ಆ್ಯಪ್ನಗರ

ಕೆಸಿ ವ್ಯಾಲಿ ನೀರು ಬಳಕೆ: ಕ್ರಮದ ಅಗತ್ಯವಿಲ್ಲ ರಮೇಶ್‌ಕುಮಾರ್‌

ನಮ್ಮ ಜನ ಸರಿಯಾಗಿ ನೀರನ್ನು ನೋಡಿಲ್ಲ. ಕೆಸಿವ್ಯಾಲಿ ಯೋಜನೆಯಡಿ ನೀರು ಬಂದಿದೆ. ಕೆಲ ರೈತರು ಅದನ್ನು ಬಳಸಿಕೊಂಡಿದ್ದರೆ ಆ ಬಗ್ಗೆ ಬುದ್ಧಿವಾದ ಹೇಳಿದರೆ ಸರಿಪಡಿಸಿಕೊಳ್ಳುತ್ತಾರೆ ಹೊರತು ಕ್ರಮಕೈಗೊಳ್ಳುವ ಅಗತ್ಯವಿಲ್ಲ ಎಂದು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು.

Vijaya Karnataka Web 26 Nov 2018, 4:43 pm
ಕೋಲಾರ : ನಮ್ಮ ಜನ ಸರಿಯಾಗಿ ನೀರನ್ನು ನೋಡಿಲ್ಲ. ಕೆಸಿವ್ಯಾಲಿ ಯೋಜನೆಯಡಿ ನೀರು ಬಂದಿದೆ. ಕೆಲ ರೈತರು ಅದನ್ನು ಬಳಸಿಕೊಂಡಿದ್ದರೆ
Vijaya Karnataka Web
ಕೆಸಿ ವ್ಯಾಲಿ ನೀರು ಬಳಕೆ: ಕ್ರಮದ ಅಗತ್ಯವಿಲ್ಲ ರಮೇಶ್‌ಕುಮಾರ್‌

ಆ ಬಗ್ಗೆ ಬುದ್ಧಿವಾದ ಹೇಳಿದರೆ ಸರಿಪಡಿಸಿಕೊಳ್ಳುತ್ತಾರೆ ಹೊರತು ಕ್ರಮಕೈಗೊಳ್ಳುವ ಅಗತ್ಯವಿಲ್ಲ ಎಂದು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು.

ನಗರದ ರಂಗಮಂದಿರದ ಆವರಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅಂತರ್ಜಲವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಕೇಳಿಕೊಂಡರೆ ಎಲ್ಲರೂ ಮನವರಿಕೆ ಮಾಡಿಕೊಂಡು ಅನುವು ಮಾಡಿಕೊಡುತ್ತಾರೆ. ಆದರೆ, ಕೆಲವರು ಒತ್ತುವರಿ ಮಾಡಿಕೊಂಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಕ್ರಮಕೈಗೊಂಡು ತೆರವುಗೊಳಿಸಲಿದ್ದಾರೆ ಎಂದು ಹೇಳಿದರು.

ಕೆಸಿವ್ಯಾಲಿ ಯೋಜನೆ ಆರಂಭಗೊಂಡು ನೀರು ಹರಿಯುತ್ತಿದೆ. ಎತ್ತಿನಹೊಳೆ ಯೋಜನೆ ಕಾಮಗಾರಿಯೂ ವೇಗವಾಗಿ ನಡೆಯುತ್ತಿದೆ. ಹೀಗಾಗಿ ಒಂದು ಕಡೆಯಿಂದ ಕೆರೆ, ರಾಜಕಾಲುವೆಗಳ ಒತ್ತುವರಿ ತೆರವು ಮಾಡಲಾಗುವುದು ಎಂದು ತಿಳಿಸಿದರು.

ಬಲಾಢ್ಯರು ಒತ್ತುವರಿದಾರರು, ಬಡವರಲ್ಲ: ಒತ್ತುವರಿ ಎನ್ನುವ ಪದದ ಅರ್ಥವನ್ನು ಎಲ್ಲರೂ ತಪ್ಪಾಗಿ ತಿಳಿದುಕೊಂಡಿದ್ದಾರೆ. ಬಲಾಢ್ಯರು ಉದ್ದೇಶಪೂರ್ವಕವಾಗಿ ಕಾನೂನನ್ನು ಧಿಕ್ಕರಿಸಿ, ಸರಕಾರಿ ಜಾಗವನ್ನು ಕಬ್ಜಾ ಮಾಡಿಕೊಂಡರೆ ಅದು ಒತ್ತುವರಿ ಆಗಿರುತ್ತದೆ.

ನಿರ್ಗತಿಕ, ಬಡವ, ಅಸಹಾಯಕ ಒಂದು ಗುಡಿಸಲು ಹಾಕಿಕೊಂಡಿದ್ದರೆ ಅದು ಒತ್ತುವರಿ ಆಗುವುದಿಲ್ಲ. ಎಲ್ಲೂ ಬದುಕುವುದಕ್ಕೆ ಜಾಗ ಇಲ್ಲವೆಂದು ಕೆರೆಯಂಗಳದಲ್ಲಿ ಕೊಚ್ಚಿಕೊಂಡು ಹೋದರೂ ಪರವಾಗಿಲ್ಲವೆಂದು ಗುಡಿಸಲು ಹಾಕಿಕೊಂಡಿದ್ದರೆ ಅವನು ಒತ್ತುವರಿದಾರನಾಗುವುದಿಲ್ಲ.

ಒತ್ತುವರಿದಾರರು ಬೇರೆ. ಒತ್ತುವರಿದಾರರಾಗುವುದು ಅನಿವಾರ್ಯವಾಗಿ ಬಲಾಢ್ಯರು. ಅನಧಿಕೃತವಾಗಿ ಸರಕಾರಿ ಭೂಮಿಯಲ್ಲಿ ಕಬ್ಜಾ ಹಿಡಿಯುವಂತಹವರು ಬಡವರು. ನಾವು ಬಡವರ ಪರ ಇದ್ದೇವೆ, ಅವರನ್ನು ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಪುನರ್ವಸತಿ ಕಲ್ಪಿಸಬೇಕಾಗುತ್ತದೆ ಎಂದು ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ