ಆ್ಯಪ್ನಗರ

ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷಾ ಪರೀಕ್ಷೆಗೆ 623 ಮಂದಿ ಗೈರುಹಾಜರಿ

ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷಾ ಪರೀಕ್ಷೆ ಜಿಲ್ಲೆಯ ಒಟ್ಟು 71 ಕೇಂದ್ರಗಳಲ್ಲಿ ನಡೆದಿದ್ದು, 19082 ಮಂದಿ ಹಾಜರಾಗಿದ್ದು, 562 ಮಂದಿ ಗೈರುಹಾಜರಾಗಿದ್ದಾರೆ ಎಂದು ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌ ತಿಳಿಸಿದ್ದಾರೆ.

Vijaya Karnataka 28 Mar 2019, 5:00 am
ಕೋಲಾರ: ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷಾ ಪರೀಕ್ಷೆ ಜಿಲ್ಲೆಯ ಒಟ್ಟು 71 ಕೇಂದ್ರಗಳಲ್ಲಿ ನಡೆದಿದ್ದು, 19082 ಮಂದಿ ಹಾಜರಾಗಿದ್ದು, 562 ಮಂದಿ ಗೈರುಹಾಜರಾಗಿದ್ದಾರೆ ಎಂದು ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌ ತಿಳಿಸಿದ್ದಾರೆ.
Vijaya Karnataka Web 623 absent for sslc second langauage exam
ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷಾ ಪರೀಕ್ಷೆಗೆ 623 ಮಂದಿ ಗೈರುಹಾಜರಿ


ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 19,644 ಮಂದಿ ಪೈಕಿ 19,082 ಮಂದಿ ಹಾಜರಾಗಿದ್ದು, ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದೆ.

ಬಂಗಾರಪೇಟೆ ತಾಲೂಕಿನಲ್ಲಿ 10 ಕೇಂದ್ರಗಳಲ್ಲಿ 2,999 ಮಂದಿ ನೋಂದಾಯಿಸಿದ್ದು, 2,919 ಮಂದಿ ಹಾಜರಾಗಿ 80 ಮಂದಿ ಗೈರಾಗಿದ್ದಾರೆ. ಕೆಜಿಎಫ್‌ ವಲಯದ 10 ಕ್ಷೇತ್ರಗಳಲ್ಲಿ 2,639 ಮಕ್ಕಳು ಹೆಸರು ನೋಂದಾಯಿಸಿದ್ದು, 2603 ಮಂದಿ ಹಾಜರಾಗಿ 36 ಮಂದಿ ಗೈರುಹಾಜರಾಗಿದ್ದಾರೆ.

ಕೋಲಾರ ತಾಲೂಕಿನ 17ಕೇಂದ್ರಗಳಲ್ಲಿ 5,472 ಮಂದಿ ಹೆಸರು ನೋಂದಾಯಿಸಿದ್ದು, 5,283 ಮಂದಿ ಹಾಜರಾಗಿ 189 ಮಂದಿ ಗೈರಾಗಿದ್ದಾರೆ. ಮಾಲೂರು ತಾಲೂಕಿನ 10 ಕೇಂದ್ರಗಳಲ್ಲಿ 2879 ಮಂದಿ ಹೆಸರು ನೋಂದಾಯಿಸಿದ್ದು, 2774 ಮಂದಿ ಹಾಜರಾಗಿದ್ದು, 105 ಮಂದಿ ಗೈರಾಗಿದ್ದಾರೆ.

ಮುಳಬಾಗಿಲು ತಾಲೂಕಿನ 11 ಕೇಂದ್ರಗಳಲ್ಲಿ ಒಟ್ಟು 2994 ಮಂದಿ ನೋಂದಾಯಿಸಿದ್ದು, 2904 ಮಂದಿ ಹಾಜರಾಗಿದ್ದು, 90 ಮಂದಿ ಗೈರಾಗಿದ್ದಾರೆ. ಶ್ರೀನಿವಾಸಪುರ ತಾಲೂಕಿನ 13 ಕೇಂದ್ರಗಳಲ್ಲಿ ಒಟ್ಟು 2661 ಮಂದಿ ಹೆಸರು ನೋಂದಾಯಿಸಿದ್ದು, 2599 ಮಂದಿ ಹಾಜರಾಗಿದ್ದು, 62 ಮಂದಿ ಗೈರಾಗಿದ್ದಾರೆ.

ಸಮಾಜವಿಜ್ಞಾನ; ಮಕ್ಕಳಿಗೆ ಸಲಹೆಗಳು: ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಮಾ.29 ರಂದು ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ಉತ್ತಮ ಅಂಕ ಗಳಿಕೆಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ನೋಡೆಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌ ಕೆಲವು ಸಲಹೆ ನೀಡಿದ್ದಾರೆ.

ಸಮಾಜವಿಜ್ಞಾನ ವಿಷಯದಲ್ಲಿ ಒಟ್ಟು 80 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಇತಿಹಾಸಕ್ಕೆ 20 ಅಂಕ, ರಾಜ್ಯಶಾಸ್ತ್ರಕ್ಕೆ 11, ಸಮಾಜಶಾಸ್ತ್ರಕ್ಕೆ 8, ಭೂಗೋಳಕ್ಕೆ 25, ಅರ್ಥಶಾಸ್ತ್ರಕ್ಕೆ 8 ಹಾಗೂ ವ್ಯವಹಾರ ಅಧ್ಯಯನಕ್ಕೆ 8 ಅಂಕಗಳಿರುತ್ತವೆ.

1 ಅಂಕದ ಬಹುಆಯ್ಕೆ ಪ್ರಶ್ನೆಗಳು 10, 2 ಅಂಕದ 14 ಪ್ರಶ್ನೆ, 3 ಅಂಕದ 6 ಪ್ರಶ್ನೆ, 4 ಅಂಕದ 2 ಪ್ರಶ್ನೆಗಳಿದ್ದು, 3 ಅಂಕದ ಪ್ರಶ್ನೆಗಳಿಗೆ ಆಂತರಿಕೆ ಆಯ್ಕೆ ಇರುತ್ತದೆ ಎಂದು ತಿಳಿಸಿರುವ ಅವರು ಒಟ್ಟು 47ಪ್ರಶ್ನೆಗಳಿರುತ್ತವೆ ಎಂದು ತಿಳಿಸಿದ್ದಾರೆ.

ಸಮಯ ಸದ್ಬಳಕೆ ಮಾಡಿಕೊಳ್ಳಿ, ನಿರಂತರ ಅಭ್ಯಾಸ ಮಾಡಿ, ಪ್ರಶ್ನೆಪತ್ರಿಕೆ ಓದಿ ಸುಲಭ ಪ್ರಶ್ನೆಗಳನ್ನು ಗುರುತು ಹಾಕಿಕೊಂಡು ಮೊದಲು ಉತ್ತರಿಸಿ, ಕಷ್ಟವಾದ್ದನ್ನು ನಂತರ ಯೋಚಿಸಿ ಬರೆಯಿರಿ ಎಂದು ಸಲಹೆ ನೀಡಿದ್ದಾರೆ.

ಘಟನೆ, ಇಸವಿಗಳ ಬಗ್ಗೆ ಗೊಂದಲ ಬೇಡ ಆಲೋಚನೆ ಮಾಡಿ ಬರೆಯಿರಿ, ಭೂಪಟಕ್ಕೆ 4 ಅಂಕ ಇದ್ದು, ಬರೆಯುವುದನ್ನು ಅಭ್ಯಾಸ ಮಾಡಿಕೊಂಡು ಬನ್ನಿ ಎಂದು ಸಲಹೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ