ಆ್ಯಪ್ನಗರ

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸಾಧಿಸಿದ ಕೋಲಾರದ 2.5 ವರ್ಷದ ಪುಟಾಣಿ

ಇಲ್ಲೊಂದು ಮಗು ಕೇವಲ ಎರಡೂವರೆ ವರ್ಷಕ್ಕೇ ತನ್ನ ಅಗಾದ ಸ್ಮರಣಶಕ್ತಿಯಿಂದ ಅಚ್ಚರಿಪಡಿಸಿದೆ. ಶ್ಲೋಕಗಳು, ಹಾಡುಗಳು, ಗಣಿತದ ಮಗ್ಗಿಗಳನ್ನು ಹರಳು ಹುರಿದಂತೆ ಪಟಪಟ ಹೇಳುತ್ತಾನೆ. ಇದಕ್ಕಾಗಿ ಅತಿ ಕಿರಿಯ ವಯಸಲ್ಲೇ ಇಂಡಿಯಾ ಬುಕ್ಸ್‌ ಆಫ್‌ ರೆಕಾರ್ಡ್ಸ್‌ಗೆ ಸೇರಿದ್ದಾನೆ.

Vijaya Karnataka Web 3 Oct 2020, 2:40 pm
ಬೆಂಗಳೂರು: ಪ್ರತಿಭೆ ಯಾರಲ್ಲಿ ಹೇಗೆ ಪ್ರಕಟವಾಗುತ್ತದೆ ಎಂದು ಹೇಳಲು ಸಾಧ್ಯವಾಗದು. ವಿಶ್ವದ ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್‌ ವಯಸ್ಕನಾದರೂ, ಸರಿಯಾಗಿ ಮಾತನಾಡಲೂ ಬರುತ್ತಿರಲಿಲ್ಲವಂತೆ. ಆದರೆ, ಇಲ್ಲೊಂದು ಮಗು ಕೇವಲ ಎರಡೂವರೆ ವರ್ಷಕ್ಕೇ ತನ್ನ ಅಗಾದ ಸ್ಮರಣಶಕ್ತಿಯಿಂದ ಅಚ್ಚರಿ ಮೂಡಿಸಿದೆ. ಶ್ಲೋಕಗಳು, ಹಾಡುಗಳು, ಗಣಿತದ ಮಗ್ಗಿಗಳನ್ನು ಹರಳು ಹುರಿದಂತೆ ಪಟಪಟ ಹೇಳುತ್ತಾನೆ ಈ ಬಾಲಕ. ಇದಕ್ಕಾಗಿ ಅತಿ ಕಿರಿಯ ವಯಸ್ಸಲ್ಲೇ ಇಂಡಿಯಾ ಬುಕ್ಸ್‌ ಆಫ್‌ ರೆಕಾರ್ಡ್ಸ್‌ಗೆ ಸೇರಿದ್ದಾನೆ.
Vijaya Karnataka Web india book of record kolara


ಈ ಸಾಧನೆಗೆ ಪಾತ್ರವಾಗಿರುವ ಮಗು ವಿದೇಶದ್ದಲ್ಲ. ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದ ಮುರಳಿಕೃಷ್ಣ ಮತ್ತು ಶೃತಿ ದಂಪತಿಯ ಪುತ್ರ ವೇದ್‌ ಸಿಂದಾಂತ್‌ ಈ ಸಾಧನೆ ಮಾಡಿರುವ ಪುಟ್ಟ ಬಾಲಕ.

8ರ ಪೋರ ಮಗ್ಗಿವೀರ,ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ

ಬಾಲಕನ ಸಾಧನೆಯೇನು?
ರಾಷ್ಟ್ರಗೀತೆಯನ್ನು 52 ಸೆಕೆಂಡ್‌ಗಳಲ್ಲಿಯೇ ಹಾಡಿ ಮುಗಿಸುತ್ತಾನೆ ಈ ಬಾಲಕ, ಇದಲ್ಲದೆ ನಾಡಗೀತೆ, 1ರಿಂದ 50ರವರೆಗಿನ ಸಂಖ್ಯೆ, ಭಕ್ತಿಗೀತೆ, ಗಣಿತ ಮಗ್ಗಿ, ದೇಶದ ಎಲ್ಲ ರಾಜ್ಯಗಳ ಹೆಸರು, ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಹೆಸರು, ಎಲ್ಲ ಭೂಖಂಡಗಳ ಹೆಸರು, ತರಕಾರಿ ಮತ್ತು ಪ್ರಾಣಿಗಳ ಹೆಸರು, ಇಂಗ್ಲಿಷ್‌ ವರ್ಣಮಾಲೆ. ಕನ್ನಡ ವರ್ಣಮಾಲೆಯನ್ನು ತಡವರಿಸದೇ ಹೇಳುತ್ತಾನೆ.

ತಾಯಿಯೇ ಗುರು: ಬಾಲಕನ ತಂದೆ ಮುರಳಿ ಕೃಷ್ಣ ಅವರು ಸಾಫ್ಟ್ವೇರ್‌ ಇಂಜಿನಿಯರ್. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ, ತಾಯಿ ಶೃತಿ ಅವರೇ ಈ ಪುಟ್ಟ ಬಾಲಕನ ಗುರುವಾಗಿದ್ದಾರೆ. ಆದರೆ, ವೇದ್‌ ಸಿದ್ಧಾಂತ್‌ಗೆ ಪ್ರಚಂಡ ಗ್ರಹಿಕಾ ಶಕ್ತಿ ಇದೆ. ಒಮ್ಮೆ ಕೇಳಿದ್ದನ್ನ ನೆನಪಲ್ಲಿಟ್ಟುಕೊಂಡು ಅದನ್ನು ಹಾಗೆಯೇ ಹೇಳುತ್ತಾನೆ ಎಂದು ಹೆಮ್ಮೆಪಡುತ್ತಾರೆ ತಂದೆ ಮುರಳಿಕೃಷ್ಣ.

ಇಂಡಿಯಾ ಬುಕ್ ರೆಕಾರ್ಡ್ ಸೇರಿದ ಸೈನ್ಸ್ ಫೌಂಡೇಷನ್‌ ಪ್ರಾತ್ಯಕ್ಷಿಕೆ

ಈ ಪುಟಾಣಿಗೆ ಗಗನಯಾನಿ ಆಗುವ ಆಸೆ:
ಈ ಪುಟಾಣಿ ಸಾಧಕ ನೀನು ಮುಂದೆ ಏನಾಗುತ್ತೀಯ ಎಂದು ಕೇಳಿದರೆ, ನಾನು ಗಗನಯಾನಿ (ಆಸ್ಟ್ರೋನಟ್‌) ಆಗುತ್ತೇನೆ ಎಂದು ಹೇಳುತ್ತಾನಂತೆ. ಒಟ್ಟಾರೆ, ಅತಿ ಕಿರಿಯ ವಯಸ್ಸಿನಲ್ಲೇ ಅತಿ ದೊಡ್ಡ ಸಾಧನೆ ಮಾಡಿರುವ ಈ ಬಾಲಕ, ಮುಂದೆ ದೊಡ್ಡದೊಡ್ಡ ಸಾಧನೆಗಳೊಂದಿಗೆ ದೇಶಕ್ಕೆ ಹೆಮ್ಮೆ ತರುವಂತಾಗಲಿ ಎಂಬುದು ವಿಜಯಕರ್ನಾಟಕದ ಆಶಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ