮೆ ಗ್ರಾಮ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಹೋಬಳಿಯ ವಟ್ಟಿಗಲ್ಲು ಗ್ರಾಮದ ಯುವಕರು ಇತತರಿಗೆ ಮಾದರಿಯಾಗಿದ್ದಾರೆ. ಭಾನುವಾರ ಬಂತೆಂದರೆ ಮೋಜು ಮಸ್ತಿ ಎಂದು ಕಾಲಹರಣ ಮಾಡುವ ಯುವಕರ ಎದುರು ಈ ಗ್ರಾಮದ ಯುವಕರು ವಿಭಿನ್ನರಾಗಿದ್ದಾರೆ.

ವಿಕ ಸುದ್ದಿಲೋಕ 13 Sep 2016, 4:40 pm

ಕೆ.ಐ. ಪದ್ಮನಾಭ, ಕಾಮಸಮುದ್ರ

ಗ್ರಾಮದಲ್ಲಿನ ಅನೈರ್ಮಲ್ಯವನ್ನು ಹೋಗಾಲಾಡಿಸಿವ ದಿಕ್ಕಿನಲ್ಲಿ ತಿಂಗಳಿಗೊಮ್ಮೆ ಗ್ರಾಮ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಹೋಬಳಿಯ ವಟ್ಟಿಗಲ್ಲು ಗ್ರಾಮದ ಯುವಕರು ಇತತರಿಗೆ ಮಾದರಿಯಾಗಿದ್ದಾರೆ. ಭಾನುವಾರ ಬಂತೆಂದರೆ ಮೋಜು ಮಸ್ತಿ ಎಂದು ಕಾಲಹರಣ ಮಾಡುವ ಯುವಕರ ಎದುರು ಈ ಗ್ರಾಮದ ಯುವಕರು ವಿಭಿನ್ನರಾಗಿದ್ದಾರೆ.

ಎಂದಿನಂತೆ ಈ ಭಾನುವಾರವೂ ಗ್ರಾಮದ ಸುಮಾರು 30 ಯುವಕರು ಸೇರಿ ಸರಕಾರಿ ಪ್ರಾಥಮಿಕ ಶಾಲೆ, ಕಾಮಸಮುದ್ರ ರಸ್ತೆ, ಅರಳಿ ಕಟ್ಟೆ ಮುಂತಾದೆಡೆ ಬಿದ್ದಿದ್ದ ರಾಶಿ ರಾಶಿ ಕಸವನ್ನು ಟ್ರ್ಯಾಕ್ಟರ್‌ಗೆ ತುಂಬಿ ಗ್ರಾಮದಿಂದ ದೂರಕ್ಕೆ ಸಾಗಿಸಿದ್ದಾರೆ.

ಹಲವು ದಿನಗಳಿಂದ ಸಂಗ್ರಹವಾಗಿದ್ದ ಕಸ ವಿಲೇವಾರಿಯಾಗದೆ ಅಲ್ಲಲ್ಲಿ ಗುಡ್ಡೆಗಳಾಗಿ ಬಿದ್ದದ್ದನ್ನು ಒಮ್ಮೆ ತೆರವುಗೊಳಿಸಿದೆವು, ಆಗ ಆ ಜಾಗ ಸ್ವಚ್ಛವಾಗಿ ಕಾಣಿಸಿತು. ಇದೇ ನಮ್ಮ ಈ ಕಾರ್ಯಕ್ಕೆ ಪ್ರೇರಣೆ, ಅಂದಿನಿಂದ ತಿಂಗಳ ಮೊದಲ ಭಾನುವಾರವನ್ನು ಗ್ರಾಮದ ಸ್ವಚ್ಛತೆಗಾಗಿ ಮೀಸಲಿಡುವುದಾಗಿ ಪ್ರಕಟಿಸಿದ್ದೆವು. ಈ ಗಾಗಲೇ 2 ಬಾರಿ ಸ್ವಚ್ಛತೆ ಮಾಡಿದ್ದೇವೆ ಎಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ತಂಡದ ಸದಸ್ಯರೊಬ್ಬರು ತಿಳಿಸಿದರು.

ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಾವೆತ್ತಿಕೊಂಡಿರುವ ಈ ಕಾರ್ಯದಿಂದ ಮನೋಲ್ಲಾಸ ದೊರೆಯುವುದರೊಂದಿಗೆ ದೇಹಕ್ಕೆ ಉತ್ತಮ ವ್ಯಾಯಾಮವಾದಂತಿದೆ ಎಂದು ಮತ್ತೋಬ್ಬ ಯುವಕ ತಮ್ಮ ಮನದಾಳ ಬಿಚ್ಚಿಟ್ಟ.

ಮುಂದಿನ ತಿಂಗಳ ಮೊದಲ ಭಾನುವಾರದಂದು ವೃಷಭಾವತಿ ಕೆರೆಯ ಅಂಗಳದಲ್ಲಿರುವ ಸ್ಮಶಾನದ ಆವರಣವನ್ನು ಸ್ವಚ್ಛಗೊಳಿಸಿ, ನಾನಾ ಸಸಿಗಳನ್ನು ನೆಡಲಾಗುವುದು ಎಂದು ಯುವಕರು ತಿಳಿಸಿದರು.

ಇದಕ್ಕೂ ಮುನ್ನ ಗ್ರಾಪಂ ಸದಸ್ಯೆ ನೀಲಮ್ಮ ವೆಂಕಟರಾಮೇ ಗೌಡ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ಯುವಕರ ಈ ನಡೆ ಇತರರಿಗೆ ಮಾದರಿಯಾಗಿದೆ. ಸ್ವಚ್ಚತೆಗಾಗಿ ಶ್ರಮದಾನ ಮಾಡುವುದರಿಂದ ಮನಸ್ಸಿಗೆ ಸಂತಸವಾಗುತ್ತದೆ. ಇದು ಯುಕರನ್ನು ದುಶ್ಚಟಗಳಿಂದ ದೂರವಿಡುತ್ತದೆ ಎಂದರು. ಎಲ್ಲ ಗ್ರಾಮಗಳಲ್ಲೂ ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರವವಲು ಆಯೋಜಿಸಿದರೆ ಮೋದಿಯವರ ಸ್ಚಚ್ಛ ಭಾರತದ ಕನಸು ಈಡೇರಿದಂತಾಗುತ್ತದೆ ಎಂದರು.

ಶಿಕ್ಷಕ ಮುನಿವೆಂಕಟಪ್ಪ ಮಾತನಾಡಿ, ಈ ಕಾರ್ಯದಲ್ಲಿ ಕೇವಲ ಯುವಕರು ಮಾತ್ರವಲ್ಲದೆ ಹಿರಿಯರೂ ಕೈಜೋಡಿಸರೆ ಫಲ ಇಮ್ಮಡಿಯಾಗುತ್ತದೆ. ಎಳೆ ವಯಸ್ಸಿನ ಮಕ್ಕಳಿಗೆ ಸಮಾಜ ಸೇವೆ ಬಗ್ಗೆ ಅರಿವು ಮೂಡಿಸಲು ಅವರನ್ನೂ ಇಂತಹ ಕಾರ್ಯಗಳಿಗೆ ಸೇರಿಸಿಕೊಳ್ಳಬೇಕು ಎಂದರು.

ಈ ವೇಳೆ ಕಾಮಸಮುದ್ರ ಮೈರಾಡ ಪ್ರಗತಿ ಸಂಪನ್ಮೂಕ ಸಂಸ್ಥೆಯ ಮುಖ್ಯಸ್ಥ ದೊಡ್ಡಪ್ಪ, ಮುಖಂಡರಾದ ಸುಬ್ರಮಣಿ, ಸೂರ್ಯನಾರಾಯಣ, ರವಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ