ಆ್ಯಪ್ನಗರ

ಅರಾಭಿಕೊತ್ತನೂರಿನಲ್ಲಿ ಹುಲ್ಲಿನ ಮೇದೆಗಳಿಗೆ ಆಕಸ್ಮಿಕ ಬೆಂಕಿ

ಆಕಸ್ಮಿಕ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಹುಲ್ಲಿನ ಮೇದೆಗಳು ಅಗ್ನಿಗೆ ಆಹುತಿಯಾದ ಘಟನೆ ತಾಲೂಕಿನ ಅರಾಭಿಕೊತ್ತನೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.

Vijaya Karnataka 15 Jun 2019, 5:00 am
ಕೋಲಾರ: ಆಕಸ್ಮಿಕ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಹುಲ್ಲಿನ ಮೇದೆಗಳು ಅಗ್ನಿಗೆ ಆಹುತಿಯಾದ ಘಟನೆ ತಾಲೂಕಿನ ಅರಾಭಿಕೊತ್ತನೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
Vijaya Karnataka Web accidental fire to the grassy holes in ararikothanoor
ಅರಾಭಿಕೊತ್ತನೂರಿನಲ್ಲಿ ಹುಲ್ಲಿನ ಮೇದೆಗಳಿಗೆ ಆಕಸ್ಮಿಕ ಬೆಂಕಿ


ಗ್ರಾಮದ ಸೋಮನಾಥೇಶ್ವರ ಸ್ವಾಮಿ ಸಮುದಾಯ ಭವನದ ಸಮೀಪವಿದ್ದ ಡೇರಿ ಶಿವಣ್ಣ, ಎ.ಸಿ.ನಾರಾಯಣಸ್ವಾಮಿ, ಸಾಗರ್‌ ಎಂಬುವವರಿಗೆ ಸೇರಿದ ಈ ಒಣಹುಲ್ಲಿನ ಮೇದೆಗಳು ಸುಟ್ಟು ಭಸ್ಮವಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

ಕಳೆದೆರಡು ತಿಂಗಳ ಹಿಂದೆಯಷ್ಟೇ ಗ್ರಾಮದ ಹೊರವಲಯದಲ್ಲಿ ನಾಲ್ಕು ಹುಲ್ಲಿನ ಮೇದೆಗಳು ಅಗ್ನಿಗೆ ಆಹುತಿಯಾದ ಘಟನೆ ಮರೆಯಾಗುವ ಮುನ್ನವೇ ಗ್ರಾಮದ ಮಧ್ಯಭಾಗದಲ್ಲಿ ಸಮುದಾಯದ ಸಮೀಪವೇ ಮತ್ತೊಂದು ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಯಿತು.

ಮಳೆಯ ಅಭಾವದಿಂದಾಗಿ ರಾಸುಗಳಿಗೆ ಮೇವಿನ ಸಮಸ್ಯೆ ಇರುವ ಸಂದರ್ಭದಲ್ಲೇ ಡೇರಿ ಶಿವಣ್ಣ ಅವರಿಗೆ ಸೇರಿದ 2 ಲೋಡ್‌, ಎ.ಸಿ.ನಾರಾಯಣಸ್ವಾಮಿ ಅವರಿಗೆ ಸೇರಿದ 2 ಲೋಡ್‌ ಹಾಗೂ ಸಾಗರ್‌ ಎಂಬುವವರಿಗೆ 1 ಲೋಡ್‌ ಹುಲ್ಲು ಭಸ್ಮವಾಗಿರುವುದು ರೈತರ ದುಃಖಕ್ಕೆ ಕಾರಣವಾಗಿದೆ.

ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರಾದರೂ ಆ ವೇಳೆಗೆ ಹುಲ್ಲಿನ ಮೇದೆಗಳು ಸಂಪೂರ್ಣ ಭಸ್ಮವಾಗಿದ್ದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ