ಮಕ್ಕಳಿಲ್ಲದೆ 14 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಬೀಗ!
ಶಾಲೆ ಪ್ರಾರಂಭಕ್ಕೂ ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಿದ 'ದಾಖಲು ಆಂದೋಲನ' ವಿಫಲವಾಗಿದೆ. ಪರಿಣಾಮ, ಪ್ರಸಕ್ತ ಸಾಲಿನಲ್ಲಿಯೂ ಜಿಲ್ಲೆಯ 14 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಬೀಗ ಬಿದ್ದಿದೆ.
Vijaya Karnataka 9 Oct 2019, 2:13 pm
ವೆಂ. ಸುನೀಲ್ ಕುಮಾರ್ ಕೋಲಾರ
ಶಾಲೆ ಪ್ರಾರಂಭಕ್ಕೂ ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಿದ 'ದಾಖಲು ಆಂದೋಲನ' ವಿಫಲವಾಗಿದೆ. ಪರಿಣಾಮ, ಪ್ರಸಕ್ತ ಸಾಲಿನಲ್ಲಿಯೂ ಜಿಲ್ಲೆಯ 14 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಬೀಗ ಬಿದ್ದಿದೆ.
ಪ್ರತಿ ವರ್ಷ ಶಿಕ್ಷಣ ಇಲಾಖೆಯಿಂದ ಬೇಸಿಗೆ ರಜೆಯಲ್ಲಿಪ್ರತಿಯೊಂದು ಹಳ್ಳಿಗೆ ಹೋಗಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ದಾಖಲು ಆಂದೋಲನ ನಡೆಯುತ್ತಿದೆ. ಈ ವೇಳೆ ಶಿಕ್ಷಕರು ಮನೆ, ಮನೆಗೆ ಭೇಟಿ ನೀಡಿ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಮನವರಿಕೆ ಮಾಡುತ್ತಿದ್ದಾರೆ.
ಇದರೊಂದಿಗೆ ಶಾಲೆ ಪ್ರಾರಂಭವಾದಾಗಲೂ ವಿಶೇಷ ದಾಖಲು ಆಂದೋಲನ ನಡೆಸಲಾಗುತ್ತಿದೆ. ಆದರೂ, ಸರಕಾರಿ ಶಾಲೆಗಳ ದಾಖಲು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವುದು ಗಮನಿಸಿದರೆ, ಆಂದೋಲನದ ಪ್ರಯೋಜನವೇನು ಎಂಬ ಪ್ರಶ್ನೆ ಕಾಡುವಂತಾಗಿದೆ.
ಖಾಸಗಿ ಶಾಲೆಗಳ ಬಗೆಗಿನ ಪೋಷಕರ ವ್ಯಾಮೋಹ, ಸರಕಾರಿ ಶಾಲೆಗಳ ಕುರಿತ ಕೀಳರಿಮೆ, ಶಿಕ್ಷಣ ಹಕ್ಕು ಕಾಯಿದೆ, ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ ಹೀಗೆ ಹಲವು ಕಾರಣಗಳಿಂದಾಗಿ ಪ್ರತಿ ವರ್ಷ ಸರಕಾರಿ ಶಾಲೆಗಳಿಗೆ ಬೀಗ ಬೀಳುತ್ತಿರುವುದು ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿಒಟ್ಟು 2,223 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಕಳೆದ 3 ವರ್ಷಗಳಲ್ಲಿ40ಕ್ಕೂ ಹೆಚ್ಚಿನ ಶಾಲೆಗಳಲ್ಲಿಶೂನ್ಯ ಮಕ್ಕಳ ದಾಖಲಾಗಿದ್ದಾರೆ. ಇದು ಈ ಬಾರಿಯೂ ಮುಂದುವರಿದಿದ್ದು, 14 ಶಾಲೆಗಳಿಗೆ ಮಕ್ಕಳು ದಾಖಲಾಗದ ಹಿನ್ನೆಲೆಯಲ್ಲಿಶಾಲೆಗಳಿಗೆ ಬೀಗ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವು ಯೋಜನೆಗಳಿದ್ದರೂ ಫಲವಿಲ್ಲ: ಸರಕಾರಿ ಶಾಲೆಗಳಲ್ಲಿಬಿಸಿಯೂಟ, ಕ್ಷೀರಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವು ಸೌಲಭ್ಯ ನೀಡಿ ಉಚಿತ ಶಿಕ್ಷಣ ನೀಡುತ್ತಿದೆಯಾದರೂ, ಸರಕಾರಿ ಶಾಲೆಗಳಲ್ಲಿಮಕ್ಕಳ ಪ್ರವೇಶಕ್ಕೆ ಪೋಷಕರು ಹಿಂದೇಟು ಹಾಕುತ್ತಿದ್ದು, ಸರಕಾರದ ಯಾವುದೇ ಯೋಜನೆಗಳು ಸರಕಾರಿ ಶಾಲೆಗಳ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸುವಲ್ಲಿಯಶಸ್ವಿಯಾಗಿಲ್ಲ.
ಶಾಲೆ ನಡೆಸಲು ಕನಿಷ್ಠ 10 ಮಕ್ಕಳು ಬೇಕು: ಸರಕಾರದ ಆದೇಶದಂತೆ ಕನಿಷ್ಠ 10 ಮಕ್ಕಳಿದ್ದರೆ ಮಾತ್ರ ಶಾಲೆ ನಡೆಸಬಹುದಾಗಿದ್ದು, ಅದಕ್ಕಿಂತ ಕಡಿಮೆ ಮಕ್ಕಳಿದ್ದರೆ ಅವರನ್ನು ಸಮೀಪದ ಸರಕಾರಿ ಶಾಲೆಗೆ ವರ್ಗಾಯಿಸಬೇಕಾಗುತ್ತದೆ. ಅದರಂತೆ ಜಿಲ್ಲೆಯ 100ಕ್ಕೂ ಹೆಚ್ಚಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವುದು ಕಂಡುಬಂದಿದೆ.
ಐದು ವರ್ಷಗಳ ಬಳಿಕ ಶಾಶ್ವತ ಬೀಗ: ಒಂದು ವರ್ಷ ಶಾಲೆಗೆ ಕನಿಷ್ಠ 10 ಮಕ್ಕಳು ದಾಖಲಾಗದಿದ್ದರೆ ಅಂತಹ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿಯಾವುದೇ ವರ್ಷ 10ಕ್ಕಿಂತ ಹೆಚ್ಚು ಮಕ್ಕಳು ಶಾಲೆಯಲ್ಲಿದಾಖಲಾಗದೆ ಮತ್ತೆ ಶಾಲೆಯನ್ನು ಆರಂಭಿಸಲಾಗುತ್ತದೆ. ಆದರೆ, ಐದು ವರ್ಷಗಳು 10ಕ್ಕಿಂತ ಕಡಿಮೆ ಮಕ್ಕಳು ದಾಖಲಾದರೆ ಅಂತಹ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಾರೆ.
ಮಕ್ಕಳ ದಾಖಲಾತಿ ಇದ್ದರೆ ಮುಂದಿನ ವರ್ಷ ಶಾಲೆ ಪುನಾರಂಭಿಸಲು ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದರೂ, ಶಾಲೆ ಮುಚ್ಚಿರುವುದರಿಂದ ಪೋಷಕರು ಯಾರು ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಮುಂದಾಗುವುದಿಲ್ಲ. ಆ ಮೂಲಕ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ವ್ಯವಸ್ಥಿತ ಹುನ್ನಾರ ಇದಾಗಿದೆ ಎಂಬುದು ವಿದ್ಯಾರ್ಥಿ ಸಂಘಟನೆಗಳ ಆರೋಪವಾಗಿದೆ.
14 ಶಾಲೆಗಳಿಗೆ ಬೀಗ: ಪ್ರಸಕ್ತ ಸಾಲಿನಲ್ಲಿಯೂ ಜಿಲ್ಲೆಯ 14 ಶಾಲೆಗಳಿಗೆ ಬೀಗ ಹಾಲಾಗಿದೆ. ಆ ಪೈಕಿ ಬಂಗಾರಪೇಟೆ 4, ಕೋಲಾರ 5, ಮುಳಬಾಗಿಲು 1 ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ4 ಶಾಲೆಗಳನ್ನು ಶೂನ್ಯ ದಾಖಲಾಗಿ ಕಾರಣದಿಂದ ಮುಚ್ಚಲಾಗಿದೆ.
ಶೂನ್ಯ ದಾಖಲಾತಿ ಕಾರಣದಿಂದಾಗಿ ಕೆಲ ತಾಲೂಕುಗಳಲ್ಲಿಶಾಲೆಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳು ದಾಖಲಾದರೆ ಮತ್ತೆ ಆರಂಭಿಸಲು ಅವಕಾಶವಿದೆ. ಪೋಷಕರು ಎಷ್ಟೇ ಕಷ್ಟವಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಪ್ರತಿವರ್ಷ ಪೋಷಕರ ಮನವೊಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
-ಕೆ.ರತ್ನಯ್ಯ, ಡಿಡಿಪಿಐ, ಕೋಲಾರ
ಜಿಲ್ಲೆಯಲ್ಲಿಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಾಹಿತಿ
ತಾಲೂಕು ಶಾಲೆಗಳ ಸಂಖ್ಯೆ
ಬಂಗಾರಪೇಟೆ 380
ಕೆಜಿಎಫ್ 190
ಕೋಲಾರ 492
ಮಾಲೂರು 361
ಮುಳಬಾಗಲು 450
ಶ್ರೀನಿವಾಸಪುರ 350
ಒಟ್ಟು 2,223
ಶಾಲೆ ಪ್ರಾರಂಭಕ್ಕೂ ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಿದ 'ದಾಖಲು ಆಂದೋಲನ' ವಿಫಲವಾಗಿದೆ. ಪರಿಣಾಮ, ಪ್ರಸಕ್ತ ಸಾಲಿನಲ್ಲಿಯೂ ಜಿಲ್ಲೆಯ 14 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಬೀಗ ಬಿದ್ದಿದೆ.
ಪ್ರತಿ ವರ್ಷ ಶಿಕ್ಷಣ ಇಲಾಖೆಯಿಂದ ಬೇಸಿಗೆ ರಜೆಯಲ್ಲಿಪ್ರತಿಯೊಂದು ಹಳ್ಳಿಗೆ ಹೋಗಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ದಾಖಲು ಆಂದೋಲನ ನಡೆಯುತ್ತಿದೆ. ಈ ವೇಳೆ ಶಿಕ್ಷಕರು ಮನೆ, ಮನೆಗೆ ಭೇಟಿ ನೀಡಿ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಮನವರಿಕೆ ಮಾಡುತ್ತಿದ್ದಾರೆ.
ಇದರೊಂದಿಗೆ ಶಾಲೆ ಪ್ರಾರಂಭವಾದಾಗಲೂ ವಿಶೇಷ ದಾಖಲು ಆಂದೋಲನ ನಡೆಸಲಾಗುತ್ತಿದೆ. ಆದರೂ, ಸರಕಾರಿ ಶಾಲೆಗಳ ದಾಖಲು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವುದು ಗಮನಿಸಿದರೆ, ಆಂದೋಲನದ ಪ್ರಯೋಜನವೇನು ಎಂಬ ಪ್ರಶ್ನೆ ಕಾಡುವಂತಾಗಿದೆ.
ಖಾಸಗಿ ಶಾಲೆಗಳ ಬಗೆಗಿನ ಪೋಷಕರ ವ್ಯಾಮೋಹ, ಸರಕಾರಿ ಶಾಲೆಗಳ ಕುರಿತ ಕೀಳರಿಮೆ, ಶಿಕ್ಷಣ ಹಕ್ಕು ಕಾಯಿದೆ, ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ ಹೀಗೆ ಹಲವು ಕಾರಣಗಳಿಂದಾಗಿ ಪ್ರತಿ ವರ್ಷ ಸರಕಾರಿ ಶಾಲೆಗಳಿಗೆ ಬೀಗ ಬೀಳುತ್ತಿರುವುದು ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿಒಟ್ಟು 2,223 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಕಳೆದ 3 ವರ್ಷಗಳಲ್ಲಿ40ಕ್ಕೂ ಹೆಚ್ಚಿನ ಶಾಲೆಗಳಲ್ಲಿಶೂನ್ಯ ಮಕ್ಕಳ ದಾಖಲಾಗಿದ್ದಾರೆ. ಇದು ಈ ಬಾರಿಯೂ ಮುಂದುವರಿದಿದ್ದು, 14 ಶಾಲೆಗಳಿಗೆ ಮಕ್ಕಳು ದಾಖಲಾಗದ ಹಿನ್ನೆಲೆಯಲ್ಲಿಶಾಲೆಗಳಿಗೆ ಬೀಗ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವು ಯೋಜನೆಗಳಿದ್ದರೂ ಫಲವಿಲ್ಲ: ಸರಕಾರಿ ಶಾಲೆಗಳಲ್ಲಿಬಿಸಿಯೂಟ, ಕ್ಷೀರಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವು ಸೌಲಭ್ಯ ನೀಡಿ ಉಚಿತ ಶಿಕ್ಷಣ ನೀಡುತ್ತಿದೆಯಾದರೂ, ಸರಕಾರಿ ಶಾಲೆಗಳಲ್ಲಿಮಕ್ಕಳ ಪ್ರವೇಶಕ್ಕೆ ಪೋಷಕರು ಹಿಂದೇಟು ಹಾಕುತ್ತಿದ್ದು, ಸರಕಾರದ ಯಾವುದೇ ಯೋಜನೆಗಳು ಸರಕಾರಿ ಶಾಲೆಗಳ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸುವಲ್ಲಿಯಶಸ್ವಿಯಾಗಿಲ್ಲ.
ಶಾಲೆ ನಡೆಸಲು ಕನಿಷ್ಠ 10 ಮಕ್ಕಳು ಬೇಕು: ಸರಕಾರದ ಆದೇಶದಂತೆ ಕನಿಷ್ಠ 10 ಮಕ್ಕಳಿದ್ದರೆ ಮಾತ್ರ ಶಾಲೆ ನಡೆಸಬಹುದಾಗಿದ್ದು, ಅದಕ್ಕಿಂತ ಕಡಿಮೆ ಮಕ್ಕಳಿದ್ದರೆ ಅವರನ್ನು ಸಮೀಪದ ಸರಕಾರಿ ಶಾಲೆಗೆ ವರ್ಗಾಯಿಸಬೇಕಾಗುತ್ತದೆ. ಅದರಂತೆ ಜಿಲ್ಲೆಯ 100ಕ್ಕೂ ಹೆಚ್ಚಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವುದು ಕಂಡುಬಂದಿದೆ.
ಐದು ವರ್ಷಗಳ ಬಳಿಕ ಶಾಶ್ವತ ಬೀಗ: ಒಂದು ವರ್ಷ ಶಾಲೆಗೆ ಕನಿಷ್ಠ 10 ಮಕ್ಕಳು ದಾಖಲಾಗದಿದ್ದರೆ ಅಂತಹ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿಯಾವುದೇ ವರ್ಷ 10ಕ್ಕಿಂತ ಹೆಚ್ಚು ಮಕ್ಕಳು ಶಾಲೆಯಲ್ಲಿದಾಖಲಾಗದೆ ಮತ್ತೆ ಶಾಲೆಯನ್ನು ಆರಂಭಿಸಲಾಗುತ್ತದೆ. ಆದರೆ, ಐದು ವರ್ಷಗಳು 10ಕ್ಕಿಂತ ಕಡಿಮೆ ಮಕ್ಕಳು ದಾಖಲಾದರೆ ಅಂತಹ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಾರೆ.
ಮಕ್ಕಳ ದಾಖಲಾತಿ ಇದ್ದರೆ ಮುಂದಿನ ವರ್ಷ ಶಾಲೆ ಪುನಾರಂಭಿಸಲು ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದರೂ, ಶಾಲೆ ಮುಚ್ಚಿರುವುದರಿಂದ ಪೋಷಕರು ಯಾರು ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಮುಂದಾಗುವುದಿಲ್ಲ. ಆ ಮೂಲಕ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ವ್ಯವಸ್ಥಿತ ಹುನ್ನಾರ ಇದಾಗಿದೆ ಎಂಬುದು ವಿದ್ಯಾರ್ಥಿ ಸಂಘಟನೆಗಳ ಆರೋಪವಾಗಿದೆ.
14 ಶಾಲೆಗಳಿಗೆ ಬೀಗ: ಪ್ರಸಕ್ತ ಸಾಲಿನಲ್ಲಿಯೂ ಜಿಲ್ಲೆಯ 14 ಶಾಲೆಗಳಿಗೆ ಬೀಗ ಹಾಲಾಗಿದೆ. ಆ ಪೈಕಿ ಬಂಗಾರಪೇಟೆ 4, ಕೋಲಾರ 5, ಮುಳಬಾಗಿಲು 1 ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ4 ಶಾಲೆಗಳನ್ನು ಶೂನ್ಯ ದಾಖಲಾಗಿ ಕಾರಣದಿಂದ ಮುಚ್ಚಲಾಗಿದೆ.
ಶೂನ್ಯ ದಾಖಲಾತಿ ಕಾರಣದಿಂದಾಗಿ ಕೆಲ ತಾಲೂಕುಗಳಲ್ಲಿಶಾಲೆಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳು ದಾಖಲಾದರೆ ಮತ್ತೆ ಆರಂಭಿಸಲು ಅವಕಾಶವಿದೆ. ಪೋಷಕರು ಎಷ್ಟೇ ಕಷ್ಟವಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಪ್ರತಿವರ್ಷ ಪೋಷಕರ ಮನವೊಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
-ಕೆ.ರತ್ನಯ್ಯ, ಡಿಡಿಪಿಐ, ಕೋಲಾರ
ಜಿಲ್ಲೆಯಲ್ಲಿಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಾಹಿತಿ
ತಾಲೂಕು ಶಾಲೆಗಳ ಸಂಖ್ಯೆ
ಬಂಗಾರಪೇಟೆ 380
ಕೆಜಿಎಫ್ 190
ಕೋಲಾರ 492
ಮಾಲೂರು 361
ಮುಳಬಾಗಲು 450
ಶ್ರೀನಿವಾಸಪುರ 350
ಒಟ್ಟು 2,223