ಆ್ಯಪ್ನಗರ

ಶೇ.40ರಷ್ಟು ಜನ ಬಯಲು ಶೌಚ ಪದ್ಧತಿ ಅವಲಂಬನೆ

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇನ್ನು ಶೇ.40 ಜನ ಬಯಲು ಮಲ ಪದ್ಧತಿಯನ್ನು ಅವಲಂಬಿಸಿರುವುದು ವಿಪರ್ಯಾಸ. ಇದರಿಂದಾಗಿ ಪರಿಸರ ಮತ್ತು ನೀರು ಕಲುಷಿತಗೊಳ್ಳುತ್ತಿದ್ದು ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಬಹುಮೇಗ ಹರಡುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ವಿಜಯಕುಮಾರಿ ಹೇಳಿದರು.

Vijaya Karnataka 22 Jul 2019, 2:58 pm
ಬಂಗಾರಪೇಟೆ: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇನ್ನು ಶೇ.40 ಜನ ಬಯಲು ಮಲ ಪದ್ಧತಿಯನ್ನು ಅವಲಂಬಿಸಿರುವುದು ವಿಪರ್ಯಾಸ. ಇದರಿಂದಾಗಿ ಪರಿಸರ ಮತ್ತು ನೀರು ಕಲುಷಿತಗೊಳ್ಳುತ್ತಿದ್ದು ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಬಹುಮೇಗ ಹರಡುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ವಿಜಯಕುಮಾರಿ ಹೇಳಿದರು.
Vijaya Karnataka Web 40 people still using open toilet
ಶೇ.40ರಷ್ಟು ಜನ ಬಯಲು ಶೌಚ ಪದ್ಧತಿ ಅವಲಂಬನೆ


ಪಟ್ಟಣದ ಸಂಗಮ್‌ ರೈಲ್ವೆ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನವ್ಯದಿಶಾ ಹಾಗೂ ಗ್ರಾಮೀಣ ಕೂಟ ಸಹಯೋಗದಲ್ಲಿ ಏರ್ಪಡಿಸಿದ್ದ ನೀರು ಮತ್ತು ನೈರ್ಮಲ್ಯ ವಿಚಾರಗೋಷ್ಠಿಯಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಕಲುಷಿತ ನೀರು ಮತ್ತು ಪರಿಸರದಿಂದಾಗಿ ಮಾನವನಿಗೆ ವಾಂತಿ ಭೇದಿ, ಕಾಲರಾ, ಟೈಫಾಯಿಡ್‌, ಪೋಲಿಯೊ, ಜಾಂಡೀಸ್‌, ಕರುಳುಬೇನೆ, ಜಂತು ಹುಳು, ಜೀರ್ಣಾಂಗದ ತೊಂದರೆಗಳು, ಸಿಡುಬು, ಹೆಪಟೈಟಿಸ್‌ ಸೇರಿದಂತೆ ಹತ್ತಾರು ಕಾಯಿಲೆಗಳು ಬಹುಬೇಗನೆ ಹರಡುತ್ತದೆ. ಇದು ಒಂದು ರೀತಿ ಸಾಂಕ್ರಾಮಿಕ ರೋಗಗಳು ಆದರೆ ಹಲವಾರು ಜನರನ್ನು ಬಲಿತೆಗೆದುಕೊಂಡ ನಂತರವೇ ರೋಗಗಳ ಮಾಯವಾಗುತ್ತದೆ. ಇದಕ್ಕೆ ಜನರು ನಂತರ ತೆಗೆದುಕೊಳ್ಳುವ ಮುಂಜಾಗ್ರತೆ ಕಾರಣ ಇದರಿಂದ ಪ್ರತಿಯೊಬ್ಬರು ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ ಎಂದರು.

ಇಡೀ ಪ್ರಪಂಚದಲ್ಲಿಯೇ ಭಾರತ ದೇಶದಲ್ಲಿ ಪ್ರತಿ ದಿನ ಎರಡು ಸಾವಿರ ಮಕ್ಕಳು ಅತಿಸಾರ ಭೇದಿಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಇದು ಅತಿ ದೊಡ್ಡ ದುರಂತ ಇದಕ್ಕೆ ಕಾರಣವೇ ನಾವು ಬಳಸುವ ನೀರು ಅದನ್ನು ತಪ್ಪಿಸಲು ಶುದ್ಧ ನೀರು ಅವಶ್ಯಕತೆಯಿದೆ. ಆದರೆ ಪರಿಸರ ಮಾಲಿನ್ಯದಿಂದ ಈಗ ಸಿಗುವ ನೀರು, ಗಾಳಿ ವಿಷವಾಗಿದೆ. ಕಾಯಿಲೆಗಳಿಂದ ತಪ್ಪಿಸಿಕೊಂಡು ಆರೋಗ್ಯಕರವಾಗಿ ಮತ್ತು ಗೌರವಯುತವಾಗಿ ಸಮಾಜದಲ್ಲಿ ಜೀವನ ಮಾಡಬೇಕಾದರೆ ಶುದ್ಧ ನೀರನ್ನು ಸೇವಿಸಿ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿ ಬಳಸಬೇಕು ಎಂದರು.

ಡೆಂಗೆ ಜ್ವರದ ಎಚ್ಚರ:
ಆರೋಗ್ಯ ಇಲಾಖೆಯ ಅಧಿಕಾರಿ ಆದರ್ಶ ಮಾತನಾಡಿ, ಡೆಂಗೆ ಜ್ವರವು ಡೆಂಗೆ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು ಈಡೀಸ್‌ ಸೊಳ್ಳೆ ಕಚ್ಚಿದರೆ ಡೆಂಗೆ ಮತ್ತು ಚಿಕೂನ್‌ ಗುನ್ಯಾ ಜ್ವರ ಹರಡಿ ಜೀವಕ್ಕೆ ಕುತ್ತಾಗುವ ಸಂಭವ ಜಾಸ್ತಿ. ಈಡೀಸ್‌ ಜಾತಿಯ ಸೊಳ್ಳೆ ಹಗಲು ವೇಳೆ ಕಚ್ಚುವುದರಿಂದ ಜ್ವರ ಬಂದು ನಂತರ ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುತ್ತದೆ ಎಂದರು.

ಅರಣ್ಯಾಧಿಕಾರಿ ಸಾವಿತ್ರಿ ಮಾತನಾಡಿ ಜಗತ್ತಿನಲ್ಲಿ ಜನಸಂಖ್ಯೆ ಏರುತ್ತಿದೆ. ಅದರಂಂತೆ ಕಾಡುಗಳನ್ನು ನಾಶ ಮಾಡಲಾಗುತ್ತಿದೆ. ಅಭಿವೃದ್ಧಿ ನೆಪದಲ್ಲಿ ಮರಗಿಡಗಳನ್ನು ಕಡಿಯಲಾಗುತ್ತಿದೆ. ಇದರಿಂದ ಪ್ರಕೃತಿ ವಿಕೋಪ ಹೆಚ್ಚಾಗುತ್ತಿದೆ. ಈಗಲೂ ಜನರು ಜಾಗೃತಗೊಂಡು ಗಿಡಮರ ಬೆಳೆಸಿ ಸುತ್ತಮುತ್ತಲಿನ ಪರಿಸರ ಉಳಿಸುವ ಕೆಲಸ ಮಾಡಿದರೇ ಉತ್ತಮ ಆರೋಗ್ಯ ಸಿಗುವಲ್ಲಿ ಸಂಶಯವಿಲ್ಲ ಎಂದರು.

ಈ ಸಂದರ್ಭದಲ್ಲಿ 300 ಸಸಿಗಳನ್ನು ಇಲಾಖೆ ವತಿಯಿಂದ ಸಾರ್ವಜನಿಕರಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ನವ್ಯಾದಿಶ ಶಾಖಾ ವ್ಯವಸ್ಥಾಕ ಸುರೇಶ್‌ ಕುಮಾರ್‌, ಕೆ.ಜಿ.ಎಫ್‌ ವ್ಯವಸ್ಥಾಪಕ ಮೋಹನ್‌ ಕುಮಾರ್‌, ಅಡ್ಮಿನ್‌ ಮ್ಯಾನೇಜರ್‌ ಉಮೇಶ್‌, ಕೋಲಾರ ವಲಯದ ವ್ಯವಸ್ಥಾಪಕ ಕೆ.ಪಿ ಸಂದೇಶ್‌, ಶ್ರೀಧರ್‌, ಕೆಂಪರಾಜು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ