ಆ್ಯಪ್ನಗರ

ವಂಚನೆ ಪ್ರಕರಣದ ಸಿಐಡಿ ತನಿಖೆಗೆ ಆದೇಶ

ಪಟ್ಟಣ ಸೇರಿದಂತೆ ರಾಜ್ಯಾದ್ಯಂತ ಫೈನಾನ್ಸ್‌ ಹೆಸರಿನಲ್ಲಿಗ್ರಾಹಕರಿಂದ ಸಾವಿರಾರು ಕೋಟಿ ಸಂಗ್ರಹಿಸಿ ಹಣ ನೀಡದೇ ವಂಚಿಸಿದ್ದ ಪಟ್ಟಣದ ಷಣ್ಮುಗಂ ಫೈನಾನ್ಸ್‌ ಮಾಲೀಕ ಷಣ್ಮುಗಂ ವಿರುದ್ಧ ಸಿಐಡಿ ತನಿಖೆಗೆ ಒಪ್ಪಿಸಲು ಪೊಲೀಸ್‌ ಇಲಾಖೆಯ ಡಿಜಿಐ ಜಿ.ಪಿ.ನೀಲಮಣಿರಾಜು ಆದೇಶಿಸಿದ್ದಾರೆ.

Vijaya Karnataka 12 Sep 2019, 5:00 am
ಬಂಗಾರಪೇಟೆ: ಪಟ್ಟಣ ಸೇರಿದಂತೆ ರಾಜ್ಯಾದ್ಯಂತ ಫೈನಾನ್ಸ್‌ ಹೆಸರಿನಲ್ಲಿಗ್ರಾಹಕರಿಂದ ಸಾವಿರಾರು ಕೋಟಿ ಸಂಗ್ರಹಿಸಿ ಹಣ ನೀಡದೇ ವಂಚಿಸಿದ್ದ ಪಟ್ಟಣದ ಷಣ್ಮುಗಂ ಫೈನಾನ್ಸ್‌ ಮಾಲೀಕ ಷಣ್ಮುಗಂ ವಿರುದ್ಧ ಸಿಐಡಿ ತನಿಖೆಗೆ ಒಪ್ಪಿಸಲು ಪೊಲೀಸ್‌ ಇಲಾಖೆಯ ಡಿಜಿಐ ಜಿ.ಪಿ.ನೀಲಮಣಿರಾಜು ಆದೇಶಿಸಿದ್ದಾರೆ.
Vijaya Karnataka Web
ವಂಚನೆ ಪ್ರಕರಣದ ಸಿಐಡಿ ತನಿಖೆಗೆ ಆದೇಶ


ಮೂರು ವರ್ಷಗಳಿಂದ ಸಾವಿರಾರು ಮಂದಿ ಪಟ್ಟಣದ ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ ದಾಖಲಿಸದೇ ಹಿಂದೇಟು ಹಾಕುವ ಮೂಲಕ ಆರೋಪಿ ಪರ ನಿಂತಿದ್ದರು ಎನ್ನುವ ಕಾರಣಕ್ಕೆ ಕಳೆದ ವರ್ಷ 2018ರಲ್ಲಿಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಮೊದಲ ಎಫ್‌ಐಆರ್‌ ಆರೋಪಿ ಷಣ್ಮುಗಂ ಹಾಗೂ ಮ್ಯಾನೇಜರ್‌ ನಾಗರಾಜ್‌ ವಿರುದ್ಧ ದಾಖಲಿಸಲಾಗಿತ್ತು.

ನಂತರ ಹಲವರು ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಲಿಲ್ಲ. ಕಳೆದ ಜೂನ್‌ನಲ್ಲಿನೂತನವಾಗಿ ಬಂದ ಎಸ್ಪಿ ಮಹಮದ್‌ ಸುಜೀತಾ ಅವರ ಸೂಚನೆಯಂತೆ ಹತ್ತಾರು ಎಫ್‌ಐಆರ್‌ಗಳು ಆರೋಪಿ ಷಣ್ಮುಗಂ ವಿರುದ್ಧ ದಾಖಲಾದವು.

ಅದರಂತೆ ಪೊಲೀಸ್‌ ಇಲಾಖೆ ಸಂಗ್ರಹಿಸಿರುವ ಅಧಿಕೃತ ಮಾಹಿತಿಯಂತೆ 500 ಕೋಟಿ ವಂಚಿಸಿರುವ ಬಗ್ಗೆ ದೂರುಗಳು ದಾಖಲಾದ ಹಿನ್ನೆಲೆಯಲ್ಲಿಇಲಾಖೆಯ ಉನ್ನತ ಅಧಿಕಾರಿಗಳು ಈ ಪ್ರಕರಣವನ್ನು ಸಿಐಡಿ ಇಲ್ಲವೇ ಎಸ್‌ಐಟಿಗೆ ವಹಿಸುವುದು ಸೂಕ್ತ ಎಂದು ನಿರ್ಧರಿಸಿದ ಹಿನ್ನೆಲೆಯಲ್ಲಿಡಿಐಜಿ ನೀಲಮಣಿರಾಜು ಮೊದಲ ಹಂತವಾಗಿ ಸಿಐಡಿ ತನಿಖೆಗೆ ವಹಿಸಿದ್ದಾರೆ.

ಈ ಬಗ್ಗೆ ಬುಧವಾರ ಬಂಗಾರಪೇಟೆ ನ್ಯಾಯಾಲಯದಲ್ಲಿಅರ್ಜಿ ಸಲ್ಲಿಸಿದ ಸ್ಥಳೀಯ ಪೊಲೀಸ್‌ ಇಲಾಖೆ ಷಣ್ಮುಗಂಗೆ ಸಂಬಂಧಪಟ್ಟ ಎಫ್‌ಐಆರ್‌ (ಸಿಆರ್‌ ನಂಬರ್‌ 160/2019) ಹಾಗೂ ಇತರೆ ದಾಖಲೆಗಳನ್ನು ಪೊಲೀಸ್‌ ಇಲಾಖೆ ಡಿಐಜಿ ಅವರಿಗೆ ಹಸ್ತಾಂತರಿಸಲು ಪಡೆಯಿತು. ಅವರ ಸೂಚನೆಯಂತೆ ಈಗಾಗಲೇ ಸಿಐಡಿ ಅಧಿಕಾರಿಗಳು ದಾಖಲೆಗಳನ್ನು ಪಡೆದ್ದಾರೆ ಎಂದು ಇಲಾಖೆ ಉನ್ನತ ಮೂಲಗಳು ಸ್ಪಷ್ಟಪಡಿಸಿದೆ.

ಹಿನ್ನೆಲೆ: ಪಟ್ಟಣದ ಷಣ್ಮುಗಂ ಫೈನಾನ್ಸ್‌, ಷಣ್ಮುಗಂ ಮಾಡರ್ನ್‌ ರೈಸ್‌ ಮಿಲ್‌ ಹಾಗೂ ಷಣ್ಮುಗಂ ಇನ್ವೆಸ್ಟ್‌ಮೆಂಟ್‌ ಹೆಸರಿನಲ್ಲಿಮಾಲೀಕ ಷಣ್ಮುಗಂ, ಮಗ ದಿಲೀಪ್‌, ಮ್ಯಾನೇಜರ್‌ ನಾಗರಾಜ್‌ ಕಳೆದ ಮೂರು ದಶಕಗಳಿಂದ ಗ್ರಾಹಕರಿಂದ ಹಣ ಸಂಗ್ರಹಿಸಿ ಬಡ್ಡಿ ಪಾವತಿಸುತ್ತಿದ್ದರು. ಇದನ್ನು ನಂಬಿ ಪಟ್ಟಣ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನ ಸಾವಿರಾರು ಗ್ರಾಹಕರು ಬಡ್ಡಿಯಾಸೆಗೆ ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು. ಆದರೆ 2016ರಲ್ಲಿಕೇಂದ್ರ ಸರಕಾರ ನೋಟ್‌ ರದ್ದು ಮಾಡಿದ ನಂತರ ಷಣ್ಮುಗಂ ಬಡ್ಡಿ ಸೇರಿದಂತೆ ಅಸಲನ್ನು ನೀಡದೇ ಗ್ರಾಹಕರಿಗೆ ಧಮಕಿ ಹಾಕುವುದು, ಬೆದರಿಸುವುದು ಮಾಡಿ ಸತಾಯಿಸಿದ್ದರು.

ಆದರೆ ಫೈನಾನ್ಸ್‌ನಲ್ಲಿಹೂಡಿಕೆ ಮಾಡಿದ್ದ ಬಹುತೇಕ ಎಲ್ಲಾಗ್ರಾಹಕರಿಗೂ ಷಣ್ಮುಗಂ ಚೆಕ್‌ ಹಾಗೂ ಆಂಡಿಮೆಂಟ್‌ ನೀಡಿದ್ದ. ಇದರಿಂದ ಹಲವಾರು ಮಂದಿ ನ್ಯಾಯಾಲಯಗಳಲ್ಲಿಚೆಕ್‌ ಬೌನ್ಸ್‌ ಹಾಗೂ ಆಂಡಿಮೆಂಟ್‌ ಪ್ರಕರಣಗಳನ್ನು ಹೂಡಿದ್ದರು. ಬಂಗಾರಪೇಟೆ, ಕೆಜಿಎಫ್‌, ಕೋಲಾರ, ಮಾಲೂರು,ಬೆಂಗಳೂರು ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿದಾಖಲಿಸಿರುವ ಪ್ರಕರಣಗಳ ಸಂಖ್ಯೆಯೇ 100ರ ಗಡಿ ದಾಟಿದ್ದು ಸರಿ ಸುಮಾರು 100 ಕೋಟಿಗಳಿಗೂ ಹೆಚ್ಚು ಪರಿಹಾರ ಗ್ರಾಹಕರು ಕೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ